ಆ್ಯಪ್ನಗರ

ಪ್ರಧಾನಿ ಮೋದಿ ಎಂದಾದರು ಭಯ ಪಟ್ಟಿದ್ದಾರಾ?

''ನನಗೆ ಭಯವೆಂದರೆ ಏನೆಂದು ಗೊತ್ತಿಲ್ಲ ಭಯದ ಅರ್ಥವನ್ನಾಗಲಿ, ಅದನ್ನು ನಿಭಾಯಿಸುವ ವಿಧಾನನ್ನಾಗಲಿ ಕೇಳಿದರೆ ನನ್ನಿಂದ ಹೇಳಲು ಆಗುವುದಿಲ್ಲ...

Vijaya Karnataka 13 Aug 2019, 9:44 am
ಹೊಸದಿಲ್ಲಿ: ''ನನಗೆ ಭಯವೆಂದರೆ ಏನೆಂದು ಗೊತ್ತಿಲ್ಲ. ಭಯದ ಅರ್ಥವನ್ನಾಗಲಿ, ಅದನ್ನು ನಿಭಾಯಿಸುವ ವಿಧಾನನ್ನಾಗಲಿ ಕೇಳಿದರೆ ನನ್ನಿಂದ ಹೇಳಲು ಆಗುವುದಿಲ್ಲ. ಏಕೆಂದರೆ ಅಂತಹ ಅನುಭವವೇ ನನಗೆ ಆಗಿಲ್ಲ,'' - ಹೀಗೆಂದವರು ಪ್ರಧಾನಿ ನರೇಂದ್ರ ಮೋದಿ.
Vijaya Karnataka Web Man - wild


ಮ್ಯಾನ್‌ ವರ್ಸಸ್‌ ವೈಲ್ಡ್‌ ಕಾರ್ಯಕ್ರಮದಲ್ಲಿ ಸಾಹಸಿ ಬೇರ್‌ ಗ್ರಿಲ್ಸ್‌ ಪ್ರಧಾನಿ ಮೋದಿ ಅವರನ್ನು ಕುರಿತು ''ನೀವು ಎಂದಾದರೂ ಯಾವುದಕ್ಕಾದರೂ ಹೆದರಿದ್ದೀರಾ? ರಾಜಕೀಯ ರಾರ‍ಯಲಿಗೆ ಮುನ್ನ ಆತಂಕಗೊಂಡಿದ್ದೀರಾ?'' ಎಂದು ಕೇಳಿದ ಪ್ರಶ್ನೆಗೆ ಮೋದಿ ಈ ರೀತಿ ಉತ್ತರಿಸಿದರು.

''ಪ್ರತಿಯೊಂದನ್ನೂ ನಾನು ಸಕಾರಾತ್ಮಕವಾಗಿ ನೋಡುತ್ತೇನೆ. ಹೀಗಾಗಿಯೇ ನನಗೆಂದೂ ನಿರಾಸೆಯಾಗಿಲ್ಲ,'' ಎಂದು ಅವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಜನಪ್ರಿಯ ಸಾಹಸಿ ಬೇರ್‌ ಗಿಲ್ಸ್‌ ಜತೆ ಕಾಡಿನಲ್ಲಿ ಸುತ್ತಾಡಿದ ವಿಶೇಷ ಕಾರ್ಯಕ್ರಮ 'ಮ್ಯಾನ್‌ ವರ್ಸಸ್‌ ವೈಲ್ಡ್‌' ಸೋಮವಾರ ಡಿಸ್ಕವರಿ ಚಾನೆಲ್‌ನಲ್ಲಿ ಪ್ರಸಾರವಾಗಿದ್ದು, ಭಾರಿ ಜನಮೆಚ್ಚುಗೆ ಗಳಿಸಿದೆ.

ಉತ್ತರಾಖಂಡ್‌ನ ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನವನದಲ್ಲಿ ಮೋದಿ ಅವರು ಮಳೆ, ಚಳಿಯನ್ನು ಲೆಕ್ಕಿಸದೆ ಸುತ್ತಾಡಿದ್ದಾರೆ. ಈ ವೇಳೆ ಬೇರ್‌ ಗ್ರಿಲ್ಸ್‌ ಮೋದಿ ಅವರ ಬಾಲ್ಯ ಹಾಗೂ ಜೀವನದ ವಿವಿಧ ಅನುಭವಗಳ ಬಗ್ಗೆ ಕೇಳಿದ್ದಾರೆ. ಇದಕ್ಕೆ ಮೋದಿ ಸ್ವಾರಸ್ಯಕರವಾಗಿ ಉತ್ತರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ