ರಾಜ್ಕೋಟ್: ಕಳೆದ ಎಂಟು ವರ್ಷಗಳಲ್ಲಿ ದೇಶದ ಸೇವೆ ಮಾಡುವಲ್ಲಿ ಯಾವುದೇ ಪ್ರಯತ್ನವನ್ನು ಕೈಬಿಟ್ಟಿಲ್ಲ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಜನರು ಅವಮಾನದಿಂದ ತಲೆ ತಗ್ಗಿಸುವಂತಹ ಯಾವುದೇ ಕೆಲಸ ಮಾಡಿಲ್ಲ ಎಂದು ಹೆಮ್ಮಯಿಂದ ಹೇಳಿಕೊಂಡಿದ್ದಾರೆ. ಗುಜರಾತ್ನ ರಾಜ್ಕೋಟ್ ಜಿಲ್ಲೆಯಲ್ಲಿನ ಅಟ್ಕೋಟ್ ಪಟ್ಟಣದಲ್ಲಿ 200 ಹಾಸಿಗೆಗಳ ಸಾಮರ್ಥ್ಯದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿದ ಬಳಿಕ ಜನರನ್ನು ಉದ್ದೇಶಿಸಿ ಅವರು ಮಾತನಾಡಿದರು.
"ಕಳೆದ ಎಂಟು ವರ್ಷಗಳಲ್ಲಿ ದೇಶದ ಕುರಿತಾದ ನನ್ನ ಸೇವೆಯಲ್ಲಿ ಯಾವ ಪ್ರಯತ್ನವನ್ನೂ ನಾನು ಬಿಟ್ಟಿಲ್ಲ. ನೀವು ಅಥವಾ ದೇಶದ ಯಾವುದೇ ಒಬ್ಬ ವ್ಯಕ್ತಿ ಕೂಡ ನಾಚಿಕೆಯಿಂದ ತಮ್ಮ ತಲೆ ತಗ್ಗಿಸುವಂತಹ ಯಾವುದೇ ಕೆಲಸಕ್ಕೆ ನಾನು ಅವಕಾಶ ನೀಡಿಲ್ಲ ಮತ್ತು ವೈಯಕ್ತಿಕವಾಗಿ ನಾನು ಕೂಡ ಅಂತಹ ಕೆಲಸ ಮಾಡಿಲ್ಲ" ಎಂದು ತಿಳಿಸಿದರು.
"ಮಹಾತ್ಮ ಗಾಂಧಿ ಮತ್ತು ಸರ್ದಾರ್ ಪಟೇಲ್ ಅವರು ಕನಸು ಕಂಡಿದ್ದಂತಹ ಭಾರತವನ್ನು ಕಟ್ಟಲು ನಾನು ಹಿಂದಿನ ಎಂಟು ವರ್ಷಗಳಲ್ಲಿ ಪ್ರಾಮಾಣಿಕವಾದ ಪ್ರಯತ್ನಗಳನ್ನು ಮಾಡಿದ್ದೇನೆ" ಎಂದು ಹೇಳಿದರು.
ಈ ಅವಧಿಯಲ್ಲಿ ಸರ್ಕಾರವು ಬಡವರ ಏಳಿಕೆಗಾಗಿ ಸಾಕಷ್ಟು ಕೆಲಸ ಮಾಡಿದೆ ಎಂದು ಅವರು ಹೇಳಿದರು. "ವಿವಿಧ ಬಡವರ ಕಲ್ಯಾಣ ಯೋಜನೆಗಳ ಮೂಲಕ ದೇಶದ ಬಡವರಿಗೆ ನಾವು ಸೇವೆ ಸಲ್ಲಿಸಿದ್ದೇವೆ. ಅವರ ಜೀವನವನ್ನು ಉತ್ತಮಗೊಳಿಸಲು ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಕೋವಿಡ್ 19 ಸಾಂಕ್ರಾಮಿಕದ ಸಂದರ್ಭದಲ್ಲಿ ಸರ್ಕಾರವು ಬಡವರಿಗಾಗಿ ಆಹಾರ ಧಾನ್ಯದ ಸಂಗ್ರಹವನ್ನು ತೆರೆದಿತ್ತು ಮತ್ತು ಪ್ರತಿಯೊಬ್ಬ ಪ್ರಜೆಗೂ ಲಸಿಕೆ ನೀಡಿತ್ತು" ಎಂದು ತಿಳಿಸಿದರು.
"ಬಡವರು, ದಲಿತರು, ಆದಿವಾಸಿಗಳು ಮತ್ತು ಮಹಿಳೆಯರ ಸಬಲೀಕರಣಗೊಂಡ, ಸ್ವಚ್ಛತೆ ಮತ್ತು ಆರೋಗ್ಯ ಜೀವನದ ಭಾಗವಾಗಿರುವ, ಸ್ವದೇಶಿ ಪರಿಹಾರದ ಆಧಾರದ ಆರ್ಥಿಕತೆಯ ಭಾರತವನ್ನು ಮಹಾತ್ಮ ಗಾಂಧಿ ಬಯಸಿದ್ದರು. ಇದೆಲ್ಲವನ್ನೂ ನಮ್ಮ ಸರ್ಕಾರ ಮಾಡಿದೆ" ಎಂದು ಹೇಳಿದರು.
"ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ ಮಂತ್ರದೊಂದಿಗೆ ನಾವು ದೇಶದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಿದ್ದೇವೆ. ನಾನು ಬಡತನವನ್ನು ಪುಸ್ತಕದಲ್ಲಿ ಓದಲಿಲ್ಲ ಅಥವಾ ಟೆಲಿವಿಷನ್ ಮೂಲಕ ಓದಲಿಲ್ಲ. ಬದಲಾಗಿ ಆ ಹಂತವನ್ನು ಸ್ವತಃ ಅನುಭವಿಸಿ ಬಂದಿದ್ದೇನೆ" ಎಂದು ತಿಳಿಸಿದರು.
"ಕಳೆದ ಎಂಟು ವರ್ಷಗಳಲ್ಲಿ ದೇಶದ ಕುರಿತಾದ ನನ್ನ ಸೇವೆಯಲ್ಲಿ ಯಾವ ಪ್ರಯತ್ನವನ್ನೂ ನಾನು ಬಿಟ್ಟಿಲ್ಲ. ನೀವು ಅಥವಾ ದೇಶದ ಯಾವುದೇ ಒಬ್ಬ ವ್ಯಕ್ತಿ ಕೂಡ ನಾಚಿಕೆಯಿಂದ ತಮ್ಮ ತಲೆ ತಗ್ಗಿಸುವಂತಹ ಯಾವುದೇ ಕೆಲಸಕ್ಕೆ ನಾನು ಅವಕಾಶ ನೀಡಿಲ್ಲ ಮತ್ತು ವೈಯಕ್ತಿಕವಾಗಿ ನಾನು ಕೂಡ ಅಂತಹ ಕೆಲಸ ಮಾಡಿಲ್ಲ" ಎಂದು ತಿಳಿಸಿದರು.
"ಮಹಾತ್ಮ ಗಾಂಧಿ ಮತ್ತು ಸರ್ದಾರ್ ಪಟೇಲ್ ಅವರು ಕನಸು ಕಂಡಿದ್ದಂತಹ ಭಾರತವನ್ನು ಕಟ್ಟಲು ನಾನು ಹಿಂದಿನ ಎಂಟು ವರ್ಷಗಳಲ್ಲಿ ಪ್ರಾಮಾಣಿಕವಾದ ಪ್ರಯತ್ನಗಳನ್ನು ಮಾಡಿದ್ದೇನೆ" ಎಂದು ಹೇಳಿದರು.
ಈ ಅವಧಿಯಲ್ಲಿ ಸರ್ಕಾರವು ಬಡವರ ಏಳಿಕೆಗಾಗಿ ಸಾಕಷ್ಟು ಕೆಲಸ ಮಾಡಿದೆ ಎಂದು ಅವರು ಹೇಳಿದರು. "ವಿವಿಧ ಬಡವರ ಕಲ್ಯಾಣ ಯೋಜನೆಗಳ ಮೂಲಕ ದೇಶದ ಬಡವರಿಗೆ ನಾವು ಸೇವೆ ಸಲ್ಲಿಸಿದ್ದೇವೆ. ಅವರ ಜೀವನವನ್ನು ಉತ್ತಮಗೊಳಿಸಲು ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಕೋವಿಡ್ 19 ಸಾಂಕ್ರಾಮಿಕದ ಸಂದರ್ಭದಲ್ಲಿ ಸರ್ಕಾರವು ಬಡವರಿಗಾಗಿ ಆಹಾರ ಧಾನ್ಯದ ಸಂಗ್ರಹವನ್ನು ತೆರೆದಿತ್ತು ಮತ್ತು ಪ್ರತಿಯೊಬ್ಬ ಪ್ರಜೆಗೂ ಲಸಿಕೆ ನೀಡಿತ್ತು" ಎಂದು ತಿಳಿಸಿದರು.
"ಬಡವರು, ದಲಿತರು, ಆದಿವಾಸಿಗಳು ಮತ್ತು ಮಹಿಳೆಯರ ಸಬಲೀಕರಣಗೊಂಡ, ಸ್ವಚ್ಛತೆ ಮತ್ತು ಆರೋಗ್ಯ ಜೀವನದ ಭಾಗವಾಗಿರುವ, ಸ್ವದೇಶಿ ಪರಿಹಾರದ ಆಧಾರದ ಆರ್ಥಿಕತೆಯ ಭಾರತವನ್ನು ಮಹಾತ್ಮ ಗಾಂಧಿ ಬಯಸಿದ್ದರು. ಇದೆಲ್ಲವನ್ನೂ ನಮ್ಮ ಸರ್ಕಾರ ಮಾಡಿದೆ" ಎಂದು ಹೇಳಿದರು.
"ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ ಮಂತ್ರದೊಂದಿಗೆ ನಾವು ದೇಶದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಿದ್ದೇವೆ. ನಾನು ಬಡತನವನ್ನು ಪುಸ್ತಕದಲ್ಲಿ ಓದಲಿಲ್ಲ ಅಥವಾ ಟೆಲಿವಿಷನ್ ಮೂಲಕ ಓದಲಿಲ್ಲ. ಬದಲಾಗಿ ಆ ಹಂತವನ್ನು ಸ್ವತಃ ಅನುಭವಿಸಿ ಬಂದಿದ್ದೇನೆ" ಎಂದು ತಿಳಿಸಿದರು.