ಕೊರೊನಾ ಲಸಿಕೆಗೆ ಹೆಚ್ಚು ಒತ್ತು ನೀಡಿದ ಪ್ರಧಾನಿ!
8 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿದ ಪ್ರಧಾನಿ ಮೋದಿ, ಭವಿಷ್ಯದಲ್ಲಿ ಸಿದ್ಧವಾಗುವ ಕೊರೊನಾ ಲಸಿಕೆಯ ವಿತರಣೆಗೆ ಹೆಚ್ಚಿನ ಒತ್ತು ನೀಡಿದರು.
ಕೊರೊನಾ ವೈರಸ್ಗೆ ಸಿದ್ಧವಾಗಲಿರುವ ದೇಶೀಯ ಲಸಿಕೆಯನ್ನು ಸಮಸ್ತ ಭಾರತೀಯರಿಗೂ ದೊರೆಯುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಪ್ರಧಾನಿ ಮೋದಿ ನುಡಿದರು.
ಲಸಿಕೆ ವಿತರಣೆಗೆ ಸಿದ್ಧರಾಗಿ, ಪರೀಕ್ಷೆ ಪ್ರಮಾಣ ಹೆಚ್ಚಿಸಿ: ವರ್ಚುವಲ್ ಸಭೆಯಲ್ಲಿ ಮೋದಿ ಸಲಹೆ!
ಈ ಹಿನ್ನೆಲೆಯಲ್ಲಿ ಈಗಲೇ ಕೊರೊನಾ ಲಸಿಕೆ ವಿತರಣೆಯ ನೀಲನಕ್ಷೆಯನ್ನು ಸಿದ್ಧಪಡಿಸಿಕೊಳ್ಳುವಂತೆ ರಾಜ್ಯಗಳಿಗೆ ಸಲಹೆ ನೀಡಿದ ಪ್ರಧಾನಿ, ಕೇಂದ್ರ ರವಾನಿಸುವ ಲಸಿಕೆಗಳ ಸಂಗ್ರಹಣೆಗಾಗಿ ಕೋಲ್ಡ್ ಸ್ಟೋರೇಜ್ಗಳನ್ನು ನಿರ್ಮಾಣ ಮಾಡುವಂತೆ ಸೂಚಿಸಿದರು.
ಕೋಲ್ಡ್ ಸ್ಟೋರೇಜ್ಗಳಲ್ಲಿ ಕೊರೊನಾ ಲಸಿಕೆಯನ್ನು ಸಂಗ್ರಹಿಸಿಟ್ಟು, ಸಮಯಕ್ಕನುಸಾರವಾಗಿ ಅವುಗಳನ್ನು ಬಳಕೆ ಮಾಡಲು ಪ್ರಧಾನಿ ಮೋದಿ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದ್ದಾರೆ.
ನಾಲ್ಕು ಹಂತಗಳಲ್ಲಿ ಹಂಚಿಕೆಯಾಗಲಿದೆ ಕೋವಿಡ್ ಲಸಿಕೆ!
ಇನ್ನು ಸಂಭಾವ್ಯ ಕೊರೊನಾ ಲಸಿಕೆಯನ್ನು ಎಲ್ಲಾ ರಾಜ್ಯಗಳಲ್ಲೂ ನಾಲ್ಕು ಹಂತಗಳಲ್ಲಿ ವಿತರಣೆ ಮಾಡಬೇಕು ಪ್ರಧಾನಿ ಮೋದಿ ಸೂಚಿಸಿದ್ದಾರೆ.
ಮೊದಲನೇ ಹಂತದಲ್ಲಿ ಕೊರೊನಾ ವಾರಿಯರ್ಸ್ಗಳಿಗೆ ಲಸಿಕೆ ನೀಡಲು ಮುಂದಾಗುವಂತೆ ಪ್ರಧಾನಿ ಮೋದಿ ಸೂಚಿಸಿದ್ದಾರೆ. ಕೇಂದ್ರ ಸರ್ಕಾರ ಗುರುತಿಸಿರುವ 1 ಕೋಟಿ ಕೊರೊನಾ ವಾರಿಯರ್ಸ್ಗೆ ಮೊದಲು ಕೋವಿಡ್ ಲಸಿಕೆ ನೀಡಬೇಕಿದೆ.
ಕೇಂದ್ರ ಗುರುತಿಸಿದ 1 ಕೋಟಿ ಕೊರೊನಾ ವಾರಿಯರ್ಸ್ಗೆ ಮೊದಲ ಕೋವಿಡ್ ಲಸಿಕೆ!
ಎರಡನೇ ಹಂತದಲ್ಲಿ ಎಲ್ಲಾ ರಾಜ್ಯಗಳ ಪೊಲೀಸರಿಗೆ ಕೊರೊನಾ ಲಸಿಕೆ ನೀಡಲು ನಿರ್ಧರಿಸಲಾಗಿದ್ದು, ಮೂರನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟ ನಾಗರಿಕರಿಗೆ ಕೊರೊನಾ ಲಸಿಕೆ ದೊರೆಯಲಿದೆ.
ನಾಲ್ಕನೇ ಮತ್ತು ಕೊನೆಯ ಹಂತದಲ್ಲಿ ದೇಶದ ಎಲ್ಲಾ ನಾಗರಿಕರಿಗೂ ಕೊರೊನಾ ಲಸಿಕೆ ಸಿಗಲಿದ್ದು, ಕೇಂದ್ರ ಸರ್ಕಾರದ ಈ ಯೋಜನೆಗೆ ಕೈಜೋಡಿಸುವಂತೆ ಪ್ರಧಾನಿ ಮೋದಿ ಎಲ್ಲಾ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿಗಳಿಗೆ 3 ಮಹತ್ವದ ಟಾಸ್ಕ್ ನೀಡಿದ ಅಮಿತ್ ಶಾ!
ಇನ್ನು ವರ್ಚುವಲ್ ಸಭೆಯಲ್ಲಿ ಹಾಜರಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮೂರು ಮಹತ್ವದ ಟಾಸ್ಕ್ಗಳನ್ನು ಹಂಚಿಕೆ ಮಾಡಿದರು.
ಮೊದಲನೇಯದಾಗಿ ಎಲ್ಲಾ ರಾಜ್ಯಗಳಲ್ಲಿ ಕೊರೊನಾ ಸಾವಿನ ಪ್ರಮಾಣವನ್ನು ಶೇ.1ಕ್ಕಿಂತ ಕಡಿಮೆ ಇರುವಂತೆ ನೋಡಿಕೊಳ್ಳುವುದು.
ಭಾರತದಲ್ಲಿ ಕೊರೊನಾ ಲಸಿಕೆ ಲಭ್ಯತೆ ಯಾವಾಗ, ಹೊಸ ವರ್ಷಕ್ಕೆ ಸಿಹಿ ಸುದ್ದಿ ಸಿಗುತ್ತಾ?
ಎರಡನೇಯದಾಗಿ ಹೊಸ ಸೋಂಕು ಪ್ರಮಾಣ ಶೇ. 5ರಷ್ಟನ್ನು ಮೀರದಂತೆ ಎಚ್ಚರಿಕೆವಹಿಸುವುದು. ಹಾಗೂ ಮೂರನೇಯದಾಗಿ ಕಂಟೈನ್ಮೆಂಟ್ ಝೋನ್ಗಳಲ್ಲಿ ಆರೋಗ್ಯ ಅಧಿಕಾರಿಗಳ ನಿಯಮಿತ ಭೇಟಿ, ಪರಿಶೀಲನೆಯನ್ನು ದೃಢೀಕರಿಸುವುದು.
ಹೀಗೆ ಮುಖ್ಯಮಂತ್ರಿಗಳಿಗೆ ಮೂರು ಮಹತ್ವದ ಹೊಣೆಗಾರಿಕೆ ನೀಡಿರುವ ಅಮಿತ್ ಶಾ, ಕಾಲಕಾಲಕ್ಕೆ ಇವುಗಳ ಪ್ರಗತಿ ಪರಿಶೀಲನೆ ನಡೆಸುವಂತೆ ಸಲಹೆ ನೀಡಿದ್ದಾರೆ.
ಸಭೆಯಲ್ಲಿ ಹಾಜರಿದ್ದ 8 ರಾಜ್ಯಗಳ ಮುಖ್ಯಮಂತ್ರಿಗಳು!
ಇನ್ನು ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು(ನ.24-ಮಂಗಳವಾರ) ನಡೆದ ವರ್ಚುವಲ್ ಸಭೆಯಲ್ಲಿ, ಅತಿ ಹೆಚ್ಚು ಕೊರೊನಾ ವೈರಸ್ ಹಾವಳಿ ಇರುವ 8 ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದರು.
ವರ್ಚುವಲ್ ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯಗಳು:
* ಕರ್ನಾಟಕ
*ಮಹಾರಾಷ್ಟ್ರ
*ಕೇರಳ
ಪಶ್ಚಿಮ ಬಂಗಾಳ
* ದೆಹಲಿ
*ಉತ್ತರಪ್ರದೇಶ
*ಹರಿಯಾಣ
*ರಾಜಸ್ಥಾನ
ಲಸಿಕೆ ವಿತರಣೆಗೆ ಸಿದ್ಧರಾಗಿ, ಪರೀಕ್ಷೆ ಪ್ರಮಾಣ ಹೆಚ್ಚಿಸಿ: ವರ್ಚುವಲ್ ಸಭೆಯಲ್ಲಿ ಮೋದಿ ಸಲಹೆ!
ಈ ಎಲ್ಲಾ ರಾಜ್ಯ ಸರ್ಕಾರಗಳ ಮುಖ್ಯಮಂತ್ರಿಗಳು ತಮ್ಮ ತಮ್ಮ ರಾಜ್ಯದಲ್ಲಿರುವ ಕೊರೊನಾ ಪರಿಸ್ಥಿತಿ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಸವಿಸ್ತಾರವಾದ ವರದಿ ನೀಡಿದರಲ್ಲದೇ, ಕೇಂದ್ರದಿಂದ ತಮಗೆ ದೊರೆಯಬಹುದಾದ ನೆರವಿನ ಕುರಿತು ಚರ್ಚಿಸಿದರು.
ಒಟ್ಟಿನಲ್ಲಿ ಮಾರಕ ಕೊರೊನಾ ವೈರಸ್ ಹಾವಳಿಯನ್ನು ತಡೆಗಟ್ಟುವಲ್ಲಿ ಪ್ರಧಾನಿ ಮೋದಿ ಅವರ ಇಂದಿನ ವರ್ಚುವಲ್ ಸಭೆ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ನಿರೀಕ್ಷಿಸಲಾಗಿದೆ.