ಆ್ಯಪ್ನಗರ

Kerala Human Sacrifice: ನರಮಾಂಸ ಭಕ್ಷಿಸಿದ್ದ ಕ್ರೂರಿಗಳು?: ಕೇರಳ ನರಬಲಿಯ ಮತ್ತಷ್ಟು ಆಘಾತಕಾರಿ ಸಂಗತಿ ಬಯಲು

Kerala Human Sacrifice Incident: ಕೇರಳದ ಪತ್ತನಂತಿಟ್ಟದಲ್ಲಿ ನಡೆದ ನರಬಲಿ ಪ್ರಸಂಗದ ತನಿಖೆ ಮುಂದುವರಿದಂತೆ ಮತ್ತಷ್ಟು ಭಯಾನಕ ಸಂಗತಿಗಳು ಬೆಳಕಿಗೆ ಬರುತ್ತಿದೆ. ಹತ್ಯೆ ಮಾಡಿದ ಇಬ್ಬರು ಮಹಿಳೆಯರ ದೇಹದ ಮಾಂಸವನ್ನು ಹಂತಕರು ತಿಂದಿದ್ದರು ಎಂಬ ಅನುಮಾನ ವ್ಯಕ್ತವಾಗಿದೆ

Edited byಅಮಿತ್ ಎಂ.ಎಸ್ | Vijaya Karnataka Web 12 Oct 2022, 3:46 pm

ಹೈಲೈಟ್ಸ್‌:

ಕೇರಳದ ಪತ್ತನಂತಿಟ್ಟದ ಕುಗ್ರಾಮದಲ್ಲಿ ನರಬಲಿಯ ಭೀಕರ ಕೃತ್ಯ
ಸಂಪತ್ತಿನ ಆಸೆಗಾಗಿ ಇಬ್ಬರು ಮಹಿಳೆಯರನ್ನು ಬಲಿಕೊಟ್ಟಿದ್ದ ದಂಪತಿ
ಹತ್ಯೆ ಮಾಡಿದ ಬಳಿಕ ಮಹಿಳೆಯರ ಮಾಂಸ ಭಕ್ಷಿಸಿರುವ ಸಾಧ್ಯತೆ
ಒಬ್ಬ ಮಹಿಳೆಯ ದೇಹವನ್ನು 56 ತುಂಡು ಮಾಡಿದ್ದ ಕ್ರೂರಿಗಳು

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web human Sacrifice
ಮೃತ ಮಹಿಳೆ ಹಾಗೂ ಒಳ ಚಿತ್ರಗಳಲ್ಲಿ ಆರೋಪಿಗಳು
ತಿರುವನಂತಪುರಂ: ಕೇರಳದ ಪತ್ತನಂತಿಟ್ಟದಲ್ಲಿ ನಡೆದ ನರಬಲಿ ಘಟನೆಗಳ ತನಿಖೆ ನಡೆದಂತೆ ಮತ್ತಷ್ಟು ಭಯಾನಕ ಸಂಗತಿಗಳು ಬೆಳಕಿಗೆ ಬರುತ್ತಿವೆ. ಸಂಪತ್ತು ಹೆಚ್ಚುತ್ತದೆ ಎಂಬ ನಂಬಿ ಇಬ್ಬರು ಮಹಿಳೆಯರನ್ನು ಬಲಿ ನೀಡಿದ ಕೇರಳ ದಂಪತಿ, ತಮ್ಮ ಬಲಿಪಶುಗಳ ಮಾಂಸವನ್ನು ಸೇವನೆ ಮಾಡಿರುವ ಸಾಧ್ಯತೆಯೂ ಇದೆ ಎಂದು ಪೊಲೀಸರು ಹೇಳಿದ್ದಾರೆ.
ದುಷ್ಕರ್ಮಿಗಳ ಆಸೆಗೆ ಪ್ರಾಣ ತೆತ್ತ ರೋಸ್ಲಿನ್ ಮತ್ತು ಪದ್ಮಾ ಅವರ ಸಾವು ಬಹಳ ಭೀಕರವಾಗಿತ್ತು. ಅವರಿಬ್ಬರನ್ನೂ ಕಟ್ಟಿಹಾಕಿ, ಚಿತ್ರಹಿಂಸೆ ನೀಡಲಾಗಿತ್ತು. ಬಳಿಕ ಹತ್ಯೆ ಮಾಡಲಾಗಿತ್ತು. ಈ ಇಬ್ಬರೂ ಮಹಿಳೆಯರ ಸ್ತನಗಳನ್ನು ಛೇದಿಸಲಾಗಿತ್ತು. ಇದರಿಂದ ರಕ್ತ ನಲ್ಲಿಯ ನೀರಿನಂತೆ ಹರಿದು ಹೋಗಿತ್ತು. ಬಲಿ ಕೊಟ್ಟ ಇಬ್ಬರ ಪೈಕಿ, ಒಬ್ಬರ ದೇಹವನ್ನು 56 ತುಂಡುಗಳಾಗಿ ಕತ್ತರಿಸಲಾಗಿತ್ತು. ಈ ದೇಹದ ತುಂಡುಗಳು ಮೂರು ಗುಂಡಿಗಳಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Kerala Human Sacrifice: ಗೋಡೆಯಲ್ಲಿ ನೆತ್ತರು, ಹಿತ್ತಲಿನಲ್ಲಿ ದೇಹದ ತುಂಡುಗಳು: ನರಬಲಿಯ ಭಯಾನಕ ಸನ್ನಿವೇಶ

ಸ್ಯಾಡಿಸ್ಟ್ ಮತ್ತು ಕಾಮುಕ
ಸಿರಿವಂತಿಕೆಗಾಗಿ ನರಬಲಿ ನೀಡುವಂತೆ ಭಗವಾಲ್ ಸಿಂಗ್ ಮತ್ತು ಲೈಲಾ ದಂಪತಿಗೆ ಸಲಹೆ ನೀಡಿದ್ದಲ್ಲದೆ, ಮಹಿಳೆಯರಿಗೆ ಆಮಿಷವೊಡ್ಡಿ ಅಲ್ಲಿಗೆ ಕರೆದುಕೊಂಡು ಬಂದಿದ್ದ ಮುಖ್ಯ ಆರೋಪಿ ಮುಹಮ್ಮದ್ ಶಫಿ ಒಬ್ಬ ಕಾಮುಕ ಮತ್ತು ಸ್ಯಾಡಿಸ್ಟ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 75 ವರ್ಷದ ವೃದ್ಧೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಆತ ಜಾಮೀನಿನ ಮೇಲೆ ಹೊರಗಿದ್ದ.

ಲಾಟರಿ ಮಾರಿ ಜೀವನ ನಡೆಸುತ್ತಿದ್ದ ಮಹಿಳೆಯರಿಗೆ ಆತ, ಲೈಂಗಿಕ ಚಿತ್ರಗಳಲ್ಲಿ ನಟಿಸಿದ ಹಣ ಮಾಡಬಹುದು ಎಂದು ಭರವಸೆ ನೀಡಿದ್ದ. ಇನ್ನೊಂದೆಡೆ, ತಮ್ಮ ಹಣಕಾಸು ಸಂಕಷ್ಟಗಳಿಂದ ಮುಕ್ತಿಗೊಂಡು, ಶ್ರೀಮಂತರಾಗಲು ನರಬಲಿ ನೀಡುವಂತೆ ಸಿಂಗ್ ಮತ್ತು ಲೈಲಾ ದಂಪತಿಗೆ ಸಲಹೆ ಕೊಟ್ಟಿದ್ದ.

"ಆರೋಪಿಗಳು ಸಂತ್ರಸ್ತೆಯನ್ನು ಹತ್ಯೆ ಮಾಡಿದ ಬಳಿಕ ಅವರ ದೇಹದ ಭಾಗಗಳನ್ನು ತಿಂದಿರುವ ಸಾಧ್ಯತೆ ಇದೆ. ಅದು ಇನ್ನೂ ಖಚಿತವಾಗಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ" ಎಂದು ಕೊಚ್ಚಿ ಪೊಲೀಸ್ ಮುಖ್ಯಸ್ಥ ಸಿಎಚ್ ನಾಗರಾಜು ತಿಳಿಸಿದ್ದಾರೆ.
Human Sacrifice | ಸಂಪತ್ತಿನ ಆಸೆಗಾಗಿ ಇಬ್ಬರು ಮಹಿಳೆಯರ ನರಬಲಿ: ಬೆಚ್ಚಿಬಿದ್ದ ಕೇರಳ

ಆರೋಪಿಗೆ ಸಿಪಿಎಂ ಜತೆ ನಂಟು
ಮಸಾಜ್ ಚಿಕಿತ್ಸೆ ನೀಡುತ್ತಿದ್ದ ಭಗವಾಲ್ ಸಿಂಗ್, ಕೇರಳದ ಆಡಳಿತಾರೂಢ ಸಿಪಿಐ (ಎಂ) ಪಕ್ಷದ ಜತೆ ನಂಟು ಹೊಂದಿದ್ದಾನೆ ಎಂದೂ ಹೇಳಲಾಗಿದೆ. ಆದರೆ ಆತ ತಮ್ಮ ಸದಸ್ಯನಲ್ಲ ಎಂದು ಪಕ್ಷ ಹೇಳಿದೆ.

"ಆತ ನಮ್ಮ ಜತೆ ಕೆಲಸ ಮಾಡಿದ್ದ. ಆದರೆ ನಮ್ಮ ಪಕ್ಷದ ಸದಸ್ಯನಲ್ಲ. ಒಂದು ಕಾಲದಲ್ಲಿ ಆತ ಪ್ರಗತಿಪರ ವ್ಯಕ್ತಿ. ಆದರೆ ಎರಡನೇ ಮದುವೆಯ ಬಳಿಕ ಆತ ಧಾರ್ಮಿಕ ವ್ಯಕ್ತಿಯಾಗಿಬಿಟ್ಟ. ಈ ಕೃತ್ಯ ಕೂಡ ತನ್ನ ಪತ್ನಿ ಪ್ರಭಾವದಿಂದ ಆತ ಮಾಡಿರಬೇಕು" ಎಂದು ಸಿಪಿಎಂನ ಪದಾಧಿಕಾರಿ ಪಿಆರ್ ಪ್ರದೀಪ್ ಹೇಳಿದ್ದಾರೆ.

ಫೋನ್ ವಿವರಗಳಿಂದ ಬಯಲಾದ ರಹಸ್ಯ
ರೋಸ್ಲಿನ್ ಅವರು ಜೂನ್‌ನಲ್ಲಿ ಕಣ್ಮರೆಯಾಗಿದ್ದರೆ, ಪದ್ಮಾ ಅವರು ಸೆಪ್ಟೆಂಬರ್‌ನಲ್ಲಿ ನಾಪತ್ತೆಯಾಗಿದ್ದರು. ಪದ್ಮಾ ಅವರ ನಾಪತ್ತೆ ಪ್ರಕರಣದ ತನಿಖೆ ವೇಳೆ ಈ ನರಬಲಿ ಕೃತ್ಯ ಬಯಲಾಗಿದೆ. ಪದ್ಮಾ ಅವರ ಫೋನ್ ಕರೆಗಳ ವಿವರ ಕಲೆಹಾಕಿದ ಪೊಲೀಸರು, ಅದರಲ್ಲಿ ಮುಹಮ್ಮದ್ ಶಫಿಯ ನಂಟು ಕಂಡುಕೊಂಡಿದ್ದರು. ಆತನನ್ನು ವಶಕ್ಕೆ ಪಡಿಸಿ ವಿಚಾರಣೆಗೆ ಒಳಪಡಿಸಿದಾಗ, ಅವರನ್ನು ಅಪಹರಣ ಮಾಡಿದ್ದನ್ನು ಒಪ್ಪಿಕೊಂಡಿದ್ದ.
BJP Worker: 'ದೃಶ್ಯ' ಸಿನಿಮಾ ಮಾದರಿ ಕೃತ್ಯ: ನಾಪತ್ತೆಯಾಗಿದ್ದ ಬಿಜೆಪಿ ಕಾರ್ಯಕರ್ತನ ದೇಹ ಮನೆಯ ನೆಲದಡಿ ಪತ್ತೆ

ಫೇಸ್‌ಬುಕ್ ಮೂಲಕ ಸಂಪರ್ಕ
"ಶಫಿ ಒಬ್ಬ ಲಂಪಟನಾಗಿದ್ದು, ಮನೋವಿಕೃತ ಕೊಲೆಗಡುಕ ಕೂಡ ಹೌದು. ಆತ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಓದನ್ನು ಅರ್ಧಕ್ಕೆ ಬಿಟ್ಟಿದ್ದ ಆತ, ಕಾಮುಕನಾಗಿದ್ದ ಮತ್ತು ಕ್ರೌರ್ಯದಿಂದ ಆನಂದ ಪಡೆಯುತ್ತಿದ್ದ" ಎಂದು ನಾಗರಾಜು ತಿಳಿಸಿದ್ದಾರೆ.

ಆರೋಪಿ ಶಫಿ, ಹಣಕಾಸಿನ ಸಂಕಷ್ಟದಲ್ಲಿರುವ ಜನರನ್ನು ಹುಡುಕಲು ಫೇಸ್‌ಬುಕ್ ಬಳಸುತ್ತಿದ್ದ. ಅದರ ಮೂಲಕವೇ ಆತ ಭಗವಾಲ್ ಸಿಂಗ್ ಮತ್ತಯ ಲೈಲಾ ಅವರನ್ನು ಸಂಪರ್ಕಿಸಿದ್ದ. ಬಲಿಯಾದ ಮಹಿಳೆಯರನ್ನು ಕೂಡ ಆತ ಸಾಮಾಜಿಕ ಮಾಧ್ಯಮದ ಮೂಲಕವೇ ಸಂಪರ್ಕ ಮಾಡಿದ್ದ. ಲೈಂಗಿಕತೆಯ ಚಿತ್ರಗಳಲ್ಲಿ ನಟಿಸಿದರೆ ಹಣ ಸಿಗುತ್ತದೆ ಎಂದು ಭರವಸೆ ನೀಡಿದ್ದ ಎಂದು ಹೇಳಲಾಗಿದೆ.
ಅಸ್ಸಾಂನಲ್ಲಿ ನರಬಲಿಗಾಗಿ ಐದು ವರ್ಷದ ಬಾಲಕಿಯ ಹತ್ಯೆ? ಮಂತ್ರವಾದಿ ಬಂಧನ!

ಪದ್ಮಾ ಅವರ ಕತ್ತುಹಿಸುಕಿ ಕೊಂದಿದ್ದ ಶಫಿ, ಬಳಿಕ ಅವರ ತಲೆ ಕತ್ತರಿಸಿ, ದೇಹವನ್ನು 56 ತುಂಡುಗಳನ್ನಾಗಿ ಮಾಡಿದ್ದ. ರೋಸ್ಲಿನ್ ಅವರನ್ನು ಲೈಲಾ ಕೊಂದಿದ್ದಳು. ಅವರ ಎದೆಗಳನ್ನು ಕತ್ತರಿಸಿದ್ದಳು. ಒಬ್ಬ ಮಹಿಳೆಗೆ ಚಾಕುವಿನಿಂದ ಚಿತ್ರಹಿಂಸೆ ನೀಡಲಾಗಿತ್ತು ಎನ್ನುವುದು ತನಿಖೆಯಿಂದ ಗೊತ್ತಾಗಿದೆ.

ಶಫಿ ಈ ರೀತಿ ಮತ್ತಷ್ಟು ಕೃತ್ಯಗಳನ್ನು ಎಸಗಿರುವ ಶಂಕೆ ಇದೆ. ಹೀಗಾಗಿ ಆತನ ಫೇಸ್‌ಬುಕ್ ಖಾತೆಯಲ್ಲಿನ ವಿವರಗಳನ್ನು ಪರಿಶೀಲಿಸಲಾಗುತ್ತಿದೆ.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ