ಹೊಸದಿಲ್ಲಿ: ಕೇರಳದ ಕೋಳಿಕ್ಕೋಡ್ನ ವಿಮಾನ ಅಪಘಾತದಲ್ಲಿ ಮೃತಪಟ್ಟವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನ ಮಂತ್ರಿ ನರೇಂದ್ರ ತೀವ್ರ ಸಂತಾಪ ಸೂಚಿಸಿದ್ದು, ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವವರು ಬೇಗ ಗುಣಮುಖರಾಗಲಿ ಎಂದು ಆಶಿಸಿದ್ದಾರೆ. "ಕೇರಳದ ಕೋಳಿಕ್ಕೋಡ್ನಲ್ಲಿ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಅಪಘಾತದ ಸುದ್ದಿ ಕೇಳಿ ತೀವ್ರ ದುಖಃವಾಯಿತು. ಕೇರಳದ ಗರ್ವನರ್ ಆರಿಫ್ ಮೊಹಮ್ಮದ್ ಖಾನ್ ಅವರೊಂದಿಗೆ ಮಾತನಾಡಿ ಪರಿಸ್ಥಿತಿ ವಿಚಾರಿಸಿದ್ದೇನೆ. ಘಟನೆಯಿಂದ ಮೃತಪಟ್ಟವರು ಹಾಗೂ ಗಾಯಗೊಂಡವರ ಕುಟುಂಬಗಳ ದುಖಃ ಭರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ," ಎಂದು ರಾಷ್ಟ್ರಪತಿ ರಾಮನಾಥ್ ಕೋವಿದ್ ಟ್ವೀಟ್ ಮಾಡಿದ್ದಾರೆ.
"ವಿಮಾನ ಅಪಘಾತದ ಸುದ್ದಿ ತಿಳಿದು ತುಂಬಾ ನೋವಾಯಿತು. ನನ್ನ ಪ್ರಾರ್ಥನೆ ಹಾಗೂ ಆಲೋಚನೆಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರೊಂದಿಗೆ ಇದೆ. ಗಾಯಗೊಂಡವರು ಬೇಗನೆ ಚೇತರಿಸಿಕೊಳ್ಳಲಿ. ಪರಿಸ್ಥಿತಿಗೆ ಸಂಬಂಧಿಸಿದಂತೆ ಕೇರಳ ಸಿಎಂ ವಿಜಯನ್ ಪಿಣರಾಯಿ ಜಿ ಅವರೊಂದಿಗೆ ಮಾತನಾಡಿದ್ದೇನೆ. ಅಧಿಕಾರಿಗಳು ಸ್ಥಳದಲ್ಲಿದ್ದು, ಸಂತ್ರಸ್ತರಿಗೆ ಎಲ್ಲಾ ನೆರವು ನೀಡುತ್ತಾರೆ," ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಕೇರಳದಲ್ಲಿ ಏರ್ ಇಂಡಿಯಾ ವಿಮಾನ ಅಪಘಾತ: ಪೈಲಟ್ ಸೇರಿ 14 ಪ್ರಯಾಣಿಕರ ದುರ್ಮರಣ!
ಮತ್ತು ಗಾಯಗೊಂಡಿರುವವರಿಗೆ ಸಮೀಪದ ದುಬೈನಿಂದ ಕೋಳಿಕ್ಕೋಡ್ಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ AXB 1344, B737 ಕರಿಪುರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ರಾತ್ರಿ ಸುಮಾರು 7:45ಕ್ಕೆ ಅಪಘಾತಕ್ಕೀಡಾಗಿದೆ. ದುರಂತದಲ್ಲಿ ಪೈಲಟ್ ಸೇರಿ 14 ಮಂದಿ ಮೃತಪಟ್ಟಿದ್ದು, 123 ಮಂದಿ ಗಂಭೀರ ಗಾಯಗೊಂಡಿದ್ದು, 15 ಮಂದಿ ಸ್ಥಿತಿ ಚಿತಾಜನವಾಗಿದೆ ಎಂದು ವೆರದಿಗಳು ತಿಳಿಸಿವೆ.
"ಕೇರಳದ ಕೋಳಿಕ್ಕೋಡ್ನಲ್ಲಿ ನಡೆದಿರುವ ಏರ್ ಇಂಡಿಯಾ ನಾಗರಿಕ ವಿಮಾನ ಅಪಘಾತದ ಘಟನೆ ದುರದೃಷ್ಟಕರ. ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಗಾಯಗೊಂಡಿರುವವರು ಬೇಗ ಚೇತರಿಸಿಕೊಳ್ಳಲೆಂದು ಹಾರೈಸುತ್ತೇನೆ," ಎಂದು ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.
ತಾಯ್ನೆಲಕ್ಕೆ ಲ್ಯಾಂಡ್ ಆದ ಕೂಡಲೇ ವಿಮಾನ ದುರಂತ, ಅಪಘಾತ ಆಗಿದ್ದು ಹೇಗೆ?
"ವಿಮಾನ ಅಪಘಾತದ ಸುದ್ದಿ ತಿಳಿದು ತುಂಬಾ ನೋವಾಯಿತು. ನನ್ನ ಪ್ರಾರ್ಥನೆ ಹಾಗೂ ಆಲೋಚನೆಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರೊಂದಿಗೆ ಇದೆ. ಗಾಯಗೊಂಡವರು ಬೇಗನೆ ಚೇತರಿಸಿಕೊಳ್ಳಲಿ. ಪರಿಸ್ಥಿತಿಗೆ ಸಂಬಂಧಿಸಿದಂತೆ ಕೇರಳ ಸಿಎಂ ವಿಜಯನ್ ಪಿಣರಾಯಿ ಜಿ ಅವರೊಂದಿಗೆ ಮಾತನಾಡಿದ್ದೇನೆ. ಅಧಿಕಾರಿಗಳು ಸ್ಥಳದಲ್ಲಿದ್ದು, ಸಂತ್ರಸ್ತರಿಗೆ ಎಲ್ಲಾ ನೆರವು ನೀಡುತ್ತಾರೆ," ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಕೇರಳದಲ್ಲಿ ಏರ್ ಇಂಡಿಯಾ ವಿಮಾನ ಅಪಘಾತ: ಪೈಲಟ್ ಸೇರಿ 14 ಪ್ರಯಾಣಿಕರ ದುರ್ಮರಣ!
ಮತ್ತು ಗಾಯಗೊಂಡಿರುವವರಿಗೆ ಸಮೀಪದ ದುಬೈನಿಂದ ಕೋಳಿಕ್ಕೋಡ್ಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ AXB 1344, B737 ಕರಿಪುರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ರಾತ್ರಿ ಸುಮಾರು 7:45ಕ್ಕೆ ಅಪಘಾತಕ್ಕೀಡಾಗಿದೆ. ದುರಂತದಲ್ಲಿ ಪೈಲಟ್ ಸೇರಿ 14 ಮಂದಿ ಮೃತಪಟ್ಟಿದ್ದು, 123 ಮಂದಿ ಗಂಭೀರ ಗಾಯಗೊಂಡಿದ್ದು, 15 ಮಂದಿ ಸ್ಥಿತಿ ಚಿತಾಜನವಾಗಿದೆ ಎಂದು ವೆರದಿಗಳು ತಿಳಿಸಿವೆ.
"ಕೇರಳದ ಕೋಳಿಕ್ಕೋಡ್ನಲ್ಲಿ ನಡೆದಿರುವ ಏರ್ ಇಂಡಿಯಾ ನಾಗರಿಕ ವಿಮಾನ ಅಪಘಾತದ ಘಟನೆ ದುರದೃಷ್ಟಕರ. ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಗಾಯಗೊಂಡಿರುವವರು ಬೇಗ ಚೇತರಿಸಿಕೊಳ್ಳಲೆಂದು ಹಾರೈಸುತ್ತೇನೆ," ಎಂದು ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.
ತಾಯ್ನೆಲಕ್ಕೆ ಲ್ಯಾಂಡ್ ಆದ ಕೂಡಲೇ ವಿಮಾನ ದುರಂತ, ಅಪಘಾತ ಆಗಿದ್ದು ಹೇಗೆ?