ಆ್ಯಪ್ನಗರ

ವಿಶ್ವ ನಾಯಕರ ಧನ್ಯವಾದಕ್ಕೆ ಮೋದಿ ಪ್ರತಿಕ್ರಿಯೆ ಏನಿತ್ತು?: 'ಗೆಳೆಯರಿಗೆ ಮಾತ್ರೆ'ಎಂಬ ಹೇಳಿಕೆಯ ಅರ್ಥವೇನು?

ಅಗತ್ಯ ದೇಶಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಕಳುಹಿಸುವ ಭಾರತದ ನಿರ್ಧಾರಕ್ಕೆ ಇಡೀ ವಿಶ್ವ ತಲೆ ಬಾಗಿದೆ. ಸಂಕಷ್ಟದ ಸಮಯದಲ್ಲಿ ಭಾರತ ನೀಡಿದ ಈ ಸಹಾಯವನ್ನು ಎಂದಿಗೂ ಮರೆಯುವುದಿಲ್ಲ ಎಂದು ಮಾತ್ರೆ ಪಡೆದುಕೊಂಡ ರಾಷ್ಟ್ರಗಳ ಮುಖ್ಯಸ್ಥರು ಘೋಷಿಸಿದ್ದಾರೆ. ಪ್ರಮುಖವಾಗಿ ಅಮೆರಿದಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೋ ಹಾಗೂ ಇಸ್ರೇಲ್ ಪ್ರಧನಿ ಬೆಂಜಮಿನ್ ನೇತನ್ಯಾಹು ಅವರು ತುರ್ತು ಸಂದರ್ಭದಲ್ಲಿ ಮಾತ್ರೆಗಳನ್ನು ಕಳುಹಿಸಿದ ಪ್ರಧಾನಿ ಮೋದಿ ಹಾಗೂ ಭಾರತಕ್ಕೆ ಧನ್ಯವಾದ ಸಮರ್ಪಿಸಿದ್ದಾರೆ. ಇದೀಗ ಈ ಎಲ್ಲ ನಾಯಕರ ಟ್ವೀಟ್‌ಗೆ ಪ್ರತಿಯಾಗಿ ಮರು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ನಾವೆಲ್ಲಾ ಅಖಂಡತೆಯನ್ನು ಪ್ರದರ್ಶಿಸುವ ಕಾಲ ಕೂಡಿ ಬಂದಿದ್ದು, ಎಲ್ಲಾ ಸ್ನೇಹಪರ ರಾಷ್ಟ್ರಗಳಿಗೆ ಅಗತ್ಯ ವೈದ್ಯಕೀಯ ನೆರವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಸಂಕಷ್ಟದ ಈ ಸಮಯದಲ್ಲಿ ಎಲ್ಲರೂ ಒಟ್ಟಾಗಿರೋಣ ಎಂದು ಪ್ರಧಾನಿ ಮೋದಿ ವಿಶ್ವಕ್ಕೆ ಸಲಹೆ ನೀಡಿದ್ದಾರೆ.

Vijaya Karnataka Web 10 Apr 2020, 4:52 pm
ಅಗತ್ಯ ದೇಶಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಕಳುಹಿಸುವ ಭಾರತದ ನಿರ್ಧಾರಕ್ಕೆ ಇಡೀ ವಿಶ್ವ ತಲೆ ಬಾಗಿದೆ. ಸಂಕಷ್ಟದ ಸಮಯದಲ್ಲಿ ಭಾರತ ನೀಡಿದ ಈ ಸಹಾಯವನ್ನು ಎಂದಿಗೂ ಮರೆಯುವುದಿಲ್ಲ ಎಂದು ಮಾತ್ರೆ ಪಡೆದುಕೊಂಡ ರಾಷ್ಟ್ರಗಳ ಮುಖ್ಯಸ್ಥರು ಘೋಷಿಸಿದ್ದಾರೆ. ಪ್ರಮುಖವಾಗಿ ಅಮೆರಿದಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೋ ಹಾಗೂ ಇಸ್ರೇಲ್ ಪ್ರಧನಿ ಬೆಂಜಮಿನ್ ನೇತನ್ಯಾಹು ಅವರು ತುರ್ತು ಸಂದರ್ಭದಲ್ಲಿ ಮಾತ್ರೆಗಳನ್ನು ಕಳುಹಿಸಿದ ಪ್ರಧಾನಿ ಮೋದಿ ಹಾಗೂ ಭಾರತಕ್ಕೆ ಧನ್ಯವಾದ ಸಮರ್ಪಿಸಿದ್ದಾರೆ. ಇದೀಗ ಈ ಎಲ್ಲ ನಾಯಕರ ಟ್ವೀಟ್‌ಗೆ ಪ್ರತಿಯಾಗಿ ಮರು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ನಾವೆಲ್ಲಾ ಅಖಂಡತೆಯನ್ನು ಪ್ರದರ್ಶಿಸುವ ಕಾಲ ಕೂಡಿ ಬಂದಿದ್ದು, ಎಲ್ಲಾ ಸ್ನೇಹಪರ ರಾಷ್ಟ್ರಗಳಿಗೆ ಅಗತ್ಯ ವೈದ್ಯಕೀಯ ನೆರವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಸಂಕಷ್ಟದ ಈ ಸಮಯದಲ್ಲಿ ಎಲ್ಲರೂ ಒಟ್ಟಾಗಿರೋಣ ಎಂದು ಪ್ರಧಾನಿ ಮೋದಿ ವಿಶ್ವಕ್ಕೆ ಸಲಹೆ ನೀಡಿದ್ದಾರೆ.
Vijaya Karnataka Web pm modi replies to all world leaders those who have appreciated india for exporting anti malarial drug
ವಿಶ್ವ ನಾಯಕರ ಧನ್ಯವಾದಕ್ಕೆ ಮೋದಿ ಪ್ರತಿಕ್ರಿಯೆ ಏನಿತ್ತು?: 'ಗೆಳೆಯರಿಗೆ ಮಾತ್ರೆ'ಎಂಬ ಹೇಳಿಕೆಯ ಅರ್ಥವೇನು?


ಸಂಕಷ್ಟದಲ್ಲಿ ಒಗ್ಗಟ್ಟು ಪ್ರದರ್ಶನವೇ ನಿಜವಾದ ಗೆಳೆತನ ಎಂದ ಮೋದಿ!

ಈ ಕುರಿತು ಸರಣಿ ಟ್ವೀಟ್‌ಗಳನ್ನು ಮಾಡಿರುವ ಪ್ರಧಾನಿ ಮೋದಿ, ಭಾರತಕ್ಕೆ ಧನ್ಯವಾದ ಸಲ್ಲಿಸಿದ ಎಲ್ಲಾ ವಿಶ್ವ ನಾಯಕರಿಗೆ ನಾನು ಪ್ರತಿಯಾಗಿ ಧನ್ಯವಾದ ಸಲ್ಲಿಸಲು ಬಯಸುತ್ತೇನೆ. ಸಂಕಷ್ಟದ ಸಮಯದಲ್ಲಿ ಗೆಳೆಯರ ನೆರವಿಗೆ ಬರುವುದು ಭಾರತದ ಸಂಪ್ರದಾಯವೂ ಹೌದು ಹಾಗೂ ಕರ್ತವ್ಯವೂ ಹೌದು ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ. ಕೊರೊನಾ ವೈರಸ್ ಎಂಬ ಮಹಾಮಾರಿಯನ್ನು ಸೋಲಿಸದೇ ಬೇರೆ ದಾರಿಯೇ ಇಲ್ಲ ಎಂದಿರುವ ಪ್ರಧಾನಿ ಮೋದಿ, ಈ ಹಿನ್ನೆಲೆಯಲ್ಲಿ ಇಡೀ ವಿಶ್ವ ಒಗ್ಗಟ್ಟು ಪ್ರದರ್ಶಿಸಬೇಕಿದೆ. ಭಾರತ ಈ ಒಗ್ಗಟ್ಟಿಗೆ ಬಲ ತುಂಬಲು ಸಿದ್ಧವಿದ್ದು, ವಿಶ್ವದ ಇತರ ದೇಶಗಳೂ ಅಖಂಡತೆಯನ್ನು ಪ್ರದರ್ಶಿಸಲಿವೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನೇತನ್ಯಾಹು ಧನ್ಯವಾದಕ್ಕೆ ಪ್ರಧಾನಿ ಮೋದಿ ಪ್ರತಿಕ್ರಿಯೆ ಹೀಗಿತ್ತು!

ಇನ್ನು ಭಾರತದಿಂದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಪಡೆದಿರುವ ಇಸ್ರೇಲ್, ಇದಕ್ಕಾಗಿ ಭಾರತಕ್ಕೆ ಧನ್ಯವಾದ ಸಲ್ಲಿಸಿದೆ. ತುರ್ತು ಸಂದರ್ಭದಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ರಫ್ತು ಮಾಡಿದ ಭಾರತ ಹಾಗೂ ಪ್ರಧಾನಿ ಮೋದಿ ಅವರಿಗೆ ತುಂಬು ಹೃದಯದ ಧನ್ಯವಾದ ಎಂದು ನೇತನ್ಯಾಹು ಟ್ವೀಟ್ ಮಾಡಿದ್ದಾರೆ. ಪ್ರಧಾನಿ ಮೋದಿ ಅವರನ್ನು 'ಆತ್ಮೀಯ ಗೆಳೆಯ' ಎಂದು ಕರೆದಿರುವ ನೇತನ್ಯಾಹು, ಇಡೀ ಇಸ್ರೇಲ್ ಜನತೆ ಭಾರತ ಹಾಗೂ ಪ್ರಧಾನಿ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತದೆ ಎಂದು ಹೇಳಿದ್ದಾರೆ. ನೇತನ್ಯಾಹು ಅವರ ಈ ಟ್ವೀಟ್‌ಗೆ ಉತ್ತರಿಸಿರುವ ಪ್ರಧಾನಿ ಮೋದಿ, ಭಾರತೀಯರನ್ನು ಗೆಳೇಯ ಎಂದು ಕರೆದಿದ್ದಕ್ಕೆ ನಿಮಗೆ ಧನ್ಯವಾದ ಎಂದು ಹೇಳಿದ್ದಾರೆ. ಅಲ್ಲದೇ ಗೆಳೆಯರಿಗಾಗಿ ಸಾಧ್ಯವಾದ ಎಲ್ಲಾ ಸಹಾಯವನ್ನೂ ಭಾರತ ಮಾಡಲಿದೆ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ.

ಥ್ಯಾಂಕ್ಯೂ ಇಂಡಿಯಾ ಎಂದ ಜೈರ್ ಬೋಲ್ಸನಾರೋಗೆ ಮೋದಿ ಉತ್ತರಿಸಿದ್ದೇನು?

ಅದರಂತೆ ಭಾರತದಿಂದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಪಡೆದಿರುವ ಬ್ರೆಜಿಲ್ ಕೂಡ ಪ್ರಧಾನಿ ಮೋದಿ ಹಾಗೂ ಸಮಸ್ತ ಭಾರತೀಯರಿಗೆ ಧನ್ಯವಾದ ಅರ್ಪಿಸಿದೆ. ಈ ಕುರಿತು ಪೋರ್ಚುಗೀಸ್ ಭಾಷೆಯಲ್ಲಿ ಟ್ವೀಟ್ ಮಾಡಿರುವ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೋ, ಮನವಿಗೆ ಸ್ಪಂದಿಸಿ ಮಾತ್ರೆಗಳನ್ನು ರಫ್ತು ಮಾಡಿರುವ ಭಾರತಕ್ಕೆ ಇಡೀ ಬ್ರೆಜಿಲ್ ತುಂಬು ಹೃದಯದ ಧನ್ಯವಾದ ಸಮರ್ಪಿಸುತ್ತದೆ ಎಂದು ಹೇಳಿದ್ದಾರೆ. ಇನ್ನು ಜೈರ್ ಬೋಲ್ಸನಾರೋ ಟ್ವೀಟ್‌ಗೂ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, ಭಾರತ ಹಾಗೂ ಬ್ರೆಜಿಲ್ ನಡುವಿನ ಸ್ನೇಹ ಈ ಹಿಂದೆಂದಿಗಿಂತಲೂ ಗಟ್ಟಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅದರಂತೆ ಸಂಕಷ್ಟದ ಸಮಯದಲ್ಲಿ ಗೆಳೆಯರ ನೆರವಿಗೆ ಬರುವುದು ನಮ್ಮ ಧರ್ಮ ಎಂದೂ ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ.

'ಗೆಳೆಯರಿಗೆ ಮಾತ್ರೆ' ಎಂದ ಮೋದಿ ಮಾತಿನ ಅರ್ಥವೇನು?

ಇನ್ನು ವಿಶ್ವ ನಾಯಕರ ಟ್ವೀಟ್‌ಗೆ ಪ್ರತಿಕ್ರಿಯಿಸುತ್ತಾ ಪ್ರಧಾನಿ ಮೋದಿ ಎಲ್ಲಾ ಸ್ನೇಹಪರ ರಾಷ್ಟ್ರಗಳಿಗೆ ಭಾರತ ವೈದ್ಯಕೀಯ ನೆರವು ನೀಡಲಿದೆ ಎಂದು ಹೇಳಿರುವುದೂ ಗಮನಾರ್ಹ. ಅಂದರೆ ಭಾರತದೊಂದಿಗೆ ಸ್ನೇಹದಿಂದ ಇರುವ ಹಾಗೂ ಉತ್ತಮ ವ್ಯಾಪಾರ ಸಂಪರ್ಕ ಹೊಂದಿರುವ ರಾಷ್ಟ್ರಗಳಿಗೆ ಮಾತ್ರ ಮಾತ್ರೆ ರಫ್ತು ಮಾಡಲಾಗುವುದೇ ಎಂಬ ಪ್ರಶ್ನೆ ಇದೀಗ ಮೂಡಿದೆ. ಮೋದಿ ಅವರ ಹೇಳಿಕೆಯ ಅರ್ಥ ಪಾಕಿಸ್ತಾನದಂತ ಶತ್ರು ರಾಷ್ಟ್ರಗಳಿಗೆ ಭಾರತ ನೆರವು ನೀಡುವುದಿಲ್ಲ ಎಂದಾಗುತ್ತದೆಯೇ ಎಂದು ಹಲವರು ಪ್ರಶ್ನಿಸಿದ್ದಾರೆ. ಪಾಕಿಸ್ತಾನ ಎಂದಿಗೂ ಭಾರತದ ಸ್ನೇಹಪರ ರಾಷ್ಟ್ರವಾಗಿಲ್ಲ ಎಂದು ಇಡೀ ವಿಶ್ವಕ್ಕೆ ಗೊತ್ತಿದ್ದು, ಮೋದಿ ಅವರ ಮಾತಿನ ಅರ್ಥವೂ ಇದೇ ಆಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಅದೆನೆ ಇರಲಿ ಸಂಷ್ಟದ ಸಮಯದಲ್ಲಿ ತನ್ನ ರಕ್ಷಣೆಯ ಜೊತೆಗೆ ಇಡೀ ವಿಶ್ವದ ರಕ್ಚಣೆಗೆ ಮುಂದಾದ ಭಾರತದ ಕಾರ್ಯ ಅತ್ಯಂತ ಶ್ಲಾಘನೀಯ ಎಂಬುದರಲ್ಲಿ ಸಂದೇಹವೇ ಇಲ್ಲ. ಇದೇ ಕಾರಣಕ್ಕೆ ಇಡೀ ವಿಶ್ವ ಭಾರತವನ್ನು ಕೊಂಡಾಡುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ