ಆ್ಯಪ್ನಗರ

ಸೇನೆ ಹೇಳಿದ್ದನ್ನೂ ನಂಬುದಿಲ್ಲವೇ ?: ಪ್ರತಿಪಕ್ಷಕ್ಕೆ ಮೋದಿ ತಿರುಗೇಟು

ನಮ್ಮ ಸೇನೆ ಹೇಳಿದ ವಿಚಾರಗಳನ್ನು ನೀವು ನಂಬುವುದಿಲ್ಲವೇ ಎಂದು ಪ್ರತಿಪಕ್ಷಕ್ಕೆ ಪ್ರಶ್ನೆ ಇಟ್ಟಿರುವ ನರೇಂದ್ರ ಮೋದಿ, ದೇಶದ ಜನತೆ ದಾಳಿಯನ್ನು ಒಪ್ಪಿಕೊಂಡಿದೆ ಮಾತ್ರವಲ್ಲದೆ, ಅಲ್ಲಿದ್ದ ಅನೇಕ ಉಗ್ರರನ್ನು ಸೇನೆ ಸದಬಡಿದಿರುವುದನ್ನು ನಂಬಿದ್ದಾರೆ ಎಂದು ಹೇ:ಇದ್ದಾರೆ.

Times Now 4 Mar 2019, 6:47 pm
[This story originally published in Timesnownews.com on March 04,2019]
Vijaya Karnataka Web modi

ಜಮ್‌ನಗರ್‌: ಸೇನಾಪಡೆಯ ಮೇಲೆ ನಿಮಗೆ ನಂಬಿಕೆ ಇಲ್ಲವೇ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷ ನಾಯಕರನ್ನು ಪ್ರಶ್ನಿಸಿದ್ದಾರೆ.

ಫೆ.26ರಂದು ಪಾಕಿಸ್ತಾನದ ಬಾಲಕೋಟ್‌ನಲ್ಲಿನ ಜೈಷೆ ಉಗ್ರರ ತರಬೇತಿ ಕೇಂದ್ರಗಳಿಗೆ ವೈಮಾನಿಕ ದಾಳಿ ನಡೆಸಿದ ವಿಚಾರದ ಬಗ್ಗೆ ಅನೇಕ ಪ್ರತಿಪಕ್ಷ ನಾಯಕರು ಅನುಮಾನ ವ್ಯಕ್ತಪಡಿಸಿದ್ದರು. ಸೋಮವಾರ ವಾಯುಸೇನೆ ಮುಖ್ಯಸ್ಧ ಬಿಎಸ್‌ ಧನೋವಾ, ನಮ್ಮ ಗುರಿಯನ್ನು ನಾವು ಸಾಧಿಸಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರು. ಇದಕ್ಕೆ ಪೂರಕವಾಗಿ ಪ್ರಧಾನಿ ಮೋದಿ, ಪ್ರತಿಪಕ್ಷಗಳ ಅನುಮಾನಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಗುಜರಾತ್‌ನ ಜಮ್‌ನಗರದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸೇನಾ ಕಾರ್ಯಾಚರಣೆಯನ್ನು ಅನುಮಾನಿಸುತ್ತಿದೆ. ಅಲ್ಲದೆ ಸೇನೆ ನೀಡಿದ ಮಾಹಿತಿಯ ಬಗ್ಗೆ ಶಂಕಿಸುತ್ತಿದೆ. ಇಡೀ ದೇಶವೇ ಉಗ್ರರ ಮೇಲೆ ನಡೆದ ದಾಳಿಗೆ ಬೆಂಬಲ ಸೂಚಿಸಿದ್ದಾರೆ. ಯೋಧರ ಬಲಿದಾನಕ್ಕೆ ಸೂಕ್ತ ಉತ್ತರ ನೀಡಿರುವುದಾಗಿ ಜನ ನಂಬಿದ್ದಾರೆ ಎಂದು ಮೋದಿ ಹೇಳಿದ್ದಾರೆ.


ನಮ್ಮ ಸೇನೆ ಹೇಳಿದ ವಿಚಾರಗಳನ್ನು ನೀವು ನಂಬುವುದಿಲ್ಲವೇ ಎಂದು ಪ್ರತಿಪಕ್ಷಕ್ಕೆ ಪ್ರಶ್ನೆ ಇಟ್ಟಿರುವ ನರೇಂದ್ರ ಮೋದಿ, ದೇಶದ ಜನತೆ ದಾಳಿಯನ್ನು ಒಪ್ಪಿಕೊಂಡಿದೆ ಮಾತ್ರವಲ್ಲದೆ, ಅಲ್ಲಿದ್ದ ಅನೇಕ ಉಗ್ರರನ್ನು ಸೇನೆ ಸದಬಡಿದಿರುವುದನ್ನು ನಂಬಿದ್ದಾರೆ. ನಮ್ಮ ದೇಶದ ಸೈನಿಕರ ಬಗ್ಗೆ ಹೆಮ್ಮೆ ಇರಬೇಕು ಎಂದು ಮೋದಿ ಪ್ರತಿಪಕ್ಷ ನಾಯಕರಿಗೆ ಟಾಂಗ್‌ ನೀಡಿದ್ದಾರೆ.

ಈ ಹಿಂದೆ ವೈಮಾನಿಕ ದಾಳಿ ನಡೆದಿರುವ ಬಗ್ಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಕಾಂಗ್ರೆಸ್‌ ನ ಕೆಲ ನಾಯಕರೂ ಶಂಕೆ ವ್ಯಕ್ತಪಡಿಸಿ, ಹೇಳಿಕೆ ನೀಡಿದ್ದರು.

ದಾಳಿ ನಡೆಸುವ ವೇಳೆ ನಮ್ಮ ಗುರಿ ಯಶಸ್ವಿಯಾಗಿದೆಯೇ ಎಂಬುದನ್ನು ಖಚಿತಪಡಿಸುತ್ತೇವೆಯೇ ಹೊರತು, ಎಷ್ಟು ಮಂದಿ ಹತರಾಗಿದ್ದಾರೆ ಎಂಬುದನ್ನು ಲೆಕ್ಕಹಾಕುವುದಿಲ್ಲ. ಸರಕಾರ ಈ ವಿವರಗಳನ್ನು ನೀಡಬಲ್ಲದು ಎಂದು ಧನೋವಾ ಹೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ