ಆ್ಯಪ್ನಗರ

ಮಾಜಿ ಸಿಎಂ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಪ್ರಧಾನಿ ಮೋದಿ

ಕೇಶುಭಾಯಿ ಪಟೇಲ್ ಅವರಿಗೂ, ಮೋದಿ ಅವರಿಗೂ ಬಹಳ ಹಳೆಯ ಸಂಬಂಧವಿದೆ. ಪಟೇಲ್ ಅವರನ್ನು ತಮ್ಮ ರಾಜಕೀಯ ಗುರುಗಳೆಂದು ಭಾವಿಸಿರುವ ಮೋದಿ ತಾವು ಗುಜರಾತಿನ ಮುಖ್ಯಮಂತ್ರಿ ಆದಾಗಲೆಲ್ಲ ಚುನಾವಣೆ ಗೆದ್ದ ಕೂಡಲೇ ಪಟೇಲ್ ಅವರ ಬಳಿ ಹೋಗಿ ಆಶೀರ್ವಾದ ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿದೆ.

Navbharat Times 5 Mar 2019, 3:08 pm
ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ಗುಜರಾತ್ ಪ್ರವಾಸ ಇಂದು ಎರಡನೆಯ ದಿನಕ್ಕೆ ಕಾಲಿರಿಸಿದೆ. ಇಂದವರು ಗುಜರಾತಿನ ಅಡಾಲ್ಜ್‌ನಲ್ಲಿ ಶಿಕ್ಷಣ ಭವನ ಮತ್ತು ವಿದ್ಯಾರ್ಥಿ ಭವನವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಡೆದ ವಿಶೇಷ ದೃಶ್ಯವೊಂದು ನೆರೆದವರ ಗಮನ ಸೆಳೆಯಿತು. ವೇದಿಕೆಯ ಮೇಲೆ ಗುಜರಾತಿನ ಮಾಜಿ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ ಕೂಡ ಇದ್ದರು. ಅವರನ್ನು ಮೋದಿ ತಮ್ಮ ರಾಜಕೀಯ ಗುರು ಎಂದು ನಂಬುತ್ತಾರೆ. ವೇದಿಕೆಯ ಮೇಲಿದ್ದ ಎಲ್ಲರಿಗೂ ಹಸ್ತಲಾಘವ ಮಾಡುತ್ತ, ಪಟೇಲ್ ಮುಂದೆ ಬಂದಾಗ ಅವರ ಪಾದ ಸ್ಪರ್ಶಿಸಿ ನಮಸ್ಕರಿಸಿದರು. ಶಿಷ್ಯ ಬಾಗುತ್ತಿದ್ದಂತೆ ಗುರು ಅವರನ್ನು ಹಿಡಿದೆತ್ತಿ ತಬ್ಬಿಕೊಂಡರು. ಬಳಿಕ ಪ್ರಧಾನಿ ಅಲ್ಲೇ ಸ್ವಲ್ಪ ಹೊತ್ತು ನಿಂತು ಉಭಯ ಕುಶಲೋಪರಿ ನಡೆಸಿದರು.
Vijaya Karnataka Web Modi- Patel


ಕೇಶುಭಾಯಿ ಪಟೇಲ್ ಅವರಿಗೂ, ಮೋದಿ ಅವರಿಗೂ ಬಹಳ ಹಳೆಯ ಸಂಬಂಧವಿದೆ. ಪಟೇಲ್ ಅವರನ್ನು ತಮ್ಮ ರಾಜಕೀಯ ಗುರುಗಳೆಂದು ಭಾವಿಸಿರುವ ಮೋದಿ ತಾವು ಗುಜರಾತಿನ ಮುಖ್ಯಮಂತ್ರಿ ಆದಾಗಲೆಲ್ಲ ಚುನಾವಣೆ ಗೆದ್ದ ಕೂಡಲೇ ಪಟೇಲ್ ಅವರ ಬಳಿ ಹೋಗಿ ಆಶೀರ್ವಾದ ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿದೆ.


ಭೂಕಂಪದ ಬಳಿಕ ಪಟೇಲ್ ಸರಕಾರದ ಆಡಳಿತದ ಕ್ಷಮತೆಯ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು. ಹೀಗಾಗಿ 2001ರಲ್ಲಿ ಬಿಜೆಪಿ ಪಟೇಲ್ ಬದಲಿಗೆ ಮೋದಿ ಅವರನ್ನೇ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳ್ಳಿರಿಸಿತು. ಪಟೇಲ್ ಪಾಲಿಗಿದೆ ಬಹುದೊಡ್ಡ ಆಘಾತವಾಗಿತ್ತು. ಈ ಹಿನ್ನೆಲೆಯಲ್ಲಿ ಅವರಿಬ್ಬರ ನಡುವೆ ಬಿರುಕು ಕಾಣಿಸಿಕೊಂಡಿತು. ಆದರೆ ಮೋದಿ ಪಟೇಲ್ ಅವರನ್ನು ತಮ್ಮ ಗುರು ಎಂದು ಹೇಳುವುದನ್ನು ಮಾತ್ರ ನಿಲ್ಲಿಸಲಿಲ್ಲ. ಆದರೆ ಪಟೇಲ್ ಆಗಾಗ ಮೋದಿ ವಿರುದ್ಧ ಕಿಡಿ ಕಾರುತ್ತಲೇ ಬಂದಿದ್ದರು.

2012ರಲ್ಲಿ ಹೊಸ ಪಕ್ಷ ಸ್ಥಾಪಿಸಿದ್ದ ಪಟೇಲ್

1980 ರಿಂದ 2012- ಇಷ್ಟೊಂದು ದೀರ್ಘಕಾಲ ಗುಜರಾತ್ ಬಿಜೆಪಿಯ ಅವಿಭಾಜ್ಯ ಅಂಗವಾಗಿದ್ದ ಪಟೇಲ್, 1995ರಲ್ಲಿ ಮುಖ್ಯಮಂತ್ರಿ ಕೂಡ ಆಗಿದ್ದರು. ಆದರೆ 2012ರಲ್ಲಿ ಬಿಜೆಪಿಯಿಂದ ದೂರವಾಗಿ ಗುಜರಾತ್ ಪರಿವರ್ತನ್ ಪಾರ್ಟಿಯನ್ನು ಕಟ್ಟಿದ್ದರು.

ಈ ಹಿಂದೆ ಗುಜರಾತಿನ ಹಾಲಿ ಸಿಎಂ ವಿಜಯ್ ರೂಪಾನಿ ಪ್ರಮಾಣವಚನ ಸಂದರ್ಭದಲ್ಲಿ ಕೂಡ ಇಬ್ಬರು ಜತೆಯಾಗಿ ಕಾಣಿಸಿಕೊಂಡಿದ್ದರು. 2017ರಲ್ಲಿ ಪಟೇಲ್ ಪುತ್ರ ಪ್ರವೀಣ್ ನಿಧನರಾದಾಗ ಕೂಡ ಅವರ ಮನೆಗೆ ಹೋಗಿದ್ದ ಮೋದಿ ಸಂತೈಸಿ ಬಂದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ