ಮಾಲೆ: ಸರಕಾರಿ ಪ್ರಾಯೋಜಿತ ಭಯೋತ್ಪಾದನೆಯಿಂದಲೇ ಜಗತ್ತಿಗೆ ಅಪಾಯ ಎದುರಾಗಿದೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ವಿರುದ್ಧ ಪರೋಕ್ಷವಾಗಿ ಕಿಡಿ ಕಾರಿದ್ದಾರೆ.
ಎರಡನೇ ಬಾರಿ ಪ್ರಧಾನಿಯಾದ ಬಳಿಕ ಮೊದಲ ವಿದೇಶ ಪ್ರವಾಸ ಕೈಗೊಂಡಿರುವ ಮೋದಿ, ಮಾಲ್ಡೀವ್ಸ್ ಸಂಸತ್ ಉದ್ದೇಶಿಸಿ ಶನಿವಾರ ಸಂಜೆ ಮಾತನಾಡಿದರು. ಕಳೆದ ಐದು ವರ್ಷಗಳಲ್ಲಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕ್ ಕಪಟತನವನ್ನು ಬಯಲಿಗೆಳೆಯುತ್ತಲೇ ಬಂದಿರುವ ಅವರು, ಈ ಸಲವೂ ಅದೇ ತಂತ್ರ ಬಳಸಿದರು. ಪಾಕಿಸ್ತಾನದ ಹೆಸರು ಪ್ರಸ್ತಾಪಿಸದೇ ಆ ದೇಶದ ಮಾನ ಹರಾಜು ಹಾಕಿದರು.
''ಸರಕಾರಿ ಪ್ರಾಯೋಜಿತ ಭಯೋತ್ಪದನೆಗೆ ಅಂತ್ಯ ಹಾಡಲೇಬೇಕಿದೆ. ಉಗ್ರರಿಂದ ಭಾರತ ಅಥವಾ ಮಾಲ್ಡೀವ್ಸ್ ಮಾತ್ರವಲ್ಲ, ಇಡೀ ನಾಗರಿಕತೆಗೆ ಆಪತ್ತು ಎದುರಾಗಿದೆ. ಈ ಕುರಿತು ಚರ್ಚೆಗೆ ಜಾಗತಿಕ ಸಮ್ಮೇಳನ ಆಯೋಜಿಸಬೇಕು. ವಿಶ್ವದ ಎಲ್ಲ ಅಗ್ರ ನಾಯಕರಿಗೆ ಇಂದು ಭಯೋತ್ಪಾದನೆ ಹತ್ತಿಕ್ಕುವುದೇ ಬಹುದೊಡ್ಡ ಸವಾಲಾಗಿದೆ,'' ಎಂದು ಹೇಳಿದರು. ರಾಷ್ಟ್ರ ರಾಜಧಾನಿಯ ರಿಪಬ್ಲಿಕ್ ಸ್ಕ್ವೇರ್ನಲ್ಲಿ ಪ್ರಧಾನಿ ಮೋದಿ ಬಂದಿಳಿಯುತ್ತಿದ್ದಂತೆ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹೀದ್ ಸ್ವಾಗತ ಕೋರಿದರು. 'ಶಾಶ್ವತ ಸ್ನೇಹ' ಎಂದು ವಿದೇಶಾಂಗ ಸಚಿವಾಲಯ ವಕ್ತಾರ ಟ್ವೀಟ್ ಮಾಡುವ ಮೂಲಕ ಪ್ರಧಾನಿ ಮೋದಿ ಅವರಿಗೆ ದೊರೆತ ಕೆಂಪುಹಾಸಿನ ಸ್ವಾಗತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅತ್ಯುನ್ನತ ಗೌರವ ಪ್ರದಾನ: ವಿದೇಶಿ ಗಣ್ಯರಿಗೆ ನೀಡಲಾಗುವ ಅತ್ಯುನ್ನತ ಗೌರವ 'ರೂಲ್ ಆಫ್ ನಿಶಾನ್ ಇಜ್ಜುದ್ದೀನ್' ಪುರಸ್ಕಾರವನ್ನು ಈ ವೇಳೆ ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಅವರು ಮೋದಿಯವರಿಗೆ ಪ್ರದಾನ ಮಾಡಿ ಗೌರವಿಸಿದರು. ಸೊಲಿಹ್ಗೆ ಅವರಿಗೆ ಕ್ರಿಕೆಟ್ ಬ್ಯಾಟ್ ಅನ್ನು ಮೋದಿ ವಿಶೇಷ ಉಡುಗೊರೆಯಾಗಿ ನೀಡಿದರು. ಬ್ಯಾಟ್ ಮೇಲೆ ಮೇಲೆ ಈ ಬಾರಿಯ ವಿಶ್ವಕಪ್ನಲ್ಲಿ ಭಾಗವಹಿಸಿರುವ ಭಾರತೀಯ ಆಟಗಾರರ ಸಹಿಗಳಿರುವುದು ವಿಶೇಷ.
..................
ಉಭಯ ರಾಷ್ಟ್ರಗಳ ಸಂಬಂಧದಲ್ಲಿ ಈ ಭೇಟಿ ಹೊಸ ಶಕೆ ಆರಂಭಕ್ಕೆ ಬುನಾದಿ. ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ, ಕೊಚ್ಚಿಗೆ ಸಂಪರ್ಕಿಸುವ ಫೆರ್ರಿ ಸೇವೆ ಆರಂಭಕ್ಕೆ ಭಾರತ ಮುಂದಾಗಲಿದೆ. ಭಾರತದ ನೆರವಿನಿಂದ ಸ್ಥಾಪಿಸಲಾದ ಕರಾವಳಿ ರೇಡಾರ್ ಸೇವೆಗೆ ಇಂದು ಚಾಲನೆ ನೀಡಿದ್ದೇವೆ.
- ನರೇಂದ್ರ ಮೋದಿ, ಪ್ರಧಾನಿ
........................
ಸಂಸತ್ ಭಾಷಣದ ಪ್ರಮುಖಾಂಶ
* ನೆರೆ ರಾಷ್ಟ್ರಕ್ಕೆ ಮೊದಲ ಆದ್ಯತೆ ಭಾರತದ ಮಂತ್ರ. ಯಾರನ್ನೂ ದುರ್ಬಲಗೊಳಿಸುವ ಉದ್ದೇಶ ನಮಗಿಲ್ಲ. ಮಾಲ್ಡೀವ್ಸ್ ಬೆಳವಣಿಗೆ ಬಗ್ಗೆ ಹೆಮ್ಮೆ ಇದೆ, ಅದು ಭಾರತಕ್ಕೆ ಮಾದರಿ ಕೂಡ. ಭದ್ರತೆ, ನೈಸರ್ಗಿಕ ವಿಕೋಪ ನಿರ್ವಹಣೆ, ಅಭಿವೃದ್ಧಿಗೆ ನಿಮ್ಮ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ.
* ಪುನರ್ಬಳಕೆ ಇಂಧನದ ಮೇಲೆ ಅವಲಂಬನೆಯಿಂದ ಹವಾಮಾನ ವೈಪರೀತ್ಯವನ್ನು ನಿಯಂತ್ರಿಸಬಹುದು. ಮಾಲ್ಡೀವ್ಸ್ ಅಂತಾರಾಷ್ಟ್ರೀಯ ಸೋಲಾರ್ ಒಕ್ಕೂಟದ ಭಾಗವಾಗಿರುವುದಕ್ಕೆ ನನಗೆ ಸಂತಸವಿದೆ. ತಂತ್ರಜ್ಞಾನದಿಂದ ಮಾತ್ರ ಹವಾಮಾನ ವೈಪರೀತ್ಯಕ್ಕೆ ಪರಿಹಾರ ಸಿಗಲಿದೆ.
* ಇಂಡೋ-ಪೆಸಿಫಿಕ್ ಪ್ರಾಂತ್ಯ ನಮ್ಮ ಜೀವನಾಡಿ. ಹಾಗಾಗಿಯೇ ಸಿಂಗಾಪುರ ಭೇಟಿ ವೇಳೆ ಮುಕ್ತ ವ್ಯಾಪಾರಕ್ಕೆ ಮತ್ತಷ್ಟು ಒತ್ತು ನೀಡುವ ಬಗ್ಗೆ ಆಗ್ರಹಿಸಿದ್ದೆ.
* ಕರಾವಳಿ ಮೂಲದಿಂದ ಆರ್ಥಿಕತೆ ಹೆಚ್ಚಿಸುವ (ಬ್ಲೂ ಎಕಾನಮಿ) ನಮ್ಮ ಇಚ್ಛೆಗೆ ಮಾಲ್ಡೀವ್ಸ್ ಬಹುದೊಡ್ಡ ಪಾಲುದಾರ ರಾಷ್ಟ್ರ ಎಂದು ನಾವು ಪರಿಗಣಿಸುತ್ತೇವೆ. ಸಮುದ್ರ ಮುಖಾಂತರ ವ್ಯಾಪಾರ ಹೆಚ್ಚಳಕ್ಕೆ ಆದ್ಯತೆ ನೀಡೋಣ.
....................................
6 ಒಪ್ಪಂದಗಳಿಗೆ ಸಹಿ
ರಕ್ಷಣಾ ಕ್ಷೇತ್ರ ಮತ್ತು ಕಡಲ ಮೂಲಕ ವ್ಯಾಪಾರ ವೃದ್ಧಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಸೊಲಿಹ್ ಆರು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿದರು. ಭಾರತದ ನೆರವಿನಿಂದ ನಿರ್ಮಾಣಗೊಂಡ ಮಾಲ್ಡೀವ್ಸ್ನ ಕೋಸ್ಟಲ್ ರೇಡಾರ್ ಸಿಸ್ಟಂ ಹಾಗೂ ಸಂಯುಕ್ತ ತರಬೇತಿ ಕೇಂದ್ರವನ್ನು ಪ್ರಧಾನಿ ಮೋದಿ ಹಾಗೂ ಅಧ್ಯಕ್ಷ ಸೊಲಿಹ್ ಜಂಟಿಯಾಗಿ ಉದ್ಘಾಟಿಸಿದರು. ಮಾಲ್ಡೀವ್ಸ್ ರಾಜಧಾನಿಯಿಂದ ಕೇರಳ ಕೊಚ್ಚಿವರೆಗೆ ಫೆರ್ರಿ ಸೇವೆಯನ್ನು ಶೀಘ್ರ ಆರಂಭಿಸಲು ಭೇಟಿ ವೇಳೆ ಉಭಯ ನಾಯಕರು ಒಪ್ಪಿದ್ದಾರೆ. ಜತೆಗೆ ಭಾರತ ರುಪೇ ಕಾರ್ಡ್ ಸೇವೆಯನ್ನು ಮಾಲ್ಡೀವ್ಸ್ನಲ್ಲಿ ಶೀಘ್ರವೇ ಜಾರಿಗೆ ತರುವ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಕೂಡ ಸಮ್ಮತಿಸಲಾಗಿದೆ.
* ಹೈಡ್ರೋಗ್ರಫಿ - ನೀರಿನ ಮೂಲಗಳ ಅನ್ವೇಷಣಾ ವಿಜ್ಞಾನ ಕ್ಷೇತ್ರದಲ್ಲಿ ಸಹಕಾರ.
* ಆರೋಗ್ಯ ಸೇವೆಗಳು
* ಸಮುದ್ರ ಮಾರ್ಗವಾಗಿ ಕೇರಳದ ಕೊಚ್ಚಿಗೆ ಪ್ರಯಾಣಿಕರು, ಸರಕು ಸಾಗಣೆ(ಫೆರ್ರಿ ಸೇವೆ)
*ಮಾಲ್ಡೀವ್ಸ್ ಸುಂಕ ಸಂಗ್ರಹ ಸೇವೆ ಹಾಗೂ ಕೇಂದ್ರೀಯ ಪರೋಕ್ಷ ತೆರಿಗೆ ಮಂಡಳಿ ಸಹಕಾರ
* ಆಡಳಿತ ಸುಧಾರಣೆ ಇಲಾಖೆ, ಸರಕು ನಿರ್ವಹಣೆ ರಾಷ್ಟ್ರೀಯ ಕೇಂದ್ರ ಹಾಗೂ ಮಾಲ್ಡೀವ್ಸ್ನ ನಾಗರಿಕ ಸೇವಾ ಆಯೋಗದ ಸಹಯೋಗದಲ್ಲಿ ಮಾಲ್ಡೀವ್ಸ್ನ ಸರಕಾರಿ ನೌಕರರಿಗೆ ತರಬೇತಿ ಯೋಜನೆ
* ಭಾರತೀಯ ನೌಕಾಪಡೆ ಮತ್ತು ಮಾಲ್ಡೀವ್ಸ್ ರಾಷ್ಟ್ರೀತ ರಕ್ಷಣಾ ಪಡೆ ನಡುವೆ ಮಾಹಿತಿ ಹಂಚಿಕೆ
ಎರಡನೇ ಬಾರಿ ಪ್ರಧಾನಿಯಾದ ಬಳಿಕ ಮೊದಲ ವಿದೇಶ ಪ್ರವಾಸ ಕೈಗೊಂಡಿರುವ ಮೋದಿ, ಮಾಲ್ಡೀವ್ಸ್ ಸಂಸತ್ ಉದ್ದೇಶಿಸಿ ಶನಿವಾರ ಸಂಜೆ ಮಾತನಾಡಿದರು. ಕಳೆದ ಐದು ವರ್ಷಗಳಲ್ಲಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕ್ ಕಪಟತನವನ್ನು ಬಯಲಿಗೆಳೆಯುತ್ತಲೇ ಬಂದಿರುವ ಅವರು, ಈ ಸಲವೂ ಅದೇ ತಂತ್ರ ಬಳಸಿದರು. ಪಾಕಿಸ್ತಾನದ ಹೆಸರು ಪ್ರಸ್ತಾಪಿಸದೇ ಆ ದೇಶದ ಮಾನ ಹರಾಜು ಹಾಕಿದರು.
''ಸರಕಾರಿ ಪ್ರಾಯೋಜಿತ ಭಯೋತ್ಪದನೆಗೆ ಅಂತ್ಯ ಹಾಡಲೇಬೇಕಿದೆ. ಉಗ್ರರಿಂದ ಭಾರತ ಅಥವಾ ಮಾಲ್ಡೀವ್ಸ್ ಮಾತ್ರವಲ್ಲ, ಇಡೀ ನಾಗರಿಕತೆಗೆ ಆಪತ್ತು ಎದುರಾಗಿದೆ. ಈ ಕುರಿತು ಚರ್ಚೆಗೆ ಜಾಗತಿಕ ಸಮ್ಮೇಳನ ಆಯೋಜಿಸಬೇಕು. ವಿಶ್ವದ ಎಲ್ಲ ಅಗ್ರ ನಾಯಕರಿಗೆ ಇಂದು ಭಯೋತ್ಪಾದನೆ ಹತ್ತಿಕ್ಕುವುದೇ ಬಹುದೊಡ್ಡ ಸವಾಲಾಗಿದೆ,'' ಎಂದು ಹೇಳಿದರು. ರಾಷ್ಟ್ರ ರಾಜಧಾನಿಯ ರಿಪಬ್ಲಿಕ್ ಸ್ಕ್ವೇರ್ನಲ್ಲಿ ಪ್ರಧಾನಿ ಮೋದಿ ಬಂದಿಳಿಯುತ್ತಿದ್ದಂತೆ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹೀದ್ ಸ್ವಾಗತ ಕೋರಿದರು. 'ಶಾಶ್ವತ ಸ್ನೇಹ' ಎಂದು ವಿದೇಶಾಂಗ ಸಚಿವಾಲಯ ವಕ್ತಾರ ಟ್ವೀಟ್ ಮಾಡುವ ಮೂಲಕ ಪ್ರಧಾನಿ ಮೋದಿ ಅವರಿಗೆ ದೊರೆತ ಕೆಂಪುಹಾಸಿನ ಸ್ವಾಗತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅತ್ಯುನ್ನತ ಗೌರವ ಪ್ರದಾನ: ವಿದೇಶಿ ಗಣ್ಯರಿಗೆ ನೀಡಲಾಗುವ ಅತ್ಯುನ್ನತ ಗೌರವ 'ರೂಲ್ ಆಫ್ ನಿಶಾನ್ ಇಜ್ಜುದ್ದೀನ್' ಪುರಸ್ಕಾರವನ್ನು ಈ ವೇಳೆ ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಅವರು ಮೋದಿಯವರಿಗೆ ಪ್ರದಾನ ಮಾಡಿ ಗೌರವಿಸಿದರು. ಸೊಲಿಹ್ಗೆ ಅವರಿಗೆ ಕ್ರಿಕೆಟ್ ಬ್ಯಾಟ್ ಅನ್ನು ಮೋದಿ ವಿಶೇಷ ಉಡುಗೊರೆಯಾಗಿ ನೀಡಿದರು. ಬ್ಯಾಟ್ ಮೇಲೆ ಮೇಲೆ ಈ ಬಾರಿಯ ವಿಶ್ವಕಪ್ನಲ್ಲಿ ಭಾಗವಹಿಸಿರುವ ಭಾರತೀಯ ಆಟಗಾರರ ಸಹಿಗಳಿರುವುದು ವಿಶೇಷ.
..................
ಉಭಯ ರಾಷ್ಟ್ರಗಳ ಸಂಬಂಧದಲ್ಲಿ ಈ ಭೇಟಿ ಹೊಸ ಶಕೆ ಆರಂಭಕ್ಕೆ ಬುನಾದಿ. ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ, ಕೊಚ್ಚಿಗೆ ಸಂಪರ್ಕಿಸುವ ಫೆರ್ರಿ ಸೇವೆ ಆರಂಭಕ್ಕೆ ಭಾರತ ಮುಂದಾಗಲಿದೆ. ಭಾರತದ ನೆರವಿನಿಂದ ಸ್ಥಾಪಿಸಲಾದ ಕರಾವಳಿ ರೇಡಾರ್ ಸೇವೆಗೆ ಇಂದು ಚಾಲನೆ ನೀಡಿದ್ದೇವೆ.
- ನರೇಂದ್ರ ಮೋದಿ, ಪ್ರಧಾನಿ
........................
ಸಂಸತ್ ಭಾಷಣದ ಪ್ರಮುಖಾಂಶ
* ನೆರೆ ರಾಷ್ಟ್ರಕ್ಕೆ ಮೊದಲ ಆದ್ಯತೆ ಭಾರತದ ಮಂತ್ರ. ಯಾರನ್ನೂ ದುರ್ಬಲಗೊಳಿಸುವ ಉದ್ದೇಶ ನಮಗಿಲ್ಲ. ಮಾಲ್ಡೀವ್ಸ್ ಬೆಳವಣಿಗೆ ಬಗ್ಗೆ ಹೆಮ್ಮೆ ಇದೆ, ಅದು ಭಾರತಕ್ಕೆ ಮಾದರಿ ಕೂಡ. ಭದ್ರತೆ, ನೈಸರ್ಗಿಕ ವಿಕೋಪ ನಿರ್ವಹಣೆ, ಅಭಿವೃದ್ಧಿಗೆ ನಿಮ್ಮ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ.
* ಪುನರ್ಬಳಕೆ ಇಂಧನದ ಮೇಲೆ ಅವಲಂಬನೆಯಿಂದ ಹವಾಮಾನ ವೈಪರೀತ್ಯವನ್ನು ನಿಯಂತ್ರಿಸಬಹುದು. ಮಾಲ್ಡೀವ್ಸ್ ಅಂತಾರಾಷ್ಟ್ರೀಯ ಸೋಲಾರ್ ಒಕ್ಕೂಟದ ಭಾಗವಾಗಿರುವುದಕ್ಕೆ ನನಗೆ ಸಂತಸವಿದೆ. ತಂತ್ರಜ್ಞಾನದಿಂದ ಮಾತ್ರ ಹವಾಮಾನ ವೈಪರೀತ್ಯಕ್ಕೆ ಪರಿಹಾರ ಸಿಗಲಿದೆ.
* ಇಂಡೋ-ಪೆಸಿಫಿಕ್ ಪ್ರಾಂತ್ಯ ನಮ್ಮ ಜೀವನಾಡಿ. ಹಾಗಾಗಿಯೇ ಸಿಂಗಾಪುರ ಭೇಟಿ ವೇಳೆ ಮುಕ್ತ ವ್ಯಾಪಾರಕ್ಕೆ ಮತ್ತಷ್ಟು ಒತ್ತು ನೀಡುವ ಬಗ್ಗೆ ಆಗ್ರಹಿಸಿದ್ದೆ.
* ಕರಾವಳಿ ಮೂಲದಿಂದ ಆರ್ಥಿಕತೆ ಹೆಚ್ಚಿಸುವ (ಬ್ಲೂ ಎಕಾನಮಿ) ನಮ್ಮ ಇಚ್ಛೆಗೆ ಮಾಲ್ಡೀವ್ಸ್ ಬಹುದೊಡ್ಡ ಪಾಲುದಾರ ರಾಷ್ಟ್ರ ಎಂದು ನಾವು ಪರಿಗಣಿಸುತ್ತೇವೆ. ಸಮುದ್ರ ಮುಖಾಂತರ ವ್ಯಾಪಾರ ಹೆಚ್ಚಳಕ್ಕೆ ಆದ್ಯತೆ ನೀಡೋಣ.
....................................
6 ಒಪ್ಪಂದಗಳಿಗೆ ಸಹಿ
ರಕ್ಷಣಾ ಕ್ಷೇತ್ರ ಮತ್ತು ಕಡಲ ಮೂಲಕ ವ್ಯಾಪಾರ ವೃದ್ಧಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಸೊಲಿಹ್ ಆರು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿದರು. ಭಾರತದ ನೆರವಿನಿಂದ ನಿರ್ಮಾಣಗೊಂಡ ಮಾಲ್ಡೀವ್ಸ್ನ ಕೋಸ್ಟಲ್ ರೇಡಾರ್ ಸಿಸ್ಟಂ ಹಾಗೂ ಸಂಯುಕ್ತ ತರಬೇತಿ ಕೇಂದ್ರವನ್ನು ಪ್ರಧಾನಿ ಮೋದಿ ಹಾಗೂ ಅಧ್ಯಕ್ಷ ಸೊಲಿಹ್ ಜಂಟಿಯಾಗಿ ಉದ್ಘಾಟಿಸಿದರು. ಮಾಲ್ಡೀವ್ಸ್ ರಾಜಧಾನಿಯಿಂದ ಕೇರಳ ಕೊಚ್ಚಿವರೆಗೆ ಫೆರ್ರಿ ಸೇವೆಯನ್ನು ಶೀಘ್ರ ಆರಂಭಿಸಲು ಭೇಟಿ ವೇಳೆ ಉಭಯ ನಾಯಕರು ಒಪ್ಪಿದ್ದಾರೆ. ಜತೆಗೆ ಭಾರತ ರುಪೇ ಕಾರ್ಡ್ ಸೇವೆಯನ್ನು ಮಾಲ್ಡೀವ್ಸ್ನಲ್ಲಿ ಶೀಘ್ರವೇ ಜಾರಿಗೆ ತರುವ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಕೂಡ ಸಮ್ಮತಿಸಲಾಗಿದೆ.
* ಹೈಡ್ರೋಗ್ರಫಿ - ನೀರಿನ ಮೂಲಗಳ ಅನ್ವೇಷಣಾ ವಿಜ್ಞಾನ ಕ್ಷೇತ್ರದಲ್ಲಿ ಸಹಕಾರ.
* ಆರೋಗ್ಯ ಸೇವೆಗಳು
* ಸಮುದ್ರ ಮಾರ್ಗವಾಗಿ ಕೇರಳದ ಕೊಚ್ಚಿಗೆ ಪ್ರಯಾಣಿಕರು, ಸರಕು ಸಾಗಣೆ(ಫೆರ್ರಿ ಸೇವೆ)
*ಮಾಲ್ಡೀವ್ಸ್ ಸುಂಕ ಸಂಗ್ರಹ ಸೇವೆ ಹಾಗೂ ಕೇಂದ್ರೀಯ ಪರೋಕ್ಷ ತೆರಿಗೆ ಮಂಡಳಿ ಸಹಕಾರ
* ಆಡಳಿತ ಸುಧಾರಣೆ ಇಲಾಖೆ, ಸರಕು ನಿರ್ವಹಣೆ ರಾಷ್ಟ್ರೀಯ ಕೇಂದ್ರ ಹಾಗೂ ಮಾಲ್ಡೀವ್ಸ್ನ ನಾಗರಿಕ ಸೇವಾ ಆಯೋಗದ ಸಹಯೋಗದಲ್ಲಿ ಮಾಲ್ಡೀವ್ಸ್ನ ಸರಕಾರಿ ನೌಕರರಿಗೆ ತರಬೇತಿ ಯೋಜನೆ
* ಭಾರತೀಯ ನೌಕಾಪಡೆ ಮತ್ತು ಮಾಲ್ಡೀವ್ಸ್ ರಾಷ್ಟ್ರೀತ ರಕ್ಷಣಾ ಪಡೆ ನಡುವೆ ಮಾಹಿತಿ ಹಂಚಿಕೆ