ಹೊಸದಿಲ್ಲಿ: ರಫೇಲ್ ಡೀಲ್ ಕುರಿತಂತೆ ಸರಕಾರ ಮತ್ತು ಪ್ರತಿಪಕ್ಷಗಳು ಭಾನುವಾರವೂ ಕೆಸರೆರಚಾಟ ಮುಂದುವರಿಸಿವೆ. ಸಿಎಜಿ ವರದಿ ಮತ್ತು ಪಿಎಸಿ ಕುರಿತ ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲೇಖದ ತಿದ್ದುಪಡಿ ಕೋರಿ ಸರಕಾರ ನಿನ್ನೆ ಮನವಿ ಸಲ್ಲಿಸಿತ್ತು.
ಸುಪ್ರೀಂ ಕೋರ್ಟ್ ಆದೇಶವನ್ನು ಒಪ್ಪಿಕೊಳ್ಳಲು ಕಾಂಗ್ರೆಸ್ ನಿರಾಕರಿಸುತ್ತಿದೆ ಎಂದು ಪ್ರಧಾನಿ ಮೋದಿ ತೀಕ್ಷ್ಣ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ತವರು ಕ್ಷೇತ್ರದ ರಾಯ್ಬರೇಲಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಕೋರ್ಟ್ ಕೂಡ ಸುಳ್ಳು ಹೇಳುತ್ತಿರುವಂತೆ ಕಾಂಗ್ರೆಸ್ ಬಿಂಬಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಮತ್ತೊಂದೆಡೆ ಕಾಂಗ್ರೆಸ್, ಸರಕಾರ ಸುಪ್ರೀಂ ಕೋರ್ಟಿಗೆ ಸುಳ್ಳು ಹೇಳಿದೆ ಎಂದು ಆರೋಪಿಸಿದೆ. ಆರೋಪ- ಪ್ರತ್ಯಾರೋಪಗಳ ವಿವರ ಇಲ್ಲಿದೆ:
ದೇಶ, ನ್ಯಾಯಾಂಗ ಮತ್ತು ಜನತೆಗಿಂತಲೂ ತಾನು ಮೇಲು ಎಂದು ಕಾಂಗ್ರೆಸ್ ಭಾವಿಸಿಕೊಂಡಿದೆ: ಪ್ರಧಾನಿ ಮೋದಿ
ಬಿಜೆಪಿ ಸರಕಾರದ ರಕ್ಷಣಾ ಒಪ್ಪಂದಗಳಲ್ಲಿ ಕ್ವಟ್ರೋಚ್ಚಿ ಮಾಮಾ ಅಥವಾ ಕ್ರಿಶ್ಚಿಯನ್ ಮೈಕೆಲ್ ಇಲ್ಲದ ಕಾರಣ ಹತಾಶಗೊಂಡ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದು ಸುಳ್ಳು ಹೇಳುತ್ತಿದೆ. ಅಲ್ಲದೆ ನ್ಯಾಯಾಂಗದ ವಿರುದ್ಧವೂ ಅವಿಶ್ವಾಸ ಮೂಡಿಸುವ ಯತ್ನ ನಡೆಸಿದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.
ಕೋರ್ಟೇ ಸುಳ್ಳುಗಾರ ಎಂಬಂತೆ ಕಾಂಗ್ರೆಸ್ ನಡೆ: ಸೋನಿಯಾ ಕ್ಷೇತ್ರದಲ್ಲಿ ಪ್ರಧಾನಿ ತೀಕ್ಷ್ಣ ವಾಗ್ದಾಳಿ
'ಕಾಂಗ್ರೆಸ್ಗೆ ರಕ್ಷಣಾ ಸಚಿವಾಲಯ, ರಕ್ಷಣಾ ಸಚಿವರು, ವಾಯುಪಡೆಯ ಅಧಿಕಾರಿಗಳು, ಫ್ರಾನ್ಸ್ ಸರಕಾರ, ಎಲ್ಲವೂ ಸುಳ್ಳಾಗಿ ಕಾಣುತ್ತದೆ.... ಈಗ ಸುಪ್ರೀಂ ಕೋರ್ಟ್ ಕೂಡ ಸುಳ್ಳು ಹೇಳಿದಂತೆ ಅವರಿಗೆ ಕಾಣಿಸುತ್ತದೆ' ಎಂದು ಮೋದಿ ನುಡಿದರು.
ನ್ಯಾಯಾಂಗದ ಮೇಲೆ ಒತ್ತಡ ಹೇರಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಆರೋಪಿಸಿದ ಪ್ರಧಾನಿ ಮೋದಿ, ಜನತೆ ಕಾಂಗ್ರೆಸ್ ಕುತಂತ್ರಗಳನ್ನು ನಂಬಬಾರದು ಎಂದು ತಿಳಿಸಿದರು. ನ್ಯಾಯಾಂಗ ಮತ್ತು ನ್ಯಾಯಿಕ ವ್ಯವಸ್ಥೆಯೂ ಸೇರಿದಂತೆ ತನ್ನ ನಿಲುವನ್ನು ಒಪ್ಪದ ಪ್ರತಿಯೊಂದು ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನೂ ದುರ್ಬಲಗೊಳಿಸಲು ಕಾಂಗ್ರೆಸ್ ಯತ್ನಿಸಿದೆ ಎಂದು ಮೋದಿ ಆರೋಪಿಸಿದರು.
ಕಾಂಗ್ರೆಸ್ ಸುಳ್ಳುಗಳು ಬಯಲಾಗಿವೆ: ಅರುಣ್ ಜೇಟ್ಲಿ
ರಫೇಲ್ ವ್ಯವಹಾರದ ಕುರಿತು ಕಾಂಗ್ರೆಸ್ ಮತ್ತು ಅದರ ಅಧ್ಯಕ್ಷ ರಾಹುಲ್ ಗಾಂಧಿ ಆಡುತ್ತಿರುವ ಸುಳ್ಳುಗಳೆಲ್ಲ ಬಯಲಾಗಿವೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ವಾಗ್ದಾಳಿ ನಡೆಸಿದರು.
ದೇಶದ ಸುರಕ್ಷತೆಯ ವಿಚಾರದಲ್ಲಿ ಕಾಂಗ್ರೆಸ್ ಆಟವಾಡುತ್ತಿದೆ: ಪ್ರಧಾನಿ ಮೋದಿ
'ಸುಪ್ರೀಂ ಕೋರ್ಟ್ ತೀರ್ಪು ಸ್ಪಷ್ಟವಾಗಿದೆ. ಸರಕಾರದ ವಿರುದ್ಧ ಕಾಂಗ್ರೆಸ್ ಆಡಿದ ಪ್ರತಿಯೊಂದು ಪದವೂ ಸುಳ್ಳು ಎಂಬುದು ಸಾಬೀತಾಗಿದೆ. ಒಪ್ಪಂದದ ಕುರಿತು ಸ್ಥಾಪಿತ ಹಿತಾಸಕ್ತಿಗಳು ನೀಡಿದ ಪ್ರತಿಯೊಂದು ಆರೋಪವೂ ಹೆಣೆದಿದ್ದು ಎಂಬ ಸತ್ಯ ಬಯಲಾಗಿದೆ. ರಫೇಲ್ ವ್ಯವಹಾರದಲ್ಲಿ ಸರಕಾರ ಅನುಸರಿಸಿದ ಪ್ರತಿಯೊಂದು ನಡೆಯೂ ನಿಯಮಬದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ತೃಪ್ತಿ ವ್ಯಕ್ತಪಡಿಸಿದೆ. ಹೀಗಾಗಿ ಆರೋಪಗಳೆಲ್ಲವೂ ದುರುದ್ದೇಶದಿಂದ ಹೆಣೆದವುಗಳು ಎಂಬುದು ಸ್ಪಷ್ಟವಾಗಿದೆ' ಎಂದು ಜೇಟ್ಲಿ ನುಡಿದರು.
ಸರಕಾರದಿಂದ ಹಕ್ಕುಚ್ಯುತಿ: ಕಾಂಗ್ರೆಸ್ ನಾಯಕ ಆನಂದ್ ಶರ್ಮಾ
ಸರಕಾರ ಸುಪ್ರೀಂ ಕೋರ್ಟಿನ ಮುಂದೆ 'ತಪ್ಪು ವಾಸ್ತವಗಳನ್ನು' ಮಂಡಿಸಿದೆ. ಅದರಿಂದಾಗಿಯೇ ಸರಕಾರದ ವಿರುದ್ಧದ ಆರೋಪಗಳನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿ ತೀರ್ಪು ನೀಡಿದೆ ಎಂದು ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ದೂರಿದ್ದಾರೆ.
ರಫೇಲ್ ಕುರಿತ ಸಿಎಜಿ ವರದಿಯನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮುಂದೆ ಮಂಡಿಸಲಾಗಿದೆ ಎಂದು ಹೇಳುವ ಮೂಲಕ ಸರಕಾರ ಸಂಸತ್ತಿನ ಎರಡೂ ಸದನಗಳ ಹಕ್ಕುಚ್ಯುತಿ ಎಸಗಿದೆ ಎಂದು ಅವರು ಟೀಕಿಸಿದರು.
'ತೀರ್ಪು ಸರಿಯಾಗಿಲ್ಲದ ಕಾರಣ ಅದನ್ನು ಕೂಡಲೇ ಹಿಂಪಡೆಯಬೇಕು ಎಂದು ಸುಪ್ರೀಂ ಕೋರ್ಟಿಗೆ ನಾವು ಆಗ್ರಹಿಸುತ್ತೇವೆ. ಸುಪ್ರೀಂ ಕೋರ್ಟಿನ ಘನತೆ ಉಳಿಸಿಕೊಳ್ಳುವುದಕ್ಕಾಗಿಯೂ ಅದು ಅಗತ್ಯ. ಇಡೀ ಪ್ರಕರಣ ಸರ್ವೋಚ್ಚ ನ್ಯಾಯಾಲಯದ ಘನತೆಯನ್ನು ಹಾಳುಗೆಡವಿದೆ. ಅಕ್ಕೆ ನಾವು ಅವಕಾಶ ನೀಡುವುದಿಲ್ಲ. ಸುಪ್ರೀಂ ಕೋರ್ಟ್ ಸರಕಾರಕ್ಕೆ ನ್ಯಾಯಾಂಗ ನಿಂದನೆ ನೋಟೀಸ್ ಜಾರಿ ಮಾಡಬೇಕು' ಎಂದು ಆನಂದ್ ಶರ್ಮಾ ಆಗ್ರಹಿಸಿದರು.
ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ನೀಡಿದೆ ಎನ್ನುವುದು ತಪ್ಪು: ಕಪಿಲ್ ಸಿಬಲ್
ಸುಪ್ರೀಂ ಕೋರ್ಟ್ ಶುಕ್ರವಾರ ನೀಡಿದ ತೀರ್ಪನ್ನು ಸರಕಾರ ತನಗೆ ನೀಡಿದ ಕ್ಲೀನ್ಚಿಟ್ ಎಂದು ಬಿಂಬಿಸಿಕೊಳ್ಳುವುದು ಸರಿಯಲ್ಲ. ಕೋರ್ಟಿನ ಮುಂದಿಟ್ಟ ದಾಖಲೆಗಳಿಗೆ ಅನುಗುಣವಾಗಿ ಅದು ತೀರ್ಪು ನೀಡಿದೆ ಅಷ್ಟೆ. ಸಂಸತ್ತಿನಲ್ಲಿ ವಿಮಾನದ ಬೆಲೆಗಳನ್ನು ಬಹಿರಂಗಪಡಿಸದ ಸರಕಾರ ಸಿಎಜಿ ಮುಂದೆ ಬಹಿರಂಗಪಡಿಸಿದೆ ಎಂದು ಸಿಬಲ್ ಆರೋಪಿಸಿದರು.
ತಪ್ಪಿತಸ್ಥರನ್ನು ಪ್ರಧಾನಿ ಪತ್ತೆ ಮಾಡಲಿ: ಸುಬ್ರಮಣಿಯಂ ಸ್ವಾಮಿ
ರಫೇಲ್ ಡೀಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಅಫಿದವಿತ್ನಲ್ಲಿ ತಪ್ಪು ಮಾಡಿದವರು ಯಾರು ಎಂಬುದನ್ನು ಪ್ರಧಾನಿ ಪತ್ತೆಮಾಡಲಿ ಎಂದು ಬಿಜೆಪಿ ನಾಯಕ ಸುಬ್ರಮಣಿಯಂ ಸ್ವಾಮಿ ಹೇಳಿದ್ದಾರೆ.
'ಈ ಅಫಿದವಿತ್ ತಾವು ಸಿದ್ಧಪಡಿಸಿಲ್ಲ ಎಂದು ಅಟಾರ್ನಿ ಜನರಲ್ ಹೇಳಿದ್ದಾರೆ. ಹಾಗಾದರೆ ಯಾರು ಮಾಡಿದವರು? ತಮ್ಮನ್ನು ಮುಜುಗರಕ್ಕೆ ಈಡುಮಾಡಿದ ಅಫಿದವಿತ್ ಸಿದ್ಧಪಡಿಸಿದವರು ಯಾರು ಎಂಬುದನ್ನು ಪ್ರಧಾನಿ ಪತ್ತೆ ಮಾಡಲಿ. ಸರಿಯಾದ ಇಂಗ್ಲಿಷ್ನಲ್ಲಿ ಕರಡು ರೂಪಿಸಲು ಬಾರದಿದ್ದರೆ ಹಿಂದಿಯಲ್ಲಾದರೂ ಬರೆಯಬಹುದಿತ್ತು. ಸೀಲ್ ಮಾಡಿದ ಕವರ್ನಲ್ಲಿ ಅಫಿದವಿತ್ ಸಲ್ಲಿಸುವಾಗ ಪ್ರಶ್ನೆಗಳು ಏಳುವುದು ಸಹಜ... ಈ ಬಾರಿ ತೀರ್ಪಿನ ಮೊದಲೇ ಅದು ಪತ್ತೆಯಾಯಿತು. ಇಲ್ಲವಾದರೆ ನ್ಯಾಯಾಧೀಶರ ತೀರ್ಪಿನ ಮೇಲೆ ದುಷ್ಪರಿಣಾಮ ಬೀರುತ್ತಿತ್ತು' ಎಂದು ಡಾ. ಸ್ವಾಮಿ ಹೇಳಿದ್ದಾರೆ.
ಸಂಸತ್ತು ಎಜಿಯನ್ನು ಕರೆಸಿ ವಿವರಣೆ ಪಡೆಯಲಿ: ಸಿಪಿಎಂ
ಸುಪ್ರೀಂ ಕೋರ್ಟಿಗೆ ತಪ್ಪು ಅಫಿದವಿತ್ ಸಲ್ಲಿಸಲು ಯಾರು ಹೊಣೆ ಎಂಬುದರ ಬಗ್ಗೆ ಅಟಾರ್ನಿ ಜನರಲ್ ಅವರನ್ನು ಸಂಸತ್ತಿಗೆ ಕರೆಸಿ ವಿವರಣೆ ಪಡೆಯಬೇಕು ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಒತ್ತಾಯಿಸಿದ್ದಾರೆ.
ಸರಕಾರ ಸುಪ್ರೀಂ ಕೋರ್ಟಿಗೆ ತಪ್ಪು ಮಾಹಿತಿ ನೀಡಿದೆ ಹಾಗೂ ಅದನ್ನೇ ಆಧರಿಸಿ ಕೋರ್ಟ್ ತೀರ್ಪು ನೀಡಿದೆ ಎಂಬುದು ಸ್ಪಷ್ಟವಾಗಿದೆ. ಸರಕಾರ ಮೊದಲು ಸಂಸತ್ತಿನಲ್ಲಿ ವಿವರ ಮಂಡಿಸಬೇಕಿತ್ತು. ಬದಲಾಗಿ ಕೋರ್ಟಿಗೆ ತೆರಳಿತು. ಇದರಿಂದ ಸಾಂವಿಧಾನಿಕ ಸಂಸ್ಥೆಗಳ ಹಕ್ಕುಚ್ಯುತಿಯಾಗಿದೆ. ಇದಕ್ಕೆ ಅಟಾರ್ನಿ ಜನರಲ್ ಮಾತ್ರ ಉತ್ತರಿಸಬಲ್ಲರು. ಅವರನ್ನು ಸಂಸತ್ತಿಗೆ ಕರೆಸಿ ವಿಚಾರಿಸಬೇಕು' ಎಂದು ಯೆಚೂರಿ ಆಗ್ರಹಿಸಿದರು.
ಸುಪ್ರೀಂ ಕೋರ್ಟ್ ಆದೇಶವನ್ನು ಒಪ್ಪಿಕೊಳ್ಳಲು ಕಾಂಗ್ರೆಸ್ ನಿರಾಕರಿಸುತ್ತಿದೆ ಎಂದು ಪ್ರಧಾನಿ ಮೋದಿ ತೀಕ್ಷ್ಣ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ತವರು ಕ್ಷೇತ್ರದ ರಾಯ್ಬರೇಲಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಕೋರ್ಟ್ ಕೂಡ ಸುಳ್ಳು ಹೇಳುತ್ತಿರುವಂತೆ ಕಾಂಗ್ರೆಸ್ ಬಿಂಬಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಮತ್ತೊಂದೆಡೆ ಕಾಂಗ್ರೆಸ್, ಸರಕಾರ ಸುಪ್ರೀಂ ಕೋರ್ಟಿಗೆ ಸುಳ್ಳು ಹೇಳಿದೆ ಎಂದು ಆರೋಪಿಸಿದೆ. ಆರೋಪ- ಪ್ರತ್ಯಾರೋಪಗಳ ವಿವರ ಇಲ್ಲಿದೆ:
ದೇಶ, ನ್ಯಾಯಾಂಗ ಮತ್ತು ಜನತೆಗಿಂತಲೂ ತಾನು ಮೇಲು ಎಂದು ಕಾಂಗ್ರೆಸ್ ಭಾವಿಸಿಕೊಂಡಿದೆ: ಪ್ರಧಾನಿ ಮೋದಿ
ಬಿಜೆಪಿ ಸರಕಾರದ ರಕ್ಷಣಾ ಒಪ್ಪಂದಗಳಲ್ಲಿ ಕ್ವಟ್ರೋಚ್ಚಿ ಮಾಮಾ ಅಥವಾ ಕ್ರಿಶ್ಚಿಯನ್ ಮೈಕೆಲ್ ಇಲ್ಲದ ಕಾರಣ ಹತಾಶಗೊಂಡ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದು ಸುಳ್ಳು ಹೇಳುತ್ತಿದೆ. ಅಲ್ಲದೆ ನ್ಯಾಯಾಂಗದ ವಿರುದ್ಧವೂ ಅವಿಶ್ವಾಸ ಮೂಡಿಸುವ ಯತ್ನ ನಡೆಸಿದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.
ಕೋರ್ಟೇ ಸುಳ್ಳುಗಾರ ಎಂಬಂತೆ ಕಾಂಗ್ರೆಸ್ ನಡೆ: ಸೋನಿಯಾ ಕ್ಷೇತ್ರದಲ್ಲಿ ಪ್ರಧಾನಿ ತೀಕ್ಷ್ಣ ವಾಗ್ದಾಳಿ
'ಕಾಂಗ್ರೆಸ್ಗೆ ರಕ್ಷಣಾ ಸಚಿವಾಲಯ, ರಕ್ಷಣಾ ಸಚಿವರು, ವಾಯುಪಡೆಯ ಅಧಿಕಾರಿಗಳು, ಫ್ರಾನ್ಸ್ ಸರಕಾರ, ಎಲ್ಲವೂ ಸುಳ್ಳಾಗಿ ಕಾಣುತ್ತದೆ.... ಈಗ ಸುಪ್ರೀಂ ಕೋರ್ಟ್ ಕೂಡ ಸುಳ್ಳು ಹೇಳಿದಂತೆ ಅವರಿಗೆ ಕಾಣಿಸುತ್ತದೆ' ಎಂದು ಮೋದಿ ನುಡಿದರು.
ನ್ಯಾಯಾಂಗದ ಮೇಲೆ ಒತ್ತಡ ಹೇರಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಆರೋಪಿಸಿದ ಪ್ರಧಾನಿ ಮೋದಿ, ಜನತೆ ಕಾಂಗ್ರೆಸ್ ಕುತಂತ್ರಗಳನ್ನು ನಂಬಬಾರದು ಎಂದು ತಿಳಿಸಿದರು. ನ್ಯಾಯಾಂಗ ಮತ್ತು ನ್ಯಾಯಿಕ ವ್ಯವಸ್ಥೆಯೂ ಸೇರಿದಂತೆ ತನ್ನ ನಿಲುವನ್ನು ಒಪ್ಪದ ಪ್ರತಿಯೊಂದು ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನೂ ದುರ್ಬಲಗೊಳಿಸಲು ಕಾಂಗ್ರೆಸ್ ಯತ್ನಿಸಿದೆ ಎಂದು ಮೋದಿ ಆರೋಪಿಸಿದರು.
ಕಾಂಗ್ರೆಸ್ ಸುಳ್ಳುಗಳು ಬಯಲಾಗಿವೆ: ಅರುಣ್ ಜೇಟ್ಲಿ
ರಫೇಲ್ ವ್ಯವಹಾರದ ಕುರಿತು ಕಾಂಗ್ರೆಸ್ ಮತ್ತು ಅದರ ಅಧ್ಯಕ್ಷ ರಾಹುಲ್ ಗಾಂಧಿ ಆಡುತ್ತಿರುವ ಸುಳ್ಳುಗಳೆಲ್ಲ ಬಯಲಾಗಿವೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ವಾಗ್ದಾಳಿ ನಡೆಸಿದರು.
ದೇಶದ ಸುರಕ್ಷತೆಯ ವಿಚಾರದಲ್ಲಿ ಕಾಂಗ್ರೆಸ್ ಆಟವಾಡುತ್ತಿದೆ: ಪ್ರಧಾನಿ ಮೋದಿ
'ಸುಪ್ರೀಂ ಕೋರ್ಟ್ ತೀರ್ಪು ಸ್ಪಷ್ಟವಾಗಿದೆ. ಸರಕಾರದ ವಿರುದ್ಧ ಕಾಂಗ್ರೆಸ್ ಆಡಿದ ಪ್ರತಿಯೊಂದು ಪದವೂ ಸುಳ್ಳು ಎಂಬುದು ಸಾಬೀತಾಗಿದೆ. ಒಪ್ಪಂದದ ಕುರಿತು ಸ್ಥಾಪಿತ ಹಿತಾಸಕ್ತಿಗಳು ನೀಡಿದ ಪ್ರತಿಯೊಂದು ಆರೋಪವೂ ಹೆಣೆದಿದ್ದು ಎಂಬ ಸತ್ಯ ಬಯಲಾಗಿದೆ. ರಫೇಲ್ ವ್ಯವಹಾರದಲ್ಲಿ ಸರಕಾರ ಅನುಸರಿಸಿದ ಪ್ರತಿಯೊಂದು ನಡೆಯೂ ನಿಯಮಬದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ತೃಪ್ತಿ ವ್ಯಕ್ತಪಡಿಸಿದೆ. ಹೀಗಾಗಿ ಆರೋಪಗಳೆಲ್ಲವೂ ದುರುದ್ದೇಶದಿಂದ ಹೆಣೆದವುಗಳು ಎಂಬುದು ಸ್ಪಷ್ಟವಾಗಿದೆ' ಎಂದು ಜೇಟ್ಲಿ ನುಡಿದರು.
ಸರಕಾರದಿಂದ ಹಕ್ಕುಚ್ಯುತಿ: ಕಾಂಗ್ರೆಸ್ ನಾಯಕ ಆನಂದ್ ಶರ್ಮಾ
ಸರಕಾರ ಸುಪ್ರೀಂ ಕೋರ್ಟಿನ ಮುಂದೆ 'ತಪ್ಪು ವಾಸ್ತವಗಳನ್ನು' ಮಂಡಿಸಿದೆ. ಅದರಿಂದಾಗಿಯೇ ಸರಕಾರದ ವಿರುದ್ಧದ ಆರೋಪಗಳನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿ ತೀರ್ಪು ನೀಡಿದೆ ಎಂದು ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ದೂರಿದ್ದಾರೆ.
ರಫೇಲ್ ಕುರಿತ ಸಿಎಜಿ ವರದಿಯನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮುಂದೆ ಮಂಡಿಸಲಾಗಿದೆ ಎಂದು ಹೇಳುವ ಮೂಲಕ ಸರಕಾರ ಸಂಸತ್ತಿನ ಎರಡೂ ಸದನಗಳ ಹಕ್ಕುಚ್ಯುತಿ ಎಸಗಿದೆ ಎಂದು ಅವರು ಟೀಕಿಸಿದರು.
'ತೀರ್ಪು ಸರಿಯಾಗಿಲ್ಲದ ಕಾರಣ ಅದನ್ನು ಕೂಡಲೇ ಹಿಂಪಡೆಯಬೇಕು ಎಂದು ಸುಪ್ರೀಂ ಕೋರ್ಟಿಗೆ ನಾವು ಆಗ್ರಹಿಸುತ್ತೇವೆ. ಸುಪ್ರೀಂ ಕೋರ್ಟಿನ ಘನತೆ ಉಳಿಸಿಕೊಳ್ಳುವುದಕ್ಕಾಗಿಯೂ ಅದು ಅಗತ್ಯ. ಇಡೀ ಪ್ರಕರಣ ಸರ್ವೋಚ್ಚ ನ್ಯಾಯಾಲಯದ ಘನತೆಯನ್ನು ಹಾಳುಗೆಡವಿದೆ. ಅಕ್ಕೆ ನಾವು ಅವಕಾಶ ನೀಡುವುದಿಲ್ಲ. ಸುಪ್ರೀಂ ಕೋರ್ಟ್ ಸರಕಾರಕ್ಕೆ ನ್ಯಾಯಾಂಗ ನಿಂದನೆ ನೋಟೀಸ್ ಜಾರಿ ಮಾಡಬೇಕು' ಎಂದು ಆನಂದ್ ಶರ್ಮಾ ಆಗ್ರಹಿಸಿದರು.
ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ನೀಡಿದೆ ಎನ್ನುವುದು ತಪ್ಪು: ಕಪಿಲ್ ಸಿಬಲ್
ಸುಪ್ರೀಂ ಕೋರ್ಟ್ ಶುಕ್ರವಾರ ನೀಡಿದ ತೀರ್ಪನ್ನು ಸರಕಾರ ತನಗೆ ನೀಡಿದ ಕ್ಲೀನ್ಚಿಟ್ ಎಂದು ಬಿಂಬಿಸಿಕೊಳ್ಳುವುದು ಸರಿಯಲ್ಲ. ಕೋರ್ಟಿನ ಮುಂದಿಟ್ಟ ದಾಖಲೆಗಳಿಗೆ ಅನುಗುಣವಾಗಿ ಅದು ತೀರ್ಪು ನೀಡಿದೆ ಅಷ್ಟೆ. ಸಂಸತ್ತಿನಲ್ಲಿ ವಿಮಾನದ ಬೆಲೆಗಳನ್ನು ಬಹಿರಂಗಪಡಿಸದ ಸರಕಾರ ಸಿಎಜಿ ಮುಂದೆ ಬಹಿರಂಗಪಡಿಸಿದೆ ಎಂದು ಸಿಬಲ್ ಆರೋಪಿಸಿದರು.
ತಪ್ಪಿತಸ್ಥರನ್ನು ಪ್ರಧಾನಿ ಪತ್ತೆ ಮಾಡಲಿ: ಸುಬ್ರಮಣಿಯಂ ಸ್ವಾಮಿ
ರಫೇಲ್ ಡೀಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಅಫಿದವಿತ್ನಲ್ಲಿ ತಪ್ಪು ಮಾಡಿದವರು ಯಾರು ಎಂಬುದನ್ನು ಪ್ರಧಾನಿ ಪತ್ತೆಮಾಡಲಿ ಎಂದು ಬಿಜೆಪಿ ನಾಯಕ ಸುಬ್ರಮಣಿಯಂ ಸ್ವಾಮಿ ಹೇಳಿದ್ದಾರೆ.
'ಈ ಅಫಿದವಿತ್ ತಾವು ಸಿದ್ಧಪಡಿಸಿಲ್ಲ ಎಂದು ಅಟಾರ್ನಿ ಜನರಲ್ ಹೇಳಿದ್ದಾರೆ. ಹಾಗಾದರೆ ಯಾರು ಮಾಡಿದವರು? ತಮ್ಮನ್ನು ಮುಜುಗರಕ್ಕೆ ಈಡುಮಾಡಿದ ಅಫಿದವಿತ್ ಸಿದ್ಧಪಡಿಸಿದವರು ಯಾರು ಎಂಬುದನ್ನು ಪ್ರಧಾನಿ ಪತ್ತೆ ಮಾಡಲಿ. ಸರಿಯಾದ ಇಂಗ್ಲಿಷ್ನಲ್ಲಿ ಕರಡು ರೂಪಿಸಲು ಬಾರದಿದ್ದರೆ ಹಿಂದಿಯಲ್ಲಾದರೂ ಬರೆಯಬಹುದಿತ್ತು. ಸೀಲ್ ಮಾಡಿದ ಕವರ್ನಲ್ಲಿ ಅಫಿದವಿತ್ ಸಲ್ಲಿಸುವಾಗ ಪ್ರಶ್ನೆಗಳು ಏಳುವುದು ಸಹಜ... ಈ ಬಾರಿ ತೀರ್ಪಿನ ಮೊದಲೇ ಅದು ಪತ್ತೆಯಾಯಿತು. ಇಲ್ಲವಾದರೆ ನ್ಯಾಯಾಧೀಶರ ತೀರ್ಪಿನ ಮೇಲೆ ದುಷ್ಪರಿಣಾಮ ಬೀರುತ್ತಿತ್ತು' ಎಂದು ಡಾ. ಸ್ವಾಮಿ ಹೇಳಿದ್ದಾರೆ.
ಸಂಸತ್ತು ಎಜಿಯನ್ನು ಕರೆಸಿ ವಿವರಣೆ ಪಡೆಯಲಿ: ಸಿಪಿಎಂ
ಸುಪ್ರೀಂ ಕೋರ್ಟಿಗೆ ತಪ್ಪು ಅಫಿದವಿತ್ ಸಲ್ಲಿಸಲು ಯಾರು ಹೊಣೆ ಎಂಬುದರ ಬಗ್ಗೆ ಅಟಾರ್ನಿ ಜನರಲ್ ಅವರನ್ನು ಸಂಸತ್ತಿಗೆ ಕರೆಸಿ ವಿವರಣೆ ಪಡೆಯಬೇಕು ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಒತ್ತಾಯಿಸಿದ್ದಾರೆ.
ಸರಕಾರ ಸುಪ್ರೀಂ ಕೋರ್ಟಿಗೆ ತಪ್ಪು ಮಾಹಿತಿ ನೀಡಿದೆ ಹಾಗೂ ಅದನ್ನೇ ಆಧರಿಸಿ ಕೋರ್ಟ್ ತೀರ್ಪು ನೀಡಿದೆ ಎಂಬುದು ಸ್ಪಷ್ಟವಾಗಿದೆ. ಸರಕಾರ ಮೊದಲು ಸಂಸತ್ತಿನಲ್ಲಿ ವಿವರ ಮಂಡಿಸಬೇಕಿತ್ತು. ಬದಲಾಗಿ ಕೋರ್ಟಿಗೆ ತೆರಳಿತು. ಇದರಿಂದ ಸಾಂವಿಧಾನಿಕ ಸಂಸ್ಥೆಗಳ ಹಕ್ಕುಚ್ಯುತಿಯಾಗಿದೆ. ಇದಕ್ಕೆ ಅಟಾರ್ನಿ ಜನರಲ್ ಮಾತ್ರ ಉತ್ತರಿಸಬಲ್ಲರು. ಅವರನ್ನು ಸಂಸತ್ತಿಗೆ ಕರೆಸಿ ವಿಚಾರಿಸಬೇಕು' ಎಂದು ಯೆಚೂರಿ ಆಗ್ರಹಿಸಿದರು.