ಆ್ಯಪ್ನಗರ

ಎರಡು ದಿನಗಳ ಧರ್ಮಶಾಲಾ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಮೋದಿ ಚಾಲನೆ

ಬಂಡವಾಳ ಸೆಳೆಯುವಲ್ಲಿ ರಾಜ್ಯಗಳ ನಡುವಿನ ಸ್ಪರ್ಧೆಯು ದೇಶದ ಉದ್ಯಮ ವಲಯದ ಬೆಳವಣಿಗೆಗೆ ಸಹಾಯಕವಾಗಿದೆ. ಇದರಿಂದ ದೇಶದ ಉದ್ಯಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಧರ್ಮಶಾಲಾ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಹೇಳಿದ್ದಾರೆ.

TIMESOFINDIA.COM 7 Nov 2019, 4:04 pm
ಧರ್ಮಶಾಲಾ: ಈ ಹಿಂದೆ ಇಂತಹ ಬೃಹತ್‌ ಬಂಡವಾಳ ಹೂಡಿಕೆದಾರರ ಸಮಾವೇಶಗಳ ಕೆಲವೇ ನಗರಗಳಿಗೆ ಸೀಮಿತವಾಗಿದ್ದವು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಪ್ರತಿಯೊಂದು ರಾಜ್ಯವೂ ಉದ್ಯಮಗಳನ್ನು ಮತ್ತು ಹೂಡಿಕೆಯನ್ನು ಸೆಳೆಯಲು ಸ್ಪರ್ಧೆಯಲ್ಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
Vijaya Karnataka Web pm modi inaugurates two day global investors meet in himachal pradesh
ಎರಡು ದಿನಗಳ ಧರ್ಮಶಾಲಾ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಮೋದಿ ಚಾಲನೆ


ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯುತ್ತಿರುವ ಎರಡು ದಿನಗಳ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಗುರುವಾರ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.

ನನ್ನನ್ನು ಗಡೀಪಾರು ಮಾಡಿದರೆ, ನಾನಿಲ್ಲ ಎಂದಾಗುವುದು: ಯುಕೆ ಕೋರ್ಟ್‌ಗೆ ನೀರವ್‌ ಮೋದಿ ಹೇಳಕೆ

ಬಂಡವಾಳ ಸೆಳೆಯುವಲ್ಲಿ ರಾಜ್ಯಗಳ ನಡುವಿನ ಸ್ಪರ್ಧೆಯು ದೇಶದ ಉದ್ಯಮ ವಲಯದ ಬೆಳವಣಿಗೆಗೆ ಸಹಾಯಕವಾಗಿದೆ. ಇದರಿಂದ ದೇಶದ ಉದ್ಯಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿವೆ. ಈ ಸಮಾವೇಶ ಪ್ರಮುಖವಾಗಿ ಸ್ವಯಮ ಉದ್ಯೋಗಕ್ಕೆ ಬಂಡವಾಳ ಸೆಳೆಯುವ ಮಹತ್ವಾಕಾಂಕ್ಷೆ ಹೊಂದಿದೆ ಎಂದು ಹೇಳಿದರು.

ಡಿಮಾನಿಟೈಸೇಷನ್‌ ಮೂರು ವರ್ಷ: ಕೇಂದ್ರಕ್ಕೆ ಮಗ್ಗುಲ ಮುಳ್ಳಾದ ನೋಟು ರದ್ದು

ಇತ್ತೀಚೆಗಷ್ಟೇ ಸುಲಲಿತ ಉದ್ಯಮ ಸೂಚ್ಯಂಕವು (ಈಸ್‌ ಆಫ್ ಡೂಯಿಂಗ್‌ ಬಿಜಿನೆಸ್‌ ಇಂಡೆಕ್ಸ್‌) ಏರಿಕೆಯಾಗಿದೆ. ಇದು ಸರ್ಕಾರದ ನಿರ್ಧಾರಗಳು ದೇಶದ ಉದ್ಯಮಗಳ ಬೆಳವಣಿಗೆಗೆ ಪೂರಕವಾಗಿವೆ ಎಂಬುದನ್ನು ಸೂಚಿಸುತ್ತವೆ ಎಂದರು.



ಉತ್ಪಾದನೆ ಮತ್ತು ಉದ್ಯೋಗಾವಕಾಶ ಹೆಚ್ಚಿಸುವುದು ಈ ಸಮಾವೇಶದ ಪ್ರಮುಖ ಉದ್ದೇಶವಾಗಿದೆ. ಅದರಲ್ಲೂ ಸ್ವಯಂ ಉದ್ಯೋಗಕ್ಕೆ ಬಂಡವಾಳ ಹೂಡಿಕೆ ಅವಕಾಶಗಳನ್ನು ಪ್ರದರ್ಶಿಸುವ ಸಲುವಾಗಿ ಎರಡು ದಿನಗಳ ಅಮಾವೇಶ ಏರ್ಪಡಿಸಲಾಗಿದೆ.

ಪ್ಯಾರಿಸ್‌ ಒಪ್ಪಂದದಿಂದ ಅಮೆರಿಕ ಹಿಂದೆ ಸರಿದಿದ್ದಕ್ಕೆ ಚೀನಾ-ಫ್ರಾನ್ಸ್‌ ಅಸಮಾಧಾನ, ಬದ್ದತೆ ಪ್ರದರ್ಶನ

ಯಾವ ಕ್ಷೇತ್ರಗಳಿಗೆ ಪ್ರಾಮುಖ್ಯತೆ:
ಕೃಷಿ ಚಟುವಟಿಕೆ, ಸುಗ್ಗಿ ನಂತರದ ತಂತ್ರಜ್ಞಾನ, ಉತ್ಪಾದನೆ ಮತ್ತು ತಂತ್ರಜ್ಞಾನ, ಔಷಧ, ಪ್ರವಾಸೋದ್ಯಮ ಮತ್ತು ಉಪಚಾರ, ನಾಗರಿಕ ವಿಮಾನಯಾನ, ಜಲ ಮತ್ತು ನವೀಕರಿಸಬಹುದಾದ ಇಂಧನ, ಆರೋಗ್ಯ ಮತ್ತು ಆಯುಷ್‌, ವಸತಿ ಮತ್ತು ನಗರಾಭಿವೃದ್ಧಿ, ಐಟಿ- ಐಟಿಇಎಸ್‌ ಮತ್ತು ಎಲೆಕ್ಟ್ರಾನಿಕ್ಸ್‌, ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿ ಈ ವಲಯಗಳಲ್ಲಿ ಹೆಚ್ಚು ಬಂಡವಾಳ ಸೆಳೆಯಲು ಉದ್ದೇಶಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ