ಆ್ಯಪ್ನಗರ

ಮಹಿಳಾ ಸ್ವಾವಲಂಬನೆಗೆ ನೆರವಾಗಿ-ಪ್ರಧಾನಿ ಮೋದಿ ಕರೆ

ಮಹಿಳೆಯರ ಸ್ವಾವಲಂಬನೆ ಮತ್ತು ಅಭಿವೃದ್ಧಿಗೆ ಶ್ರಮಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಕರೆ ನೀಡಿದ್ದಾರೆ. ವಿಜಯದಶಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮಹಿಳಾ ಕಲ್ಯಾಣ ಕಾರ್ಯಕ್ರಮಗಳನ್ನು ಬಲಗೊಳಿಸೋಣ ಎಂದಿದ್ದಾರೆ.

Agencies 8 Oct 2019, 8:42 pm
ಹೊಸದೆಹಲಿ: ಮಹಿಳೆಯರ ಸ್ವಾವಲಂಬನೆ ಮತ್ತು ಅಭಿವೃದ್ಧಿಗೆ ಶ್ರಮಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಕರೆ ನೀಡಿದ್ದಾರೆ. ದೆಹಲಿಯ ದ್ವಾರಕಾ ಶ್ರೀರಾಮ ಲೀಲಾ ಸೊಸೈಟಿ ಆಯೋಜಿಸಿದ್ದ ವಿಜಯ ದಶಮಿ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ಸರಕಾರದ ಮಹಿಳಾ ಕಲ್ಯಾಣ ಕಾರ್ಯಕ್ರಮಗಳನ್ನು ಇನ್ನಷ್ಟು ಬಲಗೊಳಿಸುವಲ್ಲಿ ಜನತೆಯ ಸಹಕಾರ ಅಗತ್ಯ ಎಂದಿದ್ದಾರೆ.
Vijaya Karnataka Web pm modi


ದುರ್ಗಾ ಮಾತೆಯ ಶಕ್ತಿಯ ಸ್ಫೂರ್ತಿಯೊಂದಿಗೆ ಮಹಿಳೆಯರ ಸ್ವಾಭಿಮಾನ ಹಾಗೂ ಘನತೆಯನ್ನು ಹೆಚ್ಚಿಸೋಣ ಎಂದು ಹೇಳಿದ ಅವರು, ಮಹಾತ್ಮ ಗಾಂಧೀಜಿ ಅವರ 150ನೇ ಜಯಂತಿ ಭಾಗವಾಗಿ ಒಂದು ಬಾರಿಯ ಪ್ಲಾಸಿಕ್‌ ಬಳಕೆ ತ್ಯಜಿಸುವಂತೆ ಇದೇ ವೇಳೆ ಜನತೆಗೆ ಕರೆ ನೀಡಿದರು. ಅಲ್ಲದೆ ಇಂಧನ, ಆಹಾರ ಹಾಗೂ ಜಲ ಸಂರಕ್ಷಣೆಗೆ ಮುಂದಾಗೋಣ ಎಂದರು.

ಭಾರತಕ್ಕೆ ಸಿಕ್ತು ರಫೇಲ್ ಬಲ - ಮೊದಲ ಹಾರಾಟ ನಡೆಸಿದ ರಾಜನಾಥ್

ಭಾರತ ಹಬ್ಬಗಳ ತವರಾಗಿದ್ದು ನವರಾತ್ರಿ ಮುಗಿಯುತ್ತಿದ್ದಂತೆ ದೀಪಾವಳಿ ಬರಲಿದೆ. ದೀಪಾವಳಿ ಸಂದರ್ಭದಲ್ಲಿ ಲಕ್ಷ್ಮಿ ಪೂಜೆ ಮಾಡುವ ಸಂಪ್ರದಾಯ ನಮ್ಮಲ್ಲಿದೆ. ಇಂತಹ ದಿನದಂದು ತಮ್ಮ ಸಾಧನೆಯ ಮೂಲಕ ಬೇರೆಯವರಿಗೆ ಪ್ರೇರಕ ಶಕ್ತಿಯಾಗಿರುವ ನಿಮ್ಮ ನೆರೆಹೊರೆಯ ಸಾಧಕ ಹೆಣ್ಣು ಮಕ್ಕಳನ್ನು ಗುರುತಿಸಿ ಸನ್ಮಾನಿಸಿ ಎಂದು ಮತ್ತೊಮ್ಮೆ ಕರೆ ನೀಡಿದರು.

ತಮ್ಮ ಮನ್‌ ಕಿ ಬಾತ್‌ ರೇಡಿಯೊ ಭಾಷಣದಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರು 'ಭಾರತ್‌ ಕಿ ಲಕ್ಷ್ಮಿ' ಎಂಬ ಪದ ಪ್ರಯೋಗದ ಮೂಲಕ ಈ ವಿಚಾರವನ್ನು ಪ್ರಸ್ತಾಪಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ