ಆ್ಯಪ್ನಗರ

ಸಿಹಿ ಕ್ರಾಂತಿಗೆ ಪ್ರಧಾನಿ ನರೇಂದ್ರ ಮೋದಿ ಕರೆ

ದೇಶದಲ್ಲಿ ಇನ್ನು ಮುಂದೆ ಸಿಹಿ ಕ್ರಾಂತಿ ನಡೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ರೈತರಲ್ಲಿ ಆಗ್ರಹಿಸಿದ್ದು, ಡೈರಿ ಉದ್ಯಮದಲ್ಲಿ ಜೇನು ಸಾಕಣೆ ಕೃಷಿಯನ್ಮು ಹೆಚ್ಚು ಅಭಿವೃದ್ದಿ ಪಡಿಸುವಂತೆ ಪ್ರಧಾನಿ ಕರೆ ನೀಡಿದ್ದಾರೆ.

TNN 17 Sep 2017, 9:23 pm
ಅರ್ಮೆಲಿ: ದೇಶದಲ್ಲಿ ಇನ್ನು ಮುಂದೆ ಸಿಹಿ ಕ್ರಾಂತಿ ನಡೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದು, ಡೈರಿ ಉದ್ಯಮದಲ್ಲಿ ಜೇನು ಸಾಕಣೆ ಕೃಷಿಯನ್ಮು ಹೆಚ್ಚು ಅಭಿವೃದ್ದಿ ಪಡಿಸುವಂತೆ ಪ್ರಧಾನಿ ತಿಳಿಸಿದ್ದಾರೆ.
Vijaya Karnataka Web pm narendra modi calls for sweet revolution in the country
ಸಿಹಿ ಕ್ರಾಂತಿಗೆ ಪ್ರಧಾನಿ ನರೇಂದ್ರ ಮೋದಿ ಕರೆ


ಗುಜರಾತ್‌ನ ಅಮ್ರೆಲಿನಲ್ಲಿ ಏರ್ಪಡಿಸಿದ್ದ ಸತ್ಕಾರ್‌ ಸಮ್ಮೇಳನದಲ್ಲಿ ಮಾತನಾಡಿರುವ ಮೋದಿ, ಪ್ರತಿಯೊಬ್ಬ ರೈತ ತಮ್ಮ ತೋಟದಲ್ಲಿ ಕನಿಷ್ಠ 50 ಜೇನುನೊಣದ ಗೂಡನ್ನು ಇರಿಸಲು ಆರಂಭಿಸಿದರೆ, ವರ್ಷದಲ್ಲಿ ಎರಡು ಲಕ್ಷಕ್ಕೂ ಅಧಿಕ ಹಣವನ್ನು ಗಳಿಸಬಹುದು. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಈ ಕೃಷಿಯನ್ನು ಪೋಷಿಸಬೇಕು' ಎಂದು ಮೋದಿ ಆಗ್ರಹಿಸಿದ್ದಾರೆ.

ಅಲ್ಲದೇ ಕರಾವಳಿ ಪ್ರದೇಶಕ್ಕೂ ಹೆಚ್ಚಿನ ಒತ್ತು ನೀಡಿರುವುದಾಗಿ ಹೇಳಿರುವ ಮೋದಿ, ಗೋಗೋ ದೋಣಿ ಸೇವೆಯಂತಹ ಹೊಸ ಯೋಜನೆಗಳಿಂದ ಗುಜರಾತ್‌ ನೀಲಿ ಕ್ರಾಂತಿಯನ್ನೇ ಮಾಡಿದೆ. ಗೋಗೋ ಸೇವೆಯಿಂದ ಸ್ಥಳೀಯ ವ್ಯಾಪಾರಿಗಳು ಮತ್ತು ಕೈಗಾರಿಕೋಧ್ಯಮಿಗಳು ತಮ್ಮ ಸರಕನ್ನು ಬೇರೆಡೆಗೆ ಸಾಗಿಸಲು ಸುಲಭವಾಗಿದೆ' ಎಂದು ಮೋದಿ ಹೇಳಿದ್ದಾರೆ.

ಇದೇ ವೇಳೆ ಕೇಂದ್ರ ಶೀಘ್ರದಲ್ಲೇ ಮರದ ದಿಮ್ಮಿಗಳನ್ನು ಮಾರಾಟಮಾಡಲು ರೈತರು ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಮಾರಾಟ ಮಾಡುವ ಕಾನೂನನ್ನು ತರಲಾಗುವುದು ಎಂದು ಹೇಳಿರುವ ಪ್ರಧಾನಿ, ಈ ಕಾನೂನು ಜಾರಿದಾಯಾದ ಬಳಿಕ ರೈತರು ತಮ್ಮ ನೆಲದಲ್ಲಿ ತುಂಡಿರಿಸಿದ ದಿಮ್ಮಿಗಳನ್ನು ಮಾರಾಟ ಮಾಡಿ ಅಧಿಕ ಗಳಿಕೆ ಮಾಡಬಹುದು ಎಂದಿದ್ದಾರೆ.

pm narendra modi calls for sweet revolution in the country

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ