ಅಮರಾವತಿ: ಮಾತುಗಳ ಸರದಾರ ಪ್ರಧಾನಿ ನರೇಂದ್ರ ಮೋದಿ ಅವರಿಂದ ಈ ದೇಶಕ್ಕೆ ಹೇಳಿಕೊಳ್ಳುವ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಟೀಕಿಸಿದ್ದಾರೆ. ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಕುರಿತು ಸಂಸತ್ತಿನಲ್ಲಿ ಭರವಸೆ ನೀಡಿದ ಹೊರತಾಗಿಯೂ ಅದನ್ನು ಮೋದಿ ಸರಕಾರ ತಿರಸ್ಕರಿಸಿತು ಎಂದು ಕಿಡಿಕಾರಿರುವ ನಾಯ್ಡು, ಅವರಿಂದ ದೇಶಕ್ಕೆ ಏನೂ ಒಳಿತಾಗಿಲ್ಲ, ಸ್ವಂತ ಗುಜರಾತನ್ನು 12 ವರ್ಷ ಆಳಿದರೂ ಅಲ್ಲಿ ಹೇಳಿಕೊಳ್ಳುವ ಯಾವ ಪ್ರಗತಿಯೂ ಸಾಧ್ಯವಾಗಿಲ್ಲ. ಆದರೂ ತಾವು ಘನವಾದದ್ದನ್ನು ಸಾಧಿಸಿರುವುದಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ವಾಸ್ತವವಾಗಿ ಅವರು ಹುಸಿ ಭರವಸೆಗಳ 'ಪೊಳ್ಳು ಮನುಷ್ಯ' ಎಂದು ಜರಿದರು.
ಮೋದಿ ಕೊಡುಗೆ ಏನೂ ಇಲ್ಲ ಎಂದ ನಾಯ್ಡು
ಪ್ರಧಾನಿ ಮೋದಿ ಪೊಳ್ಳು ಮನುಷ್ಯ ಎಂದು ಜರಿದ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಅವರು ಚುನಾವಣೆಗಳನ್ನು ಗೆಲ್ಲಲು ಟನ್ಗಟ್ಟಲೆ ಹಣ ಖರ್ಚು ಮಾಡುತ್ತಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, 12 ವರ್ಷಗಳ ಕಾಲ ಗುಜರಾತ್ ಸಿಎಂ ಆಗಿದ್ದಾಗಲೂ ಅವರು ಏನೂ ಮಾಡಿಲ್ಲ. ಆದರೆ, ದೇಶವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಅವರನ್ನು ನಾವೆಲ್ಲ ನಂಬಿದ್ದೆವು ಎಂದು ಟೀಕೆ ಮಾಡಿದ್ದಾರೆ.
Vijaya Karnataka 24 Dec 2018, 12:00 am
ಹೈಲೈಟ್ಸ್:
- ನರೇಂದ್ರ ಮೋದಿ ಅವರಿಂದ ಈ ದೇಶಕ್ಕೆ ಹೇಳಿಕೊಳ್ಳುವ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ: ಚಂದ್ರಬಾಬು ನಾಯ್ಡು
- ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಕುರಿತು ಸಂಸತ್ತಿನಲ್ಲಿ ಭರವಸೆ ನೀಡಿ ತಿರಸ್ಕರಿಸಿದರು
- ವಾಸ್ತವವಾಗಿ ಪ್ರಧಾನಿ ಮೋದಿ ಹುಸಿ ಭರವಸೆಗಳ 'ಪೊಳ್ಳು ಮನುಷ್ಯ' ಎಂದು ಜರಿದ ಆಂಧ್ರಪ್ರದೇಶ ಮುಖ್ಯಮಂತ್ರಿ