ಆ್ಯಪ್ನಗರ

ಅಪಘಾತ ತಡೆಗಾಗಿ ರಸ್ತೆಯಲ್ಲಿ ಪೂಜೆ ನಡೆಸಿದ ಪೊಲೀಸ್

ಭಾರತದಲ್ಲಿ ದೇವರ ನಂಬಿಕೆ ಸ್ವಲ್ಪ ಜಾಸ್ತಿನೇ. ವಿಜ್ಞಾನದಲ್ಲಿ ಎಷ್ಟೇ ಸ್ಪಷ್ಟೀಕರಣ ದೊರೆತರೂ ಕೊನೆಗೆ ಯಾವುದೇ ಸಮಸ್ಯೆಯನ್ನು ಬಗೆಹರಿಸಲು ದೇವರ ಮೊರೆ ಹೋಗಲಾಗುತ್ತದೆ. ಇಂತಹದೊಂದು ಘಟನೆ ಪಶ್ಚಿಮ ಬಂಗಾಳದಲ್ಲಿ ವರದಿಯಾಗಿದೆ.

ಏಜೆನ್ಸೀಸ್ 2 Apr 2017, 10:18 pm
ಹೊಸದಿಲ್ಲಿ: ಭಾರತದಲ್ಲಿ ದೇವರ ನಂಬಿಕೆ ಸ್ವಲ್ಪ ಜಾಸ್ತಿನೇ. ವಿಜ್ಞಾನದಲ್ಲಿ ಎಷ್ಟೇ ಸ್ಪಷ್ಟೀಕರಣ ದೊರೆತರೂ ಕೊನೆಗೆ ಯಾವುದೇ ಸಮಸ್ಯೆಯನ್ನು ಬಗೆಹರಿಸಲು ದೇವರ ಮೊರೆ ಹೋಗಲಾಗುತ್ತದೆ. ಇಂತಹದೊಂದು ಘಟನೆ ಪಶ್ಚಿಮ ಬಂಗಾಳದಲ್ಲಿ ವರದಿಯಾಗಿದೆ.
Vijaya Karnataka Web police performs pooja to stop road accidents
ಅಪಘಾತ ತಡೆಗಾಗಿ ರಸ್ತೆಯಲ್ಲಿ ಪೂಜೆ ನಡೆಸಿದ ಪೊಲೀಸ್


ಸದಾ ಅಪಘಾತಗಳು ಘಟಿಸುತ್ತಿರುವ ಇಲ್ಲಿನ ಬರ್ಧಮಾನ್ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರು ಪೂಜಾರಿಯ ನೆರವಿನೊಂದಿಗೆ ರಸ್ತೆಗೆ ಪೂಜೆ ಮಾಡಿಸಿದ್ದಾರೆ. ಅಲ್ಲದೆ ಪವಿತ್ರ ಜಲವನ್ನು ರಸ್ತೆಗೆ ಸಿಂಪಡಿಸಿದ್ದಾರೆ.

ಬಲ್ಲ ಮೂಲಗಳ ಪ್ರಕಾರ ಇತ್ತೀಚಿನ ಕೆಲವು ಸಮಯಗಳಲ್ಲಿ ಬರ್ಧಮಾನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತಗಳಲ್ಲಿ 10ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಇವೆಲ್ಲದರ ಹಿನ್ನಲೆಯಲ್ಲಿ ಪರಿಹಾರ ಸೂಚಕವಾಗಿ ಪೊಲೀಸರು ರಸ್ತೆಗೆ ಪೂಜೆ ಮಾಡಿದ್ದಾರೆ. ಪೊಲೀಸರ ಈ ಕ್ರಮವನ್ನು ಸ್ಥಳೀಯರು ಪ್ರೋತ್ಸಾಹಿಸಿದ್ದಾರೆ. ಇದರಿಂದಾಗಿ 10 ನಿಮಿಷಗಳಷ್ಟು ಕಾಲ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತಡೆ ಹಿಡಿಯಲಾಗಿತ್ತು.

ಈ ನಡುವೆ ಪೂಜೆ ನಡೆಸಿರುವುದನ್ನು ಬರ್ಧಮ್ಯಾನ್ ಪೊಲೀಸ್ ಠಾಣೆ ಉಸ್ತುವಾರಿ ವಹಿಸಿಕೊಂಡಿರುವ ತುಷಾರ್ ಕಾಂತಿ ನಿರಾಕರಿಸಿದ್ದಾರೆ. ಆದರೆ ಪೊಲೀಸ್ ನೇತೃತ್ವದಲ್ಲೇ ಕಾಳಿ ಪೂಜೆ ನಡೆಸಲಾಗಿತ್ತು ಎಂದು ಪೂಜಾರಿ ನಬ ಕುಮಾರ್ ಬಟ್ಟಚಾರ್ಯ ಖಚಿತಪಡಿಸಿದ್ದಾರೆ.

ಮೂಲ ಸ್ಟೋರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ