ಆ್ಯಪ್ನಗರ

ಸಿನಿಮೀಯ ಸ್ಟೈಲ್‌ಲ್ಲಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪ್ರತಿಭಟನಾ ಸ್ಥಳ ಸೇರಿದ ಸಮಾಜವಾದಿ ನಾಯಕ

ಸಮಾಜವಾದಿ ನಾಯಕರೊಬ್ಬರು ಬಹಳ ಚಾಲಾಕಿತನದಿಂದ ಪೊಲೀಸರಿಗೆ ಯಾಮಾರಿಸಿ ಹೋಗಿದ್ದು ಈಗ ವೈರಲ್ ಆಗಿದೆ.

Times Now 14 Sep 2019, 8:19 am
ಹೊಸದಿಲ್ಲಿ: ಕಾವಲು ಕಾಯುವ , ಚಲನವಲನಗಳ ಮೇಲೆ ನಿಗಾ ಇಡುವ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗುವುದನ್ನು ಸಿನಿಮಾದಲ್ಲಿ ನೋಡಿರುತ್ತೇವೆ. ಉತ್ತರ ಪ್ರದೇಶದಲ್ಲಿ ಕೂಡ ಅಂತಹದ್ದೇ ರೀತಿಯ ಪ್ರಸಂಗವೊಂದು ನಡೆದಿದ್ದು, ಸಮಾಜವಾದಿ ನಾಯಕರೊಬ್ಬರು ವರನ ವೇಷ ಧರಿಸಿ ಪೊಲೀಸರನ್ನು ಯಾಮಾರಿಸಿದ್ದಾರೆ.
Vijaya Karnataka Web firoz_khan


ಹೌದು, ಉತ್ತರ ಪ್ರದೇಶದ ರಾಂಪುರದಲ್ಲಿ ಸಮಾಜವಾದಿ ಪಕ್ಷದ ಕಾರ್ಯಕ್ರಮ ಆಯೋಜನೆಯಾಗಿತ್ತು. 80ಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿರುವ ಅಜಂ ಖಾನ್ ಅವರ ಬೆಂಬಲಕ್ಕಾಗಿ ಪಕ್ಷದ ವರಿಷ್ಠ , ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ನಿರಾಕಾರಣ ಸರಕಾರ ದೌರ್ಜನ್ಯ ನಡೆಸುತ್ತಿದೆ ಎಂದು ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಸರಕಾರದ ಅನುಮತಿ ಇರಲಿಲ್ಲ. ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಸ್ಥಳಕ್ಕೆ ತಲುಪದಂತೆ ಪೊಲೀಸರು ನಿಗಾ ಇಟ್ಟಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯುವುದು ಸರಕಾರದ ಉದ್ದೇಶವಾಗಿತ್ತು. ಪೊಲೀಸರು ಚೆಕ್ ಪೋಸ್ಟ್ ಸ್ಥಾಪಿಸಿ ಕಾವಲು ಕಾಯುತ್ತಿದ್ದರು. ಆದರೆ ಹೇಗಾದರೂ ಮಾಡಿ ರಾಂಪುರಕ್ಕೆ ತಲುಪಲೇ ಬೇಕೆಂದು ಹಠ ತೊಟ್ಟ ಹಲವು ನಾಯಕರು ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಅಲ್ಲಿಗೆ ತಲುಪಲು ಯಶಸ್ಸಿಯಾದರು. ಅವರಲೊಬ್ಬರು ಹೋಗಿದ್ದು ವರನ ವೇಷ ಧರಿಸಿ.

ಪುಸ್ತಕ, ಎಮ್ಮೆ, ಭೂಮಿಯಾಯ್ತು; ಮತ್ತೀಗ ಅಜಂ ಖಾನ್ ವಿರುದ್ಧ ಆಡು ಕದ್ದ ಆರೋಪ

ಪಕ್ಷದ ಸಂಭಾಲ್ ಜಿಲ್ಲಾಧ್ಯಕ್ಷ ಫಿರೋಜ್ ಖಾನ್ ವರನ ಉಡುಪು ಧರಿಸಿ, ಮುಖದ ಮೇಲೆ ಹೂವಿನ ಮಾಲೆ ತೂಗುವಂತಹ ವರನ ಪೇಟಾ ಧರಿಸಿ ಕಾರಲ್ಲಿ ಹೊರಟಿದ್ದು, ಅವರು ನಿಜವಾಗಿಯೇ ಮದುವೆಯ ಗಂಡೆಂದುಕೊಂಡು ಪೊಲೀಸರು ತಪಾಸಣೆ ನಡೆಸದೆ ಹಾಗೆಯೇ ಬಿಟ್ಟಿದ್ದಾರೆ.

ಮತ್ತೀಗ ಈ ಫೋಟೋ ವೈರಲ್ ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ