ಆ್ಯಪ್ನಗರ

ಜನಸೇವೆಯೇ ಪ್ರಭು ಸೇವಾ : ಕೇದಾರನಾಥದಲ್ಲಿ ನಮೋ

ಕೇದಾರನಾಥಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ.

TNN 20 Oct 2017, 12:21 pm
ಕೇದರಾನಾಥ: ಜನಸೇವೆಯೇ ಪ್ರಭು ಸೇವೆ. ಭೋಲೆ ಬಾಬಾನ ಆರ್ಶೀರ್ವಾದ ಪಡೆದು ದೇಶಸೇವೆ ಮಾಡಲು ಮತ್ತಷ್ಟು ಸಜ್ಜಾಗಿದ್ದೇನೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
Vijaya Karnataka Web pm modi in kedarnath
ಜನಸೇವೆಯೇ ಪ್ರಭು ಸೇವಾ : ಕೇದಾರನಾಥದಲ್ಲಿ ನಮೋ


ಸಮುದ್ರ ಮಟ್ಟಕ್ಕಿಂತ 11,660 ಅಡಿ ಮೇಲಿರುವ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ ನಂತರ ಸಾರ್ವಜನಿಕ ಸಮಾರಂಭ ಉದ್ದೇಶಿಸಿ ಮೋದಿ ಭಾಷಣ ಮಾಡಿದರು.

2022ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷವಾಗುತ್ತದೆ. ಈ ವೇಳೆಗೆ ದೇಶವನ್ನು ಅಭಿವೃದ್ಧಿ ದೇಶವನ್ನಾಗಿಸಲು ಸಂಕಲ್ಪ ತೊಟ್ಟಿದ್ದೇನೆ ಎಂದರು.

ಹಿಮಾಲಯ ಸಾಕಷ್ಟು ವೈವಿಧ್ಯವನ್ನು ಹೊಂದಿದೆ. ಇಲ್ಲಿ ಆಧ್ಯಾತ್ಮಿಕತೆ ಇದೆ, ಸಾಹಸಿಗರಿಗೆ ಟ್ರಕ್ಕಿಂಗ್‌ ಅವಕಾಶವಿದೆ. ಸೌಂದರ್ಯ ಆರಾಧಾಕರಿಗೆ ಪ್ರಕೃತಿಯ ವಿಸ್ಮಯ ಇದೆ. ಹೀಗೆ ವೈವಿಧ್ಯತೆಗಳನ್ನು ಒಳಗೊಂಡಿರುವ ಹಿಮಾಲಯ ಹಾಗೂ ಅದರ ಜತೆ ಇರುವ ಪುಣ್ಯ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.

ಕೇದಾರನಾಥ ನಾಲ್ಕು ವರ್ಷಗಳ ಹಿಂದೆ ಪ್ರವಾಹದಿಂದ ಭಾರಿ ಹಾನಿಗೊಳಗಾಗಿತ್ತು. ಅದಕ್ಕೆ ಪುನರುಜ್ಜೀವನ ನೀಡಲು ಕೇಂದ್ರ ಸರಕಾರ ಪಣತೊಟ್ಟಿದೆ. ಭೋಲೆಬಾಬಾನ ಈ ದಿವ್ಯ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಅದೇ ರೀತಿ ಪರಿಸರ ರಕ್ಷಣೆಗೂ ಒತ್ತು ನೀಡಲಾಗುವುದು ಎಂದು ಮೋದಿ ಭರವಸೆ ನೀಡಿದರು.

ಇಡೀ ವಿಶ್ವಕ್ಕೆ ಕೇದಾರನಾಥ ಕ್ಷೇತ್ರದ ಮಹತ್ವ ಸಾರಲಾಗುವುದು. ಮಾದರಿ ತೀರ್ಥ ಕ್ಷೇತ್ರವನ್ನಾಗಿ ಕೇದಾರನಾಥವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಮೋದಿ ಹೇಳಿದರು.

ಸ್ವಚ್ಛತೆಯನ್ನು ಕಾಪಾಡಬೇಕಾಗುವುದು ನಮ್ಮಲ್ಲರ ಕರ್ತವ್ಯ. ಇದಕ್ಕೆ ನಾವು ಕೈ ಜೋಡಿಸಿದರೆ ಬಹುತೇಕ ಎಲ್ಲ ಕ್ಷೇತ್ರಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ ಎಂದು ಪ್ರಧಾನಿ ತಿಳಿಸಿದರು.

ಎರಡನೇ ಬಾರಿಗೆ ಕೇದಾರನಾಥಕ್ಕೆ ಮೋದಿ ಭೇಟಿ ನೀಡಿದ್ದಾರೆ. ಕಳೆದ ಮೇ 3ರಂದು ಕೇದಾರನಾಥಕ್ಕೆ ಮೋದಿ ಆಗಮಿಸಿದ್ದರು.

PM Modi in Kedarnath

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ