ಆ್ಯಪ್ನಗರ

ಕೊರೋನಾ ಭೀತಿ: ವದಂತಿಗಳಿಗೆ ಕಿವಿಗೊಡದಿರಿ- ಜನತೆಗೆ ಪ್ರಧಾನಿ ಮೋದಿ ಮನವಿ

ಭಾರತದಲ್ಲೂ ಕೊರೊನಾ ವೈರಸ್‌ ಹರಡುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ದೇಶದ ಜನತೆಗೆ ಸಂದೇಶ ನೀಡಿದ್ದಾರೆ. ಕೊರೋನಾ ವೈರಸ್ ಕುರಿತ ವದಂತಿಗಳಿಗೆ ಕಿವಿಗೊಡಬೇಡಿ, ಸೋಂಕಿನ ಕುರಿತು ಅನುಮಾನಗಳಿದ್ದಲ್ಲಿ ಡಾಕ್ಟರ್‌ಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ ಎಂದು ತಿಳಿಸಿದ್ದಾರೆ.

Vijaya Karnataka Web 7 Mar 2020, 1:38 pm
ನವದೆಹಲಿ: ಕೊರೊನಾ ಹಾವಳಿ ಜಗತ್ತನೇ ನಡುಗಿಸುತ್ತಿದೆ. ವಿಶ್ವ ವ್ಯಾಪಿ ಹರಡುತ್ತಿದ್ದು, ಎಲ್ಲ ರಾಷ್ಟ್ರಗಳಲ್ಲೂ ಆತಂಕ ಮೂಡಿದೆ. ಇದೀಗ ಭಾರತದಲ್ಲೂ ವೈರಸ್‌ ಹರಡುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ದೇಶದ ಜನತೆಗೆ ಸಂದೇಶ ನೀಡಿದ್ದಾರೆ.
Vijaya Karnataka Web modi


ಕೊರೋನಾ ವೈರಸ್ ಕುರಿತ ವದಂತಿಗಳಿಗೆ ಕಿವಿಗೊಡಬೇಡಿ, ಸೋಂಕಿನ ಕುರಿತು ಯಾವುದೇ ಅನುಮಾನಗಳಿದ್ದಲ್ಲಿ ಸಮೀಪವಿರು ಆರೋಗ್ಯ ಕೇಂದ್ರದಲ್ಲಿ ಡಾಕ್ಟರ್‌ಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ ಎಂದು ತಿಳಿಸಿದ್ದಾರೆ.



ಈ ಕುರಿತು ಜನೌಷಧಿ ಸಂವಾದದಲ್ಲಿ ಕೊರೊನಾ ವೈರಸ್‌ ಕುರಿತು ಮಾತನಾಡಿದರು. ಅದು ತಿನ್ನಬೇಡಿ, ಇದು ತಿನ್ನ ಎಂದು ಜನರು ಸಂದೇಶ ನೀಡುತ್ತಾರೆ. ಇವಕ್ಕೆಲ್ಲಾ ಕಿವಿಗೊಡಬೇಡಿ. ಕೊರೋನಾ ವೈರಸ್ ಬಗ್ಗೆ ಆತಂಕ ಪಡಬೇಕಾಗಿಲ್ಲ. ಮುಂಜಾಗ್ರತೆ ವಹಿಸಿ ಎಂದು ಹೇಳಿದ್ದಾರೆ.

ಕೊರೊನಾ ಭೀತಿ: ಕೇಂದ್ರದಿಂದ ಉದ್ಯೋಗಿಗಳ ಬಯೋಮೆಟ್ರಿಕ್‌ ಹಾಜರಾತಿಗೆ ಕೊಕ್‌

ವೈರಸ್ ಬಗ್ಗೆ ನಿಮಗೆ ಏನಾದರೂ ಸಂದೇಹ, ಸಂಶಯಗಳು ಬಂದಿದ್ದೇ ಆದರೆ, ಕೂಡಲೇ ವೈದ್ಯರನ್ನು ಸಂಪರ್ಕಿಸಿ. ವೈದ್ಯರ ಸಲಹೆ ಬಳಿಕ ನಿಮ್ಮ ಮುಂದಿನ ನಿಲುವನ್ನು ತೆಗೆದುಕೊಳ್ಳಿ. ಕೊರೋನಾ ವೈರಸ್ ಹರಡುತ್ತಿರುವುದರಿಂದ ಸ್ವಚ್ಛತೆ ವೈಯಕ್ತಿಕವಾಗಿ ಸ್ವಚ್ಛತೆ ಕಾಪಾಡಿ. ಮಾಸ್ಕ್ ಗಳು ಹಾಗೂ ಕೈಚೀಲಗಳನ್ನು ಧರಿಸಿ. ಕೈಕುಲುಕುವುದನ್ನು ನಿಯಂತ್ರಿಸಿ. ಭಾರತದ ಸಂಪ್ರದಾಯದಂತೆ ನಮಸ್ಕರಿಸಿ ಶುಭಾಶಯ ತಿಳಿಸಿ ಎಂದು ತಿಳಿಸಿದ್ದಾರೆ.

ಸರಳವಾಗಿ ಮಾಸ್ಕ್ ತಯಾರಿಸಿಕೊಳ್ಳುವುದು ಹೇಗೆ ಅಂತ ತೋರಿಸಿಕೊಟ್ಟ ಉಪಾಸನಾ

ಇದೀಗ ಇಡೀ ವಿಶ್ವವೇ ಶುಭಾಶಯ ತಿಳಿಸಲು ಭಾರತದ ಸಂಪ್ರದಾಯದಂತೆ ನಮಸ್ತೆಯನ್ನು ಬಳಕೆ ಮಾಡುತ್ತಿದೆ. ನಾವು ಕೂಡ ಅದನ್ನೇ ಅನುಸರಿಸೋಣ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ