ಆ್ಯಪ್ನಗರ

ಪ್ರಧಾನಿ ಮೋದಿಯಿಂದ ರೈತರಿಗೆ ಬಂಪರ್: ಕೃಷಿ ನೆರವಿಗೆ 1 ಲಕ್ಷ ಕೋಟಿ ಪ್ರಕಟ, ರೈತರಿಗೆ ಏನು ಸೌಲಭ್ಯ?

ಕೃಷಿ ಮೂಲ ಸೌಕರ್ಯ ಸುಧಾರಣೆ ಹಾಗೂ ಕೃಷಿಕರ ಆದಾಯ ಹೆಚ್ಚಳ ಗುರಿಯೊಂದಿಗೆ 1 ಲಕ್ಷ ರೂ. ಸಾಲ ಯೋಜನೆಯನ್ನು ಪ್ರಧಾನಿ ಮೋದಿ ನೇತೃತ್ವದ ಸರಕಾರ ಪ್ರಕಟಿಸಿದೆ. ಈ ಮೂಲಕ ಕೊರೊನಾದಿಂದ ಉತ್ಸಾಹವನ್ನೇ ಕಳೆದುಕೊಂಡಿರುವ ದೇಶದ ಬೆನ್ನೆಲುಬು ರೈತನ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

Vijaya Karnataka Web 10 Aug 2020, 9:33 am
ಹೊಸದಿಲ್ಲಿ: ಕೊರೊನಾ ಸಂಕಷ್ಟದಿಂದ ಕಂಗಾಲಾಗಿರುವ ರೈತರ ನೆರವಿಗೆ ಧಾವಿಸಿರುವ ಕೇಂದ್ರ ಸರಕಾರ, ಕೃಷಿ ಮೂಲ ಸೌಕರ್ಯ ಸುಧಾರಣೆ ಹಾಗೂ ಕೃಷಿಕರ ಆದಾಯ ಹೆಚ್ಚಳ ಗುರಿಯೊಂದಿಗೆ 1 ಲಕ್ಷ ರೂ. ಸಾಲ ಯೋಜನೆಯನ್ನು ಪ್ರಕಟಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕಟಾವು ನಂತರದ ದಾಸ್ತಾನು ವ್ಯವಸ್ಥೆ ಸುಧಾರಣೆ ಹಾಗೂ ಮಾರುಕಟ್ಟೆ ಸಂಪರ್ಕ ಸೌಲಭ್ಯಗಳ ಸುಧಾರಣೆ ಸೇರಿದದಂತೆ ಒಟ್ಟಾರೆ ಮೂಲಸೌಕರ್ಯ ಹೆಚ್ಚಿಸುವ ಉದ್ದೇಶದ ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಚಾಲನೆ ನೀಡಿದರು. ರೈತರ ಪಾಲಿನ ಪವಿತ್ರ ದಿನ ಎಂದು ಹೇಳಲಾಗುವ 'ಬಲರಾಮ್‌ ಜಯಂತಿ'ಯಂದೇ ವಿಡಿಯೊ ಕಾನ್ಫರೆನ್ಸ್‌ ಮೂಲಕ ಈ ಯೋಜನೆಯನ್ನು ಮೋದಿ ಪ್ರಕಟಿಸಿದರು. ''ಕೃಷಿ ಉತ್ಪಾದನೆ ವಿಷಯದಲ್ಲಿ ದೇಶ ಸಂಪನ್ನವಾಗಿದೆ. ಆದರೆ ಕಟಾವು ನಂತರದ ದಾಸ್ತಾನು ಸೌಲಭ್ಯ ಅವ್ಯವಸ್ಥೆಗಳಿಂದ ಕೂಡಿದೆ. ಇದರಿಂದ ರೈತರು ಸೂಕ್ತ ಬೆಲೆಗಾಗಿ ಕಾಯದೆ ಫಸಲು ಮಾರಿ ನಷ್ಟ ಅನುಭವಿಸುತ್ತಿದ್ದಾರೆ. ಈ ಕೊರತೆ ಸರಿ ಪಡಿಸಿ, ರೈತರ ಆದಾಯ ಹೆಚ್ಚಿಸುವ ಪ್ರಯತ್ನ ಈಗ ವೇಗ ಪಡೆದಿದೆ. ಗ್ರಾಮೀಣ ಭಾಗದಲ್ಲಿ ಸುಗ್ಗಿ ನಂತರದ ಸಂಪರ್ಕ ವ್ಯವಸ್ಥೆ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ,'' ಎಂದು ಹೇಳಿದರು.
Vijaya Karnataka Web pm modi launches rs 1 lakh crore agriculture infra fund
ಪ್ರಧಾನಿ ಮೋದಿಯಿಂದ ರೈತರಿಗೆ ಬಂಪರ್: ಕೃಷಿ ನೆರವಿಗೆ 1 ಲಕ್ಷ ಕೋಟಿ ಪ್ರಕಟ, ರೈತರಿಗೆ ಏನು ಸೌಲಭ್ಯ?



ನಿಧಿ ಯಾವುದಕ್ಕೆ ಬಳಸಬಹುದು?

ಇನ್ನು ಪ್ರಧಾನಿ ಮೋದಿ ಘೋಷಿಸಿದ ಈ ವಿನೂತನ ಯೋಜನೆಯ ಅನುದಾನವನ್ನ ಯಾವುದಕ್ಕೆಲ್ಲ ಬಳಸಬಹುದು ಅನ್ನುವ ವಿಚಾರಕ್ಕೆ ಸಂಬಂಧಪಟ್ಟ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಕೃಷಿ ಉತ್ಪನ್ನಗಳ ದಾಸ್ತಾನಿಗೆ ಬೃಹತ್‌ ಉಗ್ರಾಣಗಳ ನಿರ್ಮಾಣ

ಉತ್ಪನ್ನಗಳು ಹಾಳಾಗದಂತೆ ಸಂರಕ್ಷಿಸುವ ಶೈತ್ಯಗಾರಗಳ ವ್ಯವಸ್ಥೆ

ಕೃಷಿ ಉತ್ಪನ್ನಗಳ ಸಾಗಣೆಗೆ ಸಂಪರ್ಕ ವ್ಯವಸ್ಥೆ ಸುಧಾರಣೆ

ಕೃಷಿ ಮೂಲ ಸೌಕರ್ಯ ಹೆಚ್ಚಿಸುವ ಯಾವುದೇ ಉಪಕ್ರಮ

ಜಮ್ಮು-ಕಾಶ್ಮೀರ: ಮತ್ತೋರ್ವ ಬಿಜೆಪಿ ಮುಖಂಡನನ್ನ ಗುಂಡಿಕ್ಕಿ ಕೊಂದ ಉಗ್ರರು!

ಸಾಲ ಯಾರಿಗೆ ಸಿಗುತ್ತೆ?

1 ಲಕ್ಷ ಕೋಟಿ ರೂಪಾಯಿಗಳನ್ನು ಸಾಲ ರೂಪದಲ್ಲಿ ಪ್ರಾಥಮಿಕ ಕೃಷಿ-ಸಾಲ ಸಂಘಗಳು, ರೈತ ಗುಂಪುಗಳು, ರೈತ ಉತ್ಪನ್ನ ಸಂಘಗಳು, ಕೃಷಿ ಉದ್ಯಮಿಗಳು, ಸ್ಟಾರ್ಟ್‌ ಅಪ್‌ಗಳು, ಕೃಷಿ-ತಾಂತ್ರಿಕ ಸಂಸ್ಥೆಗಳಿಗೆ ನೀಡಲಾಗುತ್ತದೆ. ಇದಕ್ಕಾಗಿ ಈಗಾಗಲೇ 11 ಸಾರ್ವಜನಿಕ ವಲಯ ಬ್ಯಾಂಕ್‌ಗಳು ಕೃಷಿ ಇಲಾಖೆ ಜತೆ ಒಪ್ಪಂದ ಮಾಡಿಕೊಂಡಿವೆ. ಮುಂದಿನ 4 ವರ್ಷಗಳ ಅವಧಿಯಲ್ಲಿ ಕಂತು ರೂಪದಲ್ಲಿ ಸಾಲ ವಿತರಣೆಯಾಗಲಿದೆ. ಈ ವರ್ಷ 10,000 ಕೋಟಿ ರೂ. ಬಿಡುಗಡೆಯಾಗಲಿದೆ. ನಂತರದ ಮೂರು ವರ್ಷ ತಲಾ 30,000 ಕೋಟಿ ರೂ. ಬಿಡುಗಡೆಯಾಗಲಿದೆ. ಇನ್ನು ಈ ಯೋಜನೆಯ ಅಡಿಯಲ್ಲಿ 2 ಕೋಟಿ ರೂ.ವರೆಗೆ ಸರಕಾರದಿಂದಲೇ ಸಾಲ ಖಾತರಿ ಇದೆ. ಸಕಾಲದಲ್ಲಿ ಸಾಲ ಮರು ಪಾವತಿಸಿದರೆ 3% ಬಡ್ಡಿ ರಿಯಾಯಿತಿ ದೊರೆಯಲಿದೆ.

ಅಮಿತ್‌ ಶಾಗೆ 2ನೇ ಬಾರಿ ಕೊರೊನಾ ಟೆಸ್ಟ್‌ ನಡೆಸಿಲ್ಲ; ವದಂತಿಗೆ ಗೃಹ ಸಚಿವಾಲಯ ಸ್ಪಷ್ಟನೆ!

ಪಿಎಂ ಕಿಸಾನ್‌ ಕಂತು ವರ್ಗ!

ಪಿಎಂ ಕಿಸಾನ್‌ ಯೋಜನೆಯ 6ನೇ ಕಂತಿನ 17,100 ಕೋಟಿ ರೂ. ಮೊತ್ತ ದೇಶದ 8.5 ಕೋಟಿ ರೈತರ ಬ್ಯಾಂಕ್‌ ಖಾತೆಗಳಿಗೆ ಭಾನುವಾರ ಜಮಾವಣೆಗೊಂಡಿದೆ. ಪ್ರಧಾನಿ ಮೋದಿ, ವಿದ್ಯುನ್ಮಾನ ವ್ಯವಸ್ಥೆ ಮೂಲಕ ಈ ಮೊತ್ತವನ್ನು ರೈತರಿಗೆ ವರ್ಗವಣೆ ಮಾಡಿದರು. ಪ್ರತಿ ರೈತ ಕುಟುಂಬಕ್ಕೆ ವಾರ್ಷಿಕ 6000 ರೂ. ನೇರ ನೆರವು ಕಲ್ಪಿಸುವ ಯೋಜನೆ ಇದಾಗಿದ್ದು, 2018ರಿಂದ ಜಾರಿಯಾಲ್ಲಿದೆ. ರೈತರಿಗೆ ಇದರಿಂದ ತುಂಬಾನೇ ಅನುಕೂಲವಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ