ಆ್ಯಪ್ನಗರ

ನವಿ ಮುಂಬಯಿ ಏರ್‌ಪೋರ್ಟಿಗೆ ರೆಕ್ಕೆ ನೀಡಿದ ಪ್ರಧಾನಿ ಮೋದಿ

ನಾವು ಪ್ರಗತಿಯನ್ನು ಬಯಸಿ ಅಧಿಕಾರ ಸ್ವೀಕರಿಸಿದ್ದೆವು ಹೀಗಾಗಿ ಉತ್ತಮ ಯೋಜನೆಗಳನ್ನು ಪೂರ್ಣಗೊಳಿಸುತ್ತಲಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Vijaya Karnataka Web 18 Feb 2018, 9:25 pm
ಮುಂಬಯಿ: ಕೇಂದ್ರೆದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೂ ಮುನ್ನವೇ ಹಲವಾರು ಯೋಜನೆಯ ದಾಖಲೆಗಳು ಸೃಷ್ಠಿಯಾಗಿದ್ದವು. ಆದರೆ ಯಾವ ಯೋಜನೆಯೂ ಕಾರ್ಯರೂಪಕ್ಕೆ ಬಂದಿರಲಿಲ್ಲ, ನಾವು ಪ್ರಗತಿಯನ್ನು ಬಯಸಿ ಅಧಿಕಾರ ಸ್ವೀಕರಿಸಿದ್ದೆವು. ಹೀಗಾಗಿ ಉತ್ತಮ ಯೋಜನೆಗಳನ್ನು ಪೂರ್ಣಗೊಳಿಸುತ್ತಲಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
Vijaya Karnataka Web pm modi lays foundation stone for navi mumbai international airport
ನವಿ ಮುಂಬಯಿ ಏರ್‌ಪೋರ್ಟಿಗೆ ರೆಕ್ಕೆ ನೀಡಿದ ಪ್ರಧಾನಿ ಮೋದಿ


ನವಿ ಮುಂಬಯಿಯಲ್ಲಿ 17 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ವಿಮಾನ ನಿಲ್ದಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿರುವ ಮೋದಿ, ಜಾಗತೀಕರಣದ ಕುರಿತು ಹೆಚ್ಚು ಪ್ರಾಮುಖ್ಯತೆ ನೀಡಬೇಕಿದ್ದು, ನಮಗೆ ಉನ್ನತ ಗುಣಮಟ್ಟದ ಮೂಲಸೌಕರ್ಯ ಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.

ಕಳೆದ 20-30 ವರ್ಷಗಳಿಂದ ಹಲವಾರು ಸರಕಾರಗಳು ಬಂದು ಹೊಸ ಯೋಜನೆಗಳ ಕುರಿತು ಪೇಪರ್‌ ಕೆಲಸ ಮಾಡಿ ಹಾಗೆಯೇ ಫೇಲ್‌ನಲ್ಲಿ ಇಟ್ಟಿದ್ದವು. ಈ ಹಿಂದಿನ ಸರಕಾರ ಕೂಡಾ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ 10 ಲಕ್ಷ ಕೋಟಿ ಯೋಜನೆ ರೂಪಿಸಿದ್ದವು. ಆದರೆ ಕಾರ್ಯ ರೂಪಕ್ಕೆ ತರಲು ಕೂಡಾ ಸೋತಿದ್ದವು. ನಾವು ಅಧಿಕಾರ ಸ್ವೀಕರಿದ ಬಳಿಕ ಈ ಎಲ್ಲಾ ಯೋಜನೆಗಳು ಚಾಲ್ತಿಗೆ ಬಂದವು.

ಈ ಹಿಂದೆ ಸರಕಾರದ ಮತ್ತು ಖಾಸಗಿ ಒಡೆತನದ 450 ವಿಮಾನಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದವು, ಆದರೆ ಕಳೆದ ಒಂದು ವರ್ಷದಲ್ಲೇ 900 ನೂತನ ವಿಮಾನಗಳು ಹಾರಾಟ ನಡೆಸುತ್ತಿವೆ ಎಂದು ಮೋದಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ