ಆ್ಯಪ್ನಗರ

ಭಾರತದ ಉಕ್ಕಿನ ಮನುಷ್ಯನಿಗೆ 145ನೇ ಜನ್ಮದಿನ: ಪ್ರಧಾನಿ ಮೋದಿಯಿಂದ ಏಕತೆ ಪ್ರತಿಮೆಗೆ ಪುಷ್ಪಾರ್ಚನೆ

ವಾಡಿಯಾದಲ್ಲಿರುವ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆಗೆ ಜಲಾರ್ಚನೆ ಮತ್ತು ಪುಷ್ಪಾರ್ಚನೆಯನ್ನು ಪ್ರಧಾನಿ ಮೋದಿ ಮಾಡುವ ಮೂಲಕ ಗೌರವ ಸಲ್ಲಿಸಿದರು. ಅಮಿತ್‌ ಶಾ ಸೇರಿ ಹಲವು ಗಣ್ಯರು ಇಂದು ಗೌರವ ಸಲ್ಲಿಸಿದ್ದಾರೆ.

Vijaya Karnataka Web 31 Oct 2020, 10:49 am
ಗುಜರಾತ್: ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶನಿವಾರ ಭಾರತದ ಮಾಜಿ ಗೃಹ ಮಂತ್ರಿ ಸರದಾರ ವಲ್ಲಭಾಯ್‌ ಪಟೇಲ್‌ ಅವರ 145ನೇ ಜನ್ಮದಿನ ಹಿನ್ನೆಲೆ ಅವರ ಪ್ರತಿಮೆಗೆ ಪುಷ್ಪಾರ್ಚನೆ ಹಾಗೂ ಜಲಾರ್ಚನೆ ಮಾಡಿದರು.
Vijaya Karnataka Web ElogGCTXIAgedF3


ಇನ್ನು ಸರದಾರ್‌ ಅವರ ಕಾರ್ಯವನ್ನು ಟ್ವೀಟ್‌ ಮೂಲಕ ಕೊಂಡಾಡಿದ ಪ್ರಧಾನಿ ಮೋದಿ, ದೇಶದ ಏಕತೆ ಮತ್ತು ಅಖಂಡತೆಯ ಅಗ್ರಮಾನ್ಯ ಉಕ್ಕಿನ ಮನುಷ್ಯನಿಗೆ ಅವರ ಜನ್ಮ ಶತಾಬ್ಧಿ ಹಿನ್ನೆಲೆ ಶ್ರದ್ದಾಂಜಲಿ ಸಲ್ಲಿಸುತ್ತಿದ್ದೇನೆ ಎಂದು ಟ್ವೀಟ್‌ ಮೂಲಕ ಗೌರವ ಸಲ್ಲಿಸಿದ್ದಾರೆ ತಿಳಿಸಿದ್ದಾರೆ.


ಇದಲ್ಲದೆ ಕೆವಾಡಿಯಾದಲ್ಲಿರುವ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆಗೆ ಜಲಾರ್ಚನೆ ಮತ್ತು ಪುಷ್ಪಾರ್ಚನೆಯನ್ನು ಪ್ರಧಾನಿ ಮೋದಿ ಮಾಡುವ ಮೂಲಕ ಗೌರವ ಸಲ್ಲಿಸಿದರು. ಇಂದು ದೇಶದಾದ್ಯಂತ ಉಕ್ಕಿನ ಮನುಷ್ಯ, ಸರದಾರ್‌ ವಲ್ಲಭಾಯ್‌ ಪಟೇಲ್‌ ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ.

ಪ್ರಧಾನಿ ಮೋದಿ ಟ್ವೀಟ್‌ ಮೂಲಕ ಗೌರವ



ಇನ್ನು ಪಟೇಲರ ಜನ್ಮ ದಿನ ಹಿನ್ನೆಲೆ ಗೃಹ ಸಚಿವ ಅಮಿತ್‌ ಶಾ ಟ್ವೀಟ್‌ ಮೂಲಕ ಗೌರವ ಸಲ್ಲಿಸಿದ್ದು, ನಮ್ಮ ಪ್ರೇರಣಾ ಶಕ್ತಿ ಅವರಿಗೆ ಗೌರವ. ಅವರ ದೇಶ ಭಕ್ತಿ , ಕರ್ತವ್ಯ ನಿಷ್ಠ ನಿಜಕ್ಕೂ ಎಲ್ಲರಿಗೂ ಸ್ಪೂರ್ತಿ ಎಂದಿದ್ದಾರೆ.


ಬಿಹಾರ ಸಿಎಂ ನಿತೀಶ್‌ ಕುಮಾರ್‌ ಕೂಡ ಸರದಾರ ವಲ್ಲಭಾಯ್‌ ಪಟೇಲ್‌ ಅವರಿಗೆ ಗೌರವ ಸಮರ್ಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ