ಆ್ಯಪ್ನಗರ

ಹಿಂದುಯೇತರ ಡೆಲಿವರಿ ಬಾಯ್‌ನಿಂದ ಆಹಾರ ಸ್ವೀಕಾರಕ್ಕೆ ನಕಾರ, ಆರೋಪಿ ಟ್ವಿಟರ್‌ ಖಾತೆ ಮೇಲೆ ಪೊಲೀಸ್‌ ನಿಗಾ

''ಹಿಂದೂಯೇತರ ಡೆಲಿವರಿ ಬಾಯ್‌ನಿಂದ ಆಹಾರ ಪಡೆಯಲ್ಲ ಎಂದು ಆರ್ಡರ್‌ ರದ್ದುಗೊಳಿಸಲು ಯತ್ನಿಸಿದೆ. ಇದಕ್ಕೆ ಝೊಮ್ಯಾಟೋದವರು ಒಪ್ಪಲಿಲ್ಲ. ನನಗೆ ಆಹಾರ, ದುಡ್ಡು ಎರಡೂ ಬೇಡ ಎಂದು ಛೀಮಾರಿ ಹಾಕಿದೆ,''ಎಂದು ಹೆಮ್ಮೆಯಿಂದ ಅಮಿತ್‌ ಶುಕ್ಲಾ ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದರು.

PTI 2 Aug 2019, 5:00 am
ಜಬಲ್‌ಪುರ: ಆಹಾರ ಸರಬರಾಜು ಸಂಸ್ಥೆ ಝೊಮ್ಯಾಟೋದಲ್ಲಿನ ಹಿಂದೂಯೇತರ ಡೆಲಿವರಿ ಬಾಯ್‌ನಿಂದ ಆಹಾರ ಸ್ವೀಕರಿಸಲು ನಿರಾಕರಿಸಿ ವಿವಾದಕ್ಕೆ ಗುರಿಯಾಗಿರುವ ಅಮಿತ್‌ ಶುಕ್ಲಾಗೆ ಪೊಲೀಸರು ನೋಟಿಸ್‌ ನೀಡಿದ್ದಾರೆ. ''ವಿಚಾರಣೆಗೆ ಹಾಜರಾದಾಗ ಅವರಿಗೆ ಕೋಮುಘರ್ಷಣೆಗೆ ಪ್ರಚೋದನೆ ನೀಡದಂತೆ ಎಚ್ಚರಿಕೆ ನೀಡಲಾಗುವುದು. ಅವರ ಟ್ವೀಟ್‌ಗಳ ಮೇಲೆ ನಿಗಾ ಇರಿಸಲಾಗಿದೆ. ಒಂದು ವೇಳೆ ಅವರು ಮತ್ತೆ ಪ್ರಚೋದನಕಾರಿ ಟ್ವೀಟ್‌ ಮಾಡಿದಲ್ಲಿ ಬಂಧಿಸುತ್ತೇವೆ. ಆರು ತಿಂಗಳವರೆಗೂ ಅವರ ಅಪರಾಧಕ್ಕೆ ಜೈಲು ವಾಸ ಅನುಭವಿಸಬೇಕಾಗುತ್ತದೆ,'' ಎಂದು ಜಬಲ್‌ಪುರ ಪೊಲೀಸ್‌ ವರಿಷ್ಠಾಧಿಕಾರಿ ಅಮಿತ್‌ ಸಿಂಗ್‌ ಹೇಳಿದ್ದಾರೆ. ''ಹಿಂದೂಯೇತರ ಡೆಲಿವರಿ ಬಾಯ್‌ನಿಂದ ಆಹಾರ ಪಡೆಯಲ್ಲ ಎಂದು ಆರ್ಡರ್‌ ರದ್ದುಗೊಳಿಸಲು ಯತ್ನಿಸಿದೆ. ಇದಕ್ಕೆ ಝೊಮ್ಯಾಟೋದವರು ಒಪ್ಪಲಿಲ್ಲ. ನನಗೆ ಆಹಾರ, ದುಡ್ಡು ಎರಡೂ ಬೇಡ ಎಂದು ಛೀಮಾರಿ ಹಾಕಿದೆ,''ಎಂದು ಹೆಮ್ಮೆಯಿಂದ ಅಮಿತ್‌ ಶುಕ್ಲಾ ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದರು. ಇದಕ್ಕೆ ಟ್ವೀಟಿಗರಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಬಹುತೇಕ ಟ್ವೀಟಿಗರು ಅಮಿತ್‌ಗೆ ಸಾಮರಸ್ಯದ ಪಾಠ ಮಾಡಿದ್ದರು.
Vijaya Karnataka Web zomato

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ