ಆ್ಯಪ್ನಗರ

ಮೈಲಾಪುರ ಕಬಾಲೀಶ್ವರ್ ವಿಗ್ರಹ ಕಳ್ಳತನ: ಟಿವಿಎಸ್‌ ಗ್ರೂಪ್ ಚೇರ್ಮನ್‌ ಬಂಧನ ಸದ್ಯಕ್ಕಿಲ್ಲ

ಮೈಲಾಪುರ ಕಬಾಲೀಶ್ವರ್ ದೇಗುಲದ ವಿಗ್ರಹ ಕಳ್ಳತನಕ್ಕೆ ಸಂಬಂಧಿಸಿ ಟಿವಿಎಸ್‌ ಸಮೂಹದ ಚೇರ್ಮನ್ ವೇಣು ಶ್ರೀನಿವಾಸನ್ ಅವರನ್ನು ಆರು ವಾರಗಳ ಕಾಲ ಬಂಧಿಸುವಂತಿಲ್ಲ ಎಂದು ಪೊಲೀಸರು ಮದ್ರಾಸ್ ಹೈಕೋರ್ಟ್‌ಗೆ ತಿಳಿಸಿದ್ದಾರೆ.

Vijaya Karnataka Web 10 Aug 2018, 6:11 pm
ಚೆನ್ನೈ: ಮೈಲಾಪುರ ಕಬಾಲೀಶ್ವರ್ ದೇಗುಲದ ವಿಗ್ರಹ ಕಳ್ಳತನಕ್ಕೆ ಸಂಬಂಧಿಸಿ ಟಿವಿಎಸ್‌ ಸಮೂಹದ ಚೇರ್ಮನ್ ವೇಣು ಶ್ರೀನಿವಾಸನ್ ಅವರನ್ನು ಆರು ವಾರಗಳ ಕಾಲ ಬಂಧಿಸುವಂತಿಲ್ಲ ಎಂದು ಪೊಲೀಸರು ಮದ್ರಾಸ್ ಹೈಕೋರ್ಟ್‌ಗೆ ತಿಳಿಸಿದ್ದಾರೆ.
Vijaya Karnataka Web TVS Venu


ದೇಗುಲದ ವಿಗ್ರಹ ಕಳ್ಳತನ ಕುರಿತು ಎಫ್‌ಐಆರ್ ದಾಖಲಾಗಿದ್ದು, ಅದರಲ್ಲಿ ಟಿವಿಎಸ್‌ನ ವೇಣು ಅವರ ಹೆಸರು ಕೂಡ ಇರುವುದರಿಂದ, ಬಂಧನಕ್ಕೆ ತಡೆ ಕೋರಿ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರ ವೇಣು ಅವರ ಪ್ರಕಾರ, 2004ರಲ್ಲಿ ರಾಜ್ಯ ಸರಕಾರ ಕುಂಭಾಭಿಷೇಕ ಮಾಡುವಂತೆ ಸೂಚಿಸಿ, ಕೋಲಿ ತಿರುಪ್ಪಾನಿ ಸಮಿತಿ ರಚಿಸಿದ್ದು, ಅದರಲ್ಲಿ ವೇಣು ಸದಸ್ಯರಾಗಿದ್ದರು. ಕುಂಭಾಭಿಷೇಕ ಮತ್ತು ನವೀಕರಣ ಕುರಿತಂತೆ ಸಮಿತಿಯ ಪರವಾಗಿ ಕೆಲಸ ಮಾಡಿದ್ದಾಗಿ ಹೇಳಿದ್ದಾರೆ.

ದೇಗುಲದ ಭಕ್ತನಾಗಿ ವೇಣು ತಮ್ಮ ಸ್ವಂತ ಖರ್ಚಿನಿಂದ 70 ಲಕ್ಷ ರೂ. ವ್ಯಯಿಸಿದ್ದು, ಹಲವು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಅದರ ಹೊರತಾಗಿ ಬೇರೇನೂ ಗೊತ್ತಿಲ್ಲ. ಆದರೂ ನನ್ನ ಹೆಸರನ್ನು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ ಎಂದು ವೇಣು ಹೇಳಿಕೊಂಡಿದ್ದಾರೆ. ಅಲ್ಲದೆ ಶ್ರೀರಂಗಂ ದೇಗುಲದ ಬೋರ್ಡ್ ಆಫ್ ಟ್ರಸ್ಟಿಯ ಚೇರ್ಮನ್ ಆಗಿ, 25 ಕೋಟಿ ರೂ.ಗಳನ್ನು ಸ್ವಂತ ಖರ್ಚಿನಿಂದ ವ್ಯಯಿಸಿದ್ದಾಗಿ ವೇಣು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ