ಆ್ಯಪ್ನಗರ

ಆಫ್ರಿಕಾ ಬಗ್ಗೆ ಟ್ವೀಟ್‌ ಮಾಡುವ ಮೋದಿ, ಕಾಶ್ಮೀರ ವಿಷಯ ಪ್ರಸ್ತಾಪಿಸುವುದಿಲ್ಲ: ಕಾಂಗ್ರೆಸ್‌

ಸಂಸತ್ತಿನಲ್ಲಿ ಕಾಶ್ಮೀರದ ವಿಷಯ ಪ್ರಸ್ತಾಪಿಸದ ಪ್ರಧಾನಿ, ಮಧ್ಯಪ್ರದೇಶದಲ್ಲಿ ಕಣಿವೆ ಬಗ್ಗೆ ಮಾತನಾಡುತ್ತಾರೆ ಎಂದು ಕಾಂಗ್ರೆಸ್‌ ಲೇವಡಿ ಮಾಡಿದೆ.

ಟೈಮ್ಸ್ ಆಫ್ ಇಂಡಿಯಾ 10 Aug 2016, 2:49 pm
ಹೊಸದಿಲ್ಲಿ: ಸಂಸತ್ತಿನಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪಿಸದ ಪ್ರಧಾನಿ ನರೇಂದ್ರ ಮೋದಿ, ಮಧ್ಯಪ್ರದೇಶದಲ್ಲಿ ಕಣಿವೆ ಬಗ್ಗೆ ಮಾತನಾಡುತ್ತಾರೆ ಎಂದು ಕಾಂಗ್ರೆಸ್‌ ಬುಧವಾರ ಲೇವಡಿ ಮಾಡಿದೆ.
Vijaya Karnataka Web pm modi tweets on africa not on kashmir congress
ಆಫ್ರಿಕಾ ಬಗ್ಗೆ ಟ್ವೀಟ್‌ ಮಾಡುವ ಮೋದಿ, ಕಾಶ್ಮೀರ ವಿಷಯ ಪ್ರಸ್ತಾಪಿಸುವುದಿಲ್ಲ: ಕಾಂಗ್ರೆಸ್‌


'ಮಧ್ಯಪ್ರದೇಶದಿಂದ ಪ್ರಧಾನಿ ಕಾಶ್ಮೀರವನ್ನುದ್ದೇಶಿಸಿ ಮಾತನಾಡುತ್ತಾರೆ. ಸಂಸತ್ತಿನಲ್ಲಿ ಏಕೆ ಮಾತನಾಡುವುದಿಲ್ಲ. ಸಂಸತ್ತಿಗೆ ಬೆಲೆ ಇಲ್ಲವೇ,'ಎಂದು ರಾಜ್ಯಸಭೆಯಲ್ಲಿ ಕಾಶ್ಮೀರ ವಿಷಯವಾಗಿ ಚರ್ಚೆ ಆರಂಭಿಸಿದ ಗುಲಾಂ ನಬಿ ಆಜಾದ್‌ ಪ್ರಶ್ನಿಸಿದ್ದಾರೆ.

ವಿಶ್ವದ ನಾನಾ ಭಾಗಗಳಲ್ಲಿ ನಡೆಯುವ ಘಟನೆಗಳ ಬಗ್ಗೆ ಟ್ವೀಟ್‌ ಮಾಡುವ ಪ್ರಧಾನಿ, ಕಾಶ್ಮೀರ ಬಿಕ್ಕಟ್ಟಿನ ಬಗ್ಗೆ ಮೌನ ಮುರಿಯುವುದಿಲ್ಲ. ಆಫ್ರಿಕಾದಲ್ಲಿ ಏನೇ ಆಗಲಿ ಪ್ರಧಾನಿ ಟ್ವೀಟ್‌ ಮಾಡುತ್ತಾರೆ, ಕಾಶ್ಮೀರ ಹೊತ್ತುರಿಯುತ್ತಿದ್ದರೂ ತುಟಿ ಬಿಚ್ಚುವುದಿಲ್ಲ. ಕೇಂದ್ರ ಸರಕಾರಕ್ಕೆ ಅದರ ಬಿಸಿ ಮುಟ್ಟಿಲ್ಲ,'ಎಂದು ಆಜಾದ್‌ ಕಿಡಿಕಾರಿದ್ದಾರೆ.

'ಮಧ್ಯಪ್ರದೇಶದ ಮುಖ್ಯಮಂತ್ರಿ ಕೋರಿಕೆ ಮೇರೆಗೆ ಅಲ್ಲಿ ಪ್ರಧಾನಿ ಕಾಶ್ಮೀರ ವಿಷಯ ಪ್ರಸ್ತಾಪಿಸಿದ್ದಾರೆ ಎಂದು ತಿಳಿದುಬಂದಿದೆ. ಮುಖ್ಯಮಂತ್ರಿ ಕೇಳದೇ ಇದ್ದಿದ್ದರೆ ಅಲ್ಲೂ ಅವರು ಕಾಶ್ಮೀರ ವಿಷಯ ಪ್ರಸ್ತಾಪಿಸುತ್ತಿರಲಿಲ್ಲ. ಪ್ರಧಾನಿಗೆ ಸಂಸತ್ತು ಏನೂ ಅಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ,'ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭಾರತೀಯರೆಲ್ಲರೂ ಕಾಶ್ಮೀರವನ್ನು ಪ್ರೀತಿಸುತ್ತಾರೆ ಎಂಬ ಪ್ರಧಾನಿಯ ಹೇಳಿಕೆಗೆ ತಿರುಗೇಟು ನೀಡಿರುವ ಆಜಾದ್‌, ಕಾಶ್ಮೀರದ ಪ್ರಕೃತಿ ಸೌಂದರ್ಯವನ್ನು ಪ್ರೀತಿಸಬೇಡಿ. ಗಾಯಗೊಂಡಿರುವ, ನೊಂದಿರುವ, ಸಂತ್ರಸ್ತರನ್ನು ಪ್ರೀತಿಸಿ,'ಎಂದಿದ್ದಾರೆ.

'ಮುಖ್ಯಮಂತ್ರಿ ಮೆಹಬೂಬ ಮುಫ್ತಿಯೊಬ್ಬರೇ ಅಲ್ಲಿ ಎಲ್ಲವನ್ನೂ ನಿಭಾಯಿಸಲು ಸಾಧ್ಯವಿಲ್ಲ. ರಾಜ್ಯ ಸರಕಾರ ಕೇಂದ್ರವನ್ನು ನಂಬಿಕೊಂಡಿದೆ. ಅಲ್ಲಿ ಪ್ರತಿಯೊಬ್ಬರೂ ಭಯೋತ್ಪಾದನೆ ಸಂತ್ರಸ್ತರು. ಉಗ್ರರಿಗೆ ಧರ್ಮ ಇಲ್ಲ. ಕಾಶ್ಮೀರ ಅಥವಾ ಪಂಜಾಬ್‌ ಎಲ್ಲೇ ಇದ್ದರೂ ಅವರು ಉಗ್ರರು,'ಎಂದು ಹೇಳಿದ್ದಾರೆ.

ಜುಲೈ 8ರಂದು ಹಿಜ್ಬುಲ್‌ ಉಗ್ರ ವಾನಿ ಹತ್ಯೆಯಿಂದ ಕಣಿವೆಯಲ್ಲಿ ಹಿಂಸಾಚಾರ ಭುಗಿಲೆದಿದ್ದು, ತಿಂಗಳ ನಂತರ ರಾಜ್ಯಸಭೆಯಲ್ಲಿ ಕಾಶ್ಮೀರ ವಿಷಯ ಚರ್ಚೆಗೆ ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ