2ನೇ ಅವಧಿಯ ಮೊದಲ ಮನ್ ಕೀ ಬಾತ್: ನೀರಿನ ಸಂರಕ್ಷಣೆಗೆ ಒತ್ತು ನೀಡಿದ ನಮೋ
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರಕಾರದ ಎರಡನೇ ಅವಧಿಯ ಚೊಚ್ಚಲ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಮಾತನಾಡಿದರು.
Navbharat Times 30 Jun 2019, 12:47 pm
ಹೊಸದಿಲ್ಲಿ: ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿ ಹೊಸ ಹುಮ್ಮಸ್ಸಿನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರಕಾರದ ಎರಡನೇ ಅವಧಿಯ ಚೊಚ್ಚಲ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ನೀರಿನ ಸಂರಕ್ಷಣೆಗೆ ವಿಶೇಷ ಒತ್ತು ನೀಡಿದರು.
ಪ್ರತಿ ವರ್ಷ ದೇಶದ ಬಹುತೇಕ ಪ್ರದೇಶ ನೀರಿನ ಸಮಸ್ಯೆ ಅನುಭವಿಸುತ್ತಿದೆ. ಇಂಥ ಭೀಕರ ಸಮಸ್ಯೆಯಿಂದ ಪಾರಾಗಲು ನೀರಿನ ಸಂರಕ್ಷಣೆಗೆ ಆದ್ಯತೆ ನೀಡುವುದು ಅವಶ್ಯಕ ಎಂದರು.
ಮಾನವಶಕ್ತಿ ಮತ್ತು ಸಹಕಾರದಿಂದ ನೀರಿನ ಸಮಸ್ಯೆ ಬಗೆಹರಿಸಬಹುದೆಂದು ನಂಬಿರುವುದಾಗಿ ಪ್ರಧಾನಿ ತಿಳಿಸಿದರು. ನೂತನ ಜಲಶಕ್ತಿ ಸಚಿವಾಲಯ ಸ್ಥಾಪಿಸುವುದಾಗಿ ತಿಳಿಸಿರುವ ಮೋದಿ, ಜಲಕ್ಷಾಮ ಎದುರಿಸುವಲ್ಲಿ ಈ ಸಚಿವಾಲಯ ಮಹತ್ವದ ಪಾತ್ರ ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಜಾರ್ಖಂಡ್ನ ಹಜಾರಿ ಬಾಗ್ನ ಸರಪಂಚ್ವೊಬ್ಬರ ಸಂದೇಶವನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
ಪ್ರತಿ ವರ್ಷ ದೇಶದ ಬಹುತೇಕ ಪ್ರದೇಶ ನೀರಿನ ಸಮಸ್ಯೆ ಅನುಭವಿಸುತ್ತಿದೆ. ಇಂಥ ಭೀಕರ ಸಮಸ್ಯೆಯಿಂದ ಪಾರಾಗಲು ನೀರಿನ ಸಂರಕ್ಷಣೆಗೆ ಆದ್ಯತೆ ನೀಡುವುದು ಅವಶ್ಯಕ ಎಂದರು.
ಮಾನವಶಕ್ತಿ ಮತ್ತು ಸಹಕಾರದಿಂದ ನೀರಿನ ಸಮಸ್ಯೆ ಬಗೆಹರಿಸಬಹುದೆಂದು ನಂಬಿರುವುದಾಗಿ ಪ್ರಧಾನಿ ತಿಳಿಸಿದರು. ನೂತನ ಜಲಶಕ್ತಿ ಸಚಿವಾಲಯ ಸ್ಥಾಪಿಸುವುದಾಗಿ ತಿಳಿಸಿರುವ ಮೋದಿ, ಜಲಕ್ಷಾಮ ಎದುರಿಸುವಲ್ಲಿ ಈ ಸಚಿವಾಲಯ ಮಹತ್ವದ ಪಾತ್ರ ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಜಾರ್ಖಂಡ್ನ ಹಜಾರಿ ಬಾಗ್ನ ಸರಪಂಚ್ವೊಬ್ಬರ ಸಂದೇಶವನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.