‘ಒಂದು ದೇಶ ಒಂದು ಚುನಾವಣೆ’ ದೇಶದ ಅಗತ್ಯ..! ಅನುಷ್ಠಾನದ ಬಗ್ಗೆ ಯೋಚಿಸಿ ಎಂದ ಪ್ರಧಾನಿ ಮೋದಿ
'ಒಂದು ದೇಶ ಒಂದು ಚುನಾವಣೆ'ಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದ್ದು, ಅದು ಈಗ ಭಾರತದ ಅಗತ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಚರ್ಚೆಯ ಹಂತವನ್ನು ಮೀರಿ ಅನುಷ್ಠಾನದ ಬಗ್ಗೆ ಯೋಚಿಸುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
Agencies 26 Nov 2020, 11:48 pm
ಕೇವಾಡಿಯಾ (ಗುಜರಾತ್): 'ಒಂದು ದೇಶ ಒಂದು ಚುನಾವಣೆ' ಈಗ ಭಾರತದ ಅಗತ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಚುನಾವಣಾ ಪ್ರಕ್ರಿಯೆಯಿಂದಾಗಿ ಹಲವು ದಿನಗಳ ಕಾಲ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಳ್ಳುತ್ತವೆ. ಜತೆಗೆ ಅನಗತ್ಯ ಚುನಾವಣಾ ವೆಚ್ಚಗಳಿಗೆ ಕಡಿವಾಣ ಹಾಕಬೇಕಿದೆ. ಈ ದಿಸೆಯಲ್ಲಿ ಒಂದು ದೇಶ ಒಂದು ಚುನಾವಣೆ ಪರಿಕಲ್ಪನೆ ಅತ್ಯಂತ ಸೂಕ್ತವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ರಾಷ್ಟ್ರೀಯ ಚುನಾವಣಾ ಅಧಿಕಾರಿಗಳ 80ನೇ ಸಮಾವೇಶ ಉದ್ದೇಶಿಸಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ, ದೇಶದಲ್ಲಿ ತಿಂಗಳುಗಳ ಕಾಲ ಚುನಾವಣೆ ನಡೆಯುತ್ತಲೇ ಇರುತ್ತವೆ. ಇದರಿಂದ ಸಿಬ್ಬಂದಿ ಮೇಲೆ ಆಗುವ ಒತ್ತಡ ಹೇಳತೀರದು. ವೆಚ್ಚವೂ ವಿಪರೀತ. ಚುನಾವಣೆ ನೀತಿಸಂಹಿತೆ ಹೆಸರಿನಲ್ಲಿ ಈ ಅವಧಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೂ ತಡೆ ಉಂಟಾಗುತ್ತದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂದರೆ ಏಕ ಕಾಲದ ಚುನಾವಣೆ ಮಾತ್ರ. ಈ ಬಗ್ಗೆ ಕೆಲವು ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಈಗ ಚರ್ಚೆಯ ಹಂತವನ್ನು ಮೀರಿ ಅನುಷ್ಠಾನದ ಕುರಿತು ಯೋಚಿಸುವ ಸಮಯ ಬಂದಿದೆ ಎಂದು ಹೇಳಿದರು.
ಲೋಕಸಭೆ, ವಿಧಾನಸಭೆ ಮತ್ತು ಪಂಚಾಯಿತಿ ಚುನಾವಣೆಗೆ ಒಂದೇ ಮತದಾರರ ಪಟ್ಟಿ ಸಿದ್ಧಪಡಿಸಬೇಕು. ಪ್ರತ್ಯೇಕ ವೋಟರ್ ಲಿಸ್ಟ್ ತಯಾರಿಸುವುದರಿಂದ ಮಾನವ ಸಂಪನ್ಮೂಲದ ಅಪವ್ಯಯವಾಗುತ್ತದೆ ಎಂದು ಹೇಳಿದರು. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗವು ಉತ್ತಮ ಸಮನ್ವಯದಿಂದ ಕೆಲಸ ಮಾಡಬೇಕು. ಪ್ರತಿ ನಿರ್ಧಾರದ ಹಿಂದೆ ರಾಷ್ಟ್ರೀಯ ಹಿತಾಸಕ್ತಿಯೇ ತಳಹದಿಯಾಗಬೇಕು ಎಂದು ಸಲಹೆ ಮಾಡಿದರು.
26/11 ಹುತಾತ್ಮರಿಗೆ ಮೋದಿ ನಮನ: ಉಗ್ರವಾದದೊಂದಿಗೆ ವ್ಯವಹರಿಸುವ ಭಾರತದ ನೀತಿ ಬದಲಾಗಿದೆ ಎಂದ ಪ್ರಧಾನಿ!
2014ರಲ್ಲಿ ಅಧಿಕಾರಕ್ಕೆ ಬಂದ ಆರಂಭದ ದಿನಗಳಲ್ಲಿಯೇ ಪ್ರಧಾನಿ ಮೋದಿ ಅವರು, ಇಂತಹ ಚುನಾವಣೆ ಸುಧಾರಣೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದರು. ಕಳೆದ ಆರು ವರ್ಷಗಳಿಂದ ಅದರ ವಿವಿಧ ಸಾಧ್ಯತೆಗಳ ಬಗ್ಗೆ ಚಿಂತಿಸಿರುವ ಅವರು, ಈಗ ಸುಧಾರಣೆಯ ಕೆಲವು ನಿರ್ದಿಷ್ಟ ಮಾದರಿಗಳನ್ನು ಜನರ ಮುಂದಿಟ್ಟಿದ್ದಾರೆ.
ನವೆಂಬರ್ 28ಕ್ಕೆ ಸೆರಂ ಇನ್ಸ್ಟಿಟ್ಯೂಟ್ಗೆ ಪ್ರಧಾನಿ ಮೋದಿ ಭೇಟಿ, ಲಸಿಕೆ ಉತ್ಪಾದನೆ ಪರಿಶೀಲನೆ
ರಾಷ್ಟ್ರೀಯ ಚುನಾವಣಾ ಅಧಿಕಾರಿಗಳ 80ನೇ ಸಮಾವೇಶ ಉದ್ದೇಶಿಸಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ, ದೇಶದಲ್ಲಿ ತಿಂಗಳುಗಳ ಕಾಲ ಚುನಾವಣೆ ನಡೆಯುತ್ತಲೇ ಇರುತ್ತವೆ. ಇದರಿಂದ ಸಿಬ್ಬಂದಿ ಮೇಲೆ ಆಗುವ ಒತ್ತಡ ಹೇಳತೀರದು. ವೆಚ್ಚವೂ ವಿಪರೀತ. ಚುನಾವಣೆ ನೀತಿಸಂಹಿತೆ ಹೆಸರಿನಲ್ಲಿ ಈ ಅವಧಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೂ ತಡೆ ಉಂಟಾಗುತ್ತದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂದರೆ ಏಕ ಕಾಲದ ಚುನಾವಣೆ ಮಾತ್ರ. ಈ ಬಗ್ಗೆ ಕೆಲವು ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಈಗ ಚರ್ಚೆಯ ಹಂತವನ್ನು ಮೀರಿ ಅನುಷ್ಠಾನದ ಕುರಿತು ಯೋಚಿಸುವ ಸಮಯ ಬಂದಿದೆ ಎಂದು ಹೇಳಿದರು.
ಲೋಕಸಭೆ, ವಿಧಾನಸಭೆ ಮತ್ತು ಪಂಚಾಯಿತಿ ಚುನಾವಣೆಗೆ ಒಂದೇ ಮತದಾರರ ಪಟ್ಟಿ ಸಿದ್ಧಪಡಿಸಬೇಕು. ಪ್ರತ್ಯೇಕ ವೋಟರ್ ಲಿಸ್ಟ್ ತಯಾರಿಸುವುದರಿಂದ ಮಾನವ ಸಂಪನ್ಮೂಲದ ಅಪವ್ಯಯವಾಗುತ್ತದೆ ಎಂದು ಹೇಳಿದರು. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗವು ಉತ್ತಮ ಸಮನ್ವಯದಿಂದ ಕೆಲಸ ಮಾಡಬೇಕು. ಪ್ರತಿ ನಿರ್ಧಾರದ ಹಿಂದೆ ರಾಷ್ಟ್ರೀಯ ಹಿತಾಸಕ್ತಿಯೇ ತಳಹದಿಯಾಗಬೇಕು ಎಂದು ಸಲಹೆ ಮಾಡಿದರು.
26/11 ಹುತಾತ್ಮರಿಗೆ ಮೋದಿ ನಮನ: ಉಗ್ರವಾದದೊಂದಿಗೆ ವ್ಯವಹರಿಸುವ ಭಾರತದ ನೀತಿ ಬದಲಾಗಿದೆ ಎಂದ ಪ್ರಧಾನಿ!
2014ರಲ್ಲಿ ಅಧಿಕಾರಕ್ಕೆ ಬಂದ ಆರಂಭದ ದಿನಗಳಲ್ಲಿಯೇ ಪ್ರಧಾನಿ ಮೋದಿ ಅವರು, ಇಂತಹ ಚುನಾವಣೆ ಸುಧಾರಣೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದರು. ಕಳೆದ ಆರು ವರ್ಷಗಳಿಂದ ಅದರ ವಿವಿಧ ಸಾಧ್ಯತೆಗಳ ಬಗ್ಗೆ ಚಿಂತಿಸಿರುವ ಅವರು, ಈಗ ಸುಧಾರಣೆಯ ಕೆಲವು ನಿರ್ದಿಷ್ಟ ಮಾದರಿಗಳನ್ನು ಜನರ ಮುಂದಿಟ್ಟಿದ್ದಾರೆ.
ನವೆಂಬರ್ 28ಕ್ಕೆ ಸೆರಂ ಇನ್ಸ್ಟಿಟ್ಯೂಟ್ಗೆ ಪ್ರಧಾನಿ ಮೋದಿ ಭೇಟಿ, ಲಸಿಕೆ ಉತ್ಪಾದನೆ ಪರಿಶೀಲನೆ