ಜೈಪುರ: ರಾಜಸ್ಥಾನದಲ್ಲಿ ಭಾರಿ ಕುತೂಹಲ ಮೂಡಿಸಿರುವ ಆ.14ರ ವಿಧಾನ ಮಂಡಲ ಅಧಿವೇಶನ ಸಮೀಪಿಸುತ್ತಿರುವಂತೆಯೇ ರಾಜಕೀಯ ಚಟುವಟಿಕೆಗಳು ಮತ್ತೆ ಗರಿಗೆದರಿವೆ. ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ನಿರ್ಣಾಯಕವೆನಿಸಿರುವ ವಿಧಾನಮಂಡಲ ಅಧಿವೇಶನಕ್ಕೆ ಮುನ್ನ ಬಿಜೆಪಿ ಶನಿವಾರ ತನ್ನ ಆರು ಶಾಸಕರನ್ನು ಗುಜರಾತ್ನ ಪೋರ್ಬಂದರ್ಗೆ ಸ್ಥಳಾಂತರಿಸಿದೆ.
ಜೈಪುರ ಏರ್ಪೋರ್ಟ್ನಿಂದ ವಿಶೇಷ ವಿಮಾನದಲ್ಲಿ ಶಾಸಕರು ಗುಜರಾತ್ಗೆ ತೆರಳಿದ್ದಾರೆ. ಅಲ್ಲಿನ ಐಷಾರಾಮಿ ರೆಸಾರ್ಟ್ನಲ್ಲಿ ಶಾಸಕರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಗುಜರಾತ್ನ ಸೋಮನಾಥ ದೇಗುಲಕ್ಕೂ ಅವರು ಭೇಟಿ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಮತ್ತೊಂದು ಮೂಲಗಳ ಪ್ರಕಾರ ಇನ್ನೂ 12 ಬಿಜೆಪಿ ಶಾಸಕರು ಶುಕ್ರವಾರ ರಾತ್ರಿಯೇ ಗುಜರಾತ್ನ ಅಹಮದಾಬಾದ್ ತಲುಪಿದ್ದು, ಅಲ್ಲಿನ ರೆಸಾರ್ಟ್ನಲ್ಲಿ ತಂಗಿದ್ದಾರೆ. ರಾಜಸ್ಥಾನದಲ್ಲಿ ಸರಕಾರ ಮತ್ತು ಪೊಲೀಸರ ಉಪದ್ರವ ತಾಳಲಾರದೆ ಶಾಸಕರು ಸ್ವಯಂ ಪ್ರೇರಿತರಾಗಿ ಗುಜರಾತ್ಗೆ ತೆರಳಿದ್ದಾರೆ ಶಾಸಕ ಅಶೋಕ್ ಲಾಹೋಠಿ ಹೇಳಿದ್ದಾರೆ.
ಆ. 14 ಕ್ಕೆ ರಾಜಸ್ಥಾನ ವಿಧಾನಸಭೆ ಅಧಿವೇಶನ, ಅಳಿವು ಉಳಿವಿನ ಅಂಚಿನಲ್ಲಿ ಕಾಂಗ್ರೆಸ್ ಸರಕಾರ
ನಿರ್ಮಲ್ ಕುಮಾವತ್, ಗೋಪಿಚಂದ್ ಮೀನಾ, ಜಬ್ಬರ್ ಸಿಂಗ್ ಸಂಖ್ಲಾ, ಧರ್ಮವೀರ್ ಮೋಚಿ, ಗೋಪಾಲ್ ಲಾಲ್ ಶರ್ಮಾ ಮತ್ತು ಗುರುದೀಪ್ ಸಿಂಗ್ ಶನಿವಾರ ಗುಜರಾತ್ಗೆ ತೆರಳಿದ ಶಾಸಕರಾಗಿದ್ದಾರೆ.
ಜೈಪುರ ಏರ್ಪೋರ್ಟ್ನಿಂದ ವಿಶೇಷ ವಿಮಾನದಲ್ಲಿ ಶಾಸಕರು ಗುಜರಾತ್ಗೆ ತೆರಳಿದ್ದಾರೆ. ಅಲ್ಲಿನ ಐಷಾರಾಮಿ ರೆಸಾರ್ಟ್ನಲ್ಲಿ ಶಾಸಕರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಗುಜರಾತ್ನ ಸೋಮನಾಥ ದೇಗುಲಕ್ಕೂ ಅವರು ಭೇಟಿ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಮತ್ತೊಂದು ಮೂಲಗಳ ಪ್ರಕಾರ ಇನ್ನೂ 12 ಬಿಜೆಪಿ ಶಾಸಕರು ಶುಕ್ರವಾರ ರಾತ್ರಿಯೇ ಗುಜರಾತ್ನ ಅಹಮದಾಬಾದ್ ತಲುಪಿದ್ದು, ಅಲ್ಲಿನ ರೆಸಾರ್ಟ್ನಲ್ಲಿ ತಂಗಿದ್ದಾರೆ. ರಾಜಸ್ಥಾನದಲ್ಲಿ ಸರಕಾರ ಮತ್ತು ಪೊಲೀಸರ ಉಪದ್ರವ ತಾಳಲಾರದೆ ಶಾಸಕರು ಸ್ವಯಂ ಪ್ರೇರಿತರಾಗಿ ಗುಜರಾತ್ಗೆ ತೆರಳಿದ್ದಾರೆ ಶಾಸಕ ಅಶೋಕ್ ಲಾಹೋಠಿ ಹೇಳಿದ್ದಾರೆ.
ಆ. 14 ಕ್ಕೆ ರಾಜಸ್ಥಾನ ವಿಧಾನಸಭೆ ಅಧಿವೇಶನ, ಅಳಿವು ಉಳಿವಿನ ಅಂಚಿನಲ್ಲಿ ಕಾಂಗ್ರೆಸ್ ಸರಕಾರ
ನಿರ್ಮಲ್ ಕುಮಾವತ್, ಗೋಪಿಚಂದ್ ಮೀನಾ, ಜಬ್ಬರ್ ಸಿಂಗ್ ಸಂಖ್ಲಾ, ಧರ್ಮವೀರ್ ಮೋಚಿ, ಗೋಪಾಲ್ ಲಾಲ್ ಶರ್ಮಾ ಮತ್ತು ಗುರುದೀಪ್ ಸಿಂಗ್ ಶನಿವಾರ ಗುಜರಾತ್ಗೆ ತೆರಳಿದ ಶಾಸಕರಾಗಿದ್ದಾರೆ.