ಆ್ಯಪ್ನಗರ

2019ರ ಅನೌಪಚಾರಿಕ ಶೃಂಗಸಭೆ ಭಾರತದಲ್ಲಿ: ಪ್ರಧಾನಿ ಮೋದಿ ಆಹ್ವಾನ ಒಪ್ಪಿದ ಚೀನಾ ಅಧ್ಯಕ್ಷ

2019ರಲ್ಲಿ ವುಹಾನ್ ಮಾದರಿಯ ಅನೌಪಚಾರಿಕ ಶೃಂಗಸಭೆಯನ್ನು ಭಾರತದಲ್ಲಿ ನಡೆಸೋಣ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನವನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಒಪ್ಪಿಕೊಂಡಿದ್ದಾರೆ. ಈ ವಿಚಾರವನ್ನು ಚೀನೀ ಅಧಿಕಾರಿಗಳು ಖಚಿತಪಡಿಸಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಪ್ರಕಟಿಸಿದ್ದಾರೆ.

TIMESOFINDIA.COM 9 Jun 2018, 4:10 pm
ಕ್ವಿಂಗ್ಡಾವೊ (ಚೀನ): 2019ರಲ್ಲಿ ವುಹಾನ್ ಮಾದರಿಯ ಅನೌಪಚಾರಿಕ ಶೃಂಗಸಭೆಯನ್ನು ಭಾರತದಲ್ಲಿ ನಡೆಸೋಣ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನವನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಒಪ್ಪಿಕೊಂಡಿದ್ದಾರೆ. ಈ ವಿಚಾರವನ್ನು ಚೀನೀ ಅಧಿಕಾರಿಗಳು ಖಚಿತಪಡಿಸಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಪ್ರಕಟಿಸಿದ್ದಾರೆ.
Vijaya Karnataka Web Modi- Xi Jinping


ಅನೌಪಚಾರಿಕ ಶೃಂಗಸಭೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

2020ರ ವೇಳೆಗೆ 10,000 ಕೋಟಿ ಡಾಲರ್‌ ದ್ವಿಪಕ್ಷೀಯ ವ್ಯಾಪಾರದ ಗುರಿ:

ಉಭಯ ದೇಶಗಳು 2020ರ ವೇಳೆಗೆ 10,000 ಕೋಟಿ ಡಾಲರ್‌ಗಳ ದ್ವಿಪಕ್ಷೀಯ ವ್ಯಾಪಾರದ ಗುರಿ ಹಾಕಿಕೊಳ್ಳೋಣ ಎಂದು ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿದರು.

ಈ ಮೊದಲು ಎರಡೂ ದೇಶಗಳು 2015ರ ವೇಳೆಗೆ 100 ಕೋಟಿ ಡಾಲರ್‌ಗಳ ದ್ವಿಪಕ್ಷೀಯ ವ್ಯಾಪಾರದ ಗುರಿ ನಿಗದಿಪಡಿಸಿದ್ದವು.

ಭಾರತ-ಚೀನಾ ದ್ವಿಪಕ್ಷೀಯ ವ್ಯಾಪಾರದ ಮೊತ್ತ ಕಳೆದ ವರ್ಷ ಮಾರ್ಚ್‌ ವೇಳೆಗೆ 8,444 ಕೋಟಿ ಡಾಲರ್‌ ತಲುಪಿದೆ ಎಂದು ಚೀನಾದ ಕಸ್ಟಂಸ್‌ ಇಲಾಖೆ ತಿಳಿಸಿದೆ.

ಚೀನಾದ ಸರಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಚೈನಾದ ಶಾಖೆಯನ್ನು ಮುಂಬಯಿಯಲ್ಲಿ ತೆರೆಯಲು ಭಾರತ ಅನುಮತಿ ನೀಡಿದೆ ಎಂದು ಗೋಖಲೆ ತಿಳಿಸಿದರು.

ವ್ಯಾಪಾರ ಮತ್ತು ಬಂಡವಾಳ ಹೂಡಿಕೆ ವಿಷಯಗಳ ಕುರಿತು ಕೆಲವು ಚರ್ಚೆಗಳು ನಡೆದವು. ಭಾರತದಿಂದ ಬಾಸ್ಮತಿಯೇತರ ಅಕ್ಕಿ ಮತ್ತು ಸಕ್ಕರೆ ಸಹಿತ ಕೃಷಿ ಉತ್ಪನ್ನಗಳ ರಫ್ತಿಗೆ ಚೀನಾದಿಂದ ಹೆಚ್ಚಿನ ಉತ್ತೇಜ ನೀಡಲಾಗುವುದು ಎಂದು ಅಧ್ಯಕ್ಷ ಕ್ಸಿ ಅವರು ಪ್ರಧಾನಿ ಮೋದಿ ಅವರಿಗೆ ಈ ಸಂದರ್ಭದಲ್ಲಿ ಭರವಸೆ ನೀಡಿದರೆಂದು ಗೋಖಲೆ ವಿವರಿಸಿದರು.


ಪ್ರಧಾನಿ ಮೋದಿಗೆ ಕ್ಸಿ ಆತ್ಮೀಯ ಸ್ವಾಗತ:
ಶಾಂಘಾಯ್‌ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಚೀನಾಗೆ ಆಗಮಿಸಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಚೀನಾ ಅಧ್ಯಕ್ಷ ಕ್ಸಿ ಜಿಂಗ್‌ಪಿಂಗ್ ಆತ್ಮೀಯವಾಗಿ ಸ್ವಾಗತಿಸಿದರು. ಭವಿಷ್ಯದ ಮುನ್ನೋಟದೊಂದಿಗೆ ದ್ವಿಪಕ್ಷೀಯ ಬಾಂಧವ್ಯಗಳನ್ನು ಮತ್ತಷ್ಟು ಸೌಹಾರ್ದಗೊಳಿಸುವ ನಿಟ್ಟಿನಲ್ಲಿ ಉಭಯ ನಾಯಕರು ಪರಸ್ಪರ ಭೇಟಿಯಾದರು.

ಚೀನಾ ಜತೆ ದ್ವಿಪಕ್ಷೀಯ ಸಂಬಂಧಗಳನ್ನು ವೃದ್ಧಿಸುವುದು, ವಾಣಿಜ್ಯ ಸಂಬಂಧಗಳ ಬಲವರ್ಧನೆಗೆ ಸಂಬಂಧಿಸಿದಂತೆ ವಿವಿಧ ಒಪ್ಪಂದಗಳಿಗೆ ಪ್ರಧಾನಿ ಮೋದಿ ಸಹಿ ಹಾಕಿದ್ದಾರೆ.


ಇತ್ತೀಚೆಗೆ ಅನೌಪಚಾರಿಕ ಭೇಟಿ ನೀಡಿದ ವೇಳೆ ಪ್ರಧಾನಿ ಮೋದಿ ಹಾಗೂ ಕ್ಸಿ ಜಿಂಗ್‌ ಅವರ ನಡುವೆ ನಡೆದಿದ್ದ ದ್ಚಿಪಕ್ಷೀಯ ಸಂಬಂಧಗಳ ವೃದ್ಧಿ ಸಂಬಂಧ ನಡೆದಿದ್ದ ಮಾತುಕತೆಗಳನ್ನು ಸಮ್ಮೇಳನದಲ್ಲಿ ಒಪ್ಪಂದಗಳ ಮೂಲಕ ಕಾರ್ಯರೂಪಕ್ಕೆ ತರಲಾಗಿದೆ ಎಂದು ತಿಳಿದು ಬಂದಿದೆ. ಉಭಯ ದೇಶಗಳ ನಡುವೆ ಭದ್ರತಾ ಪಡೆ, ಸಂವಹನದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಸೇರಿದಂತೆ ಆರ್ಥಿಕ ಅಭಿವೃದ್ಧಿ, ವ್ಯವಹಾಗಳು, ಗಡಿ ಸುರಕ್ಷತೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸಲಾಗಿದೆ ಆಂತೆಯೇ ದೊಕ್ಲಾಂ ವಿವಾದಕ್ಕೆ ಸಂಬಂಧಿಸಿದಂತೆಯೂ ಇಬ್ಬರು ನಾಯಕರು ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಾಂಘಾಯ್‌ ಕೋ-ಆಪರೇಷನ್‌ ಆರ್ಗನೈಸೇಷನ್‌ ಸಮ್ಮೇಳನದಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಟ, ಜಾಗತಿಕ ಮಟ್ಟದಲ್ಲಿ ಪರಿಸರ ಮಾಲಿನ್ಯ ತಡೆ, ಸಂರಕ್ಷಣೆ, ಕೃಷಿ ಹಾಗೂ ಆರೋಗ್ಯ, ವಾಣಿಜ್ಯ, ನೈಸರ್ಗಿಕ ವಿಪತ್ತು ನಿರ್ವಹಣೆ ಸೇರಿದಂತೆ ಇನ್ನಿತರ ಅನೇಕ ವಿಚಾರಗಳ ಬಗ್ಗೆ ಚರ್ಚೆಯಾಗಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಎಸ್‌ಸಿಒದ ಸದಸ್ಯವಾಗಿರುವ ಭಾರತ, ಉಳಿದ ದೇಶಗಳೊಂದಿಗೆ ಬಾಂಧವ್ಯ ಹಾಗೂ ಎಸ್‌ಸಿಒನ ಅಜೆಂಡಾವನ್ನು ಅನುಷ್ಠಾನಗೊಳಿಸಲು ಅನುಕೂಲಕರ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ. ಸಮ್ಮೇಳನದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌, ಇರಾನ್‌ ಅಧ್ಯಕ್ಷ ಹಸ್ಸನ್‌ ರೌಹನಿ , ಪಾಕಿಸ್ತಾನ ಅಧ್ಯಕ್ಷ ಮಹಮ್ನೂನ್‌ ಹುಸೇನ್‌, ಚೀನ ಅಧ್ಯಕ್ಷ ಕ್ಸಿ ಮತ್ತಿತರರು ಸಮ್ಮೇಳನದಲ್ಲಿದ್ದಾರೆ. ಪ್ರಧಾನಿ ಮೋದಿ

ದೇಶದ ಆರ್ಥಿಕ ಬೆಳವಣಿಗೆಗೆ ಪೂರಕವಾಗುವಂತೆ ವಿದೇಶಿ ಹೂಡಿಕೆ, ಭಯೋತ್ಪಾದನೆ ನಿಗ್ರಹ ಕುರಿತು ಪ್ರಧಾನಿ ಮೋದಿ ಸಮ್ಮೇಳನದಲ್ಲಿ ಚರ್ಚಿಸಲಾಗುವುದು ಎನ್ನಲಾಗಿದೆ.

ಚೀನಾ ಪ್ರವಾಸದ ಕುರಿತು ವಕ್ತಾರ ರವೀಶ್‌ ಕುಮಾರ್‌ ಟ್ವೀಟ್ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ