ಆ್ಯಪ್ನಗರ

2300 ಕಿ.ಮೀ ಸಾಗರದಾಳದ ಕೇಬಲ್‌ ಯೋಜನೆ ಆ. 10ರಂದು ಪ್ರಧಾನಿಯಿಂದ ಉದ್ಘಾಟನೆ

​​ಇದರಿಂದ ಅಂಡಮಾನ್‌ ಮತ್ತು ನಿಕೋಬಾರ್‌ ಪ್ರದೇಶದ ಜನರ ಇಂಟರ್ನೆಟ್‌ ಬಿಲ್‌ ಅಗ್ಗವಾಗಲಿದ್ದು, ಪ್ರಸ್ತುತ ಅಲ್ಲಿನವರು ದುಬಾರಿ ಬೆಲೆ ತೆತ್ತು ಇಂಟರ್ನೆಟ್‌ ಸೇವೆ ಪಡೆಯುವುದು ತಪ್ಪಲಿದೆ. ಜೊತೆಗೆ ಡೇಟಾ ವೇಗವು ಪ್ರತಿ ಸೆಕೆಂಡ್‌ಗೆ 400 ಗಿಗಾ ಬೈಟ್‌ನಷ್ಟು ವೃದ್ಧಿಸಲಿದೆ.

Agencies 7 Aug 2020, 11:16 pm
ಹೊಸದಿಲ್ಲಿ: ಅಂಡಮಾನ್‌- ನಿಕೋಬಾರ್‌ ದ್ವೀಪದಿಂದ ಚೆನ್ನೈಗೆ ಸಂಪರ್ಕ ಕಲ್ಪಿಸುವ 2,300 ಕಿ.ಮೀ ಸಾಗರದಾಳದ ಕೇಬಲ್‌ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಆಗಸ್ಟ್‌ 10ರಂದು ಉದ್ಘಾಟಿಸಲಿದ್ದಾರೆ.
Vijaya Karnataka Web Undersea Cable


1,224 ಕೋಟಿ ರೂಪಾಯಿ ಬೃಹತ್‌ ಮೊತ್ತದ ಈ ಯೋಜನೆಗೆ 2018ರ ಡಿಸೆಂಬರ್‌ 30ರಂದು ಪೋರ್ಟ್‌ಬ್ಲೇರ್‌ನಲ್ಲಿ ನರೇಂದ್ರ ಮೋದಿಯವರು ಅಡಿಗಲ್ಲು ಹಾಕಿದ್ದರು. ಯೋಜನೆ ನಿಗದಿತ ಅವಧಿಯಲ್ಲಿ ಮುಕ್ತಾಯವಾಗಿದ್ದು, ಉದ್ಘಾಟನೆಗೆ ಸಜ್ಜಾಗಿದೆ.

ಈ ಕೇಬಲ್‌ ಸೇವೆ ಅಂಡಮಾನ್‌ ನಿಕೋಬಾರ್‌ನ ರಾಜಧಾನಿ ಪೋರ್ಟ್‌ ಬ್ಲೇರ್‌ನಿಂದ ಸ್ವರಾಜ್‌ ದ್ವೀಪ್‌, ಲಿಟಲ್‌ ಅಂಡಮಾನ್‌, ಕಾರ್‌ ನಿಕೋಬಾರ್‌, ಕಮೋರ್ತಾ, ಗ್ರೇಟ್‌ ನಿಕೋಬಾರ್‌, ಲಾಂಗ್‌ ಐಲೆಂಡ್‌ ಹಾಗೂ ರಂಗತ್‌ ದ್ವೀಪಕ್ಕೂ ದೊರೆಯಲಿದೆ.

ಇದರಿಂದ ಡೇಟಾ ವೇಗವು ಪ್ರತಿ ಸೆಕೆಂಡ್‌ಗೆ 400 ಗಿಗಾ ಬೈಟ್‌ನಷ್ಟು ವೃದ್ಧಿಸಲಿದ್ದು, ಪ್ರಸ್ತುತ ಇರುವ ಸಂಪರ್ಕ ವೇಗಕ್ಕಿಂತ ನಾಲ್ಕು ಪಟ್ಟು ಹೆಚ್ಚಳವಾಗಲಿದೆ. ಈ ಸಂಪರ್ಕದಿಂದಾಗಿ ಅಂಡಮಾನ್‌ ಮತ್ತು ನಿಕೋಬಾರ್‌ ಪ್ರದೇಶದ ಜನರ ಇಂಟರ್ನೆಟ್‌ ಬಿಲ್‌ ಅಗ್ಗವಾಗಲಿದ್ದು, ಪ್ರಸ್ತುತ ಅಲ್ಲಿನವರು ದುಬಾರಿ ಬೆಲೆ ತೆತ್ತು ಇಂಟರ್ನೆಟ್‌ ಸೇವೆ ಪಡೆಯುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ