ಆ್ಯಪ್ನಗರ

ಭ್ರಮೆಯಲ್ಲಿರುವ ಎರಡು ಕುಟುಂಬಗಳು!

''ಜಮ್ಮು-ಕಾಶ್ಮೀರದ ಎರಡು ಕುಟುಂಬಗಳು ಈಗಲೂ ಕಾಶ್ಮೀರ ತಮ್ಮ ಪೂರ್ವಜರ ಆಸ್ತಿ ಎಂದೇ ಭಾವಿಸಿಕೊಂಡಿವೆ,'' ಎಂದ ಲಡಾಖ್‌ ಬಿಜೆಪಿ ಸದಸ್ಯ ತ್ಸೆರಿಂಗ್‌ ನಮ್ಗ್ಯಾಲ್‌ .

PTI 7 Aug 2019, 5:00 am
ಹೊಸದಿಲ್ಲಿ: ''ಜಮ್ಮು-ಕಾಶ್ಮೀರದ ಎರಡು ಕುಟುಂಬಗಳು ಈಗಲೂ ಕಾಶ್ಮೀರ ತಮ್ಮ ಪೂರ್ವಜರ ಆಸ್ತಿ ಎಂದೇ ಭಾವಿಸಿಕೊಂಡಿವೆ,'' ಎಂದು ಲಡಾಖ್‌ ಕ್ಷೇತ್ರದ ಬಿಜೆಪಿ ಸದಸ್ಯ ತ್ಸೆರಿಂಗ್‌ ನಮ್ಗ್ಯಾಲ್‌ ಲೋಕಸಭೆಯಲ್ಲಿ ಮಂಗಳವಾರ ಟೀಕಾಪ್ರಹಾರ ನಡೆಸಿದರು.
Vijaya Karnataka Web political parties in kashmir is ironical bjp mp
ಭ್ರಮೆಯಲ್ಲಿರುವ ಎರಡು ಕುಟುಂಬಗಳು!

ರಾಜ್ಯ ಮರುವಿಂಗಡಣೆ ವಿಧೇಯಕದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ''ನಿನ್ನೆಯವರೆಗೆ ಎಲ್ಲರೂ ಸಮಾನತೆ ಬಗ್ಗೆ ಮಾತನಾಡುತ್ತಿದ್ದರು. ಸಂವಿಧಾನದ 370ನೇ ವಿಧಿ ರದ್ದಾದರೆ ಸಮಾನತೆಯ ಅವಕಾಶವೇ ಹೊರಟು ಹೋಗುತ್ತದೆ ಎನ್ನುತ್ತಿದ್ದರು. ಹಾಗಾದರೆ ಈ ಹಿಂದೆ ಸಮಗ್ರ ಜಮ್ಮು-ಕಾಶ್ಮೀರದ ಅಭಿವೃದ್ಧಿಗಾಗಿ ಅನುದಾನ ಪಡೆಯಲಾಗಿದ್ದರೂ ಲಡಾಖ್‌ ಅನ್ನು ಕಡೆಗಣಿಸಿ, ಕಾಶ್ಮೀರ ಅಭಿವೃದ್ಧಿಗೆ ಮಾತ್ರವೇ ಗಮನ ನೀಡಲಾಗಿದೆ. ಇದೇನಾ ಸಮಾನತೆ ಎಂದು ಅವರನ್ನು ಕೇಳಲು ಬಯಸುತ್ತೇನೆ,'' ಎಂದರು. ಅಬ್ದುಲ್ಲಾ ಮತ್ತು ಮುಫ್ತಿ ಕುಟುಂಬವನ್ನು ಉದ್ದೇಶಿಸಿ ಅವರು ಮಾತನಾಡಿದ್ದು ಸ್ಪಷ್ಟವಾಗಿತ್ತು.
ಲೋಕಸಭೆ ಚುನಾವಣೆಯಲ್ಲಿ ಲೇಹ್‌, ಲಡಾಖ್‌ ಮತ್ತು ಕಾರ್ಗಿಲ್‌ ಜನ ಕೇಂದ್ರಾಡಳಿತ ಪ್ರದೇಶಕ್ಕಾಗಿ ಮತ ಚಲಾಯಿಸಿದ್ದಾರೆ. ರಾಜನಾಥ ಸಿಂಗ್‌ ಗೃಹ ಸಚಿವರಾಗಿದ್ದಾಗ ಈ ಪ್ರದೇಶಕ್ಕೆ ಭೇಟಿ ನೀಡಿದ್ದರು. ಆಗ ಹೆಚ್ಚಿನವರು ಲಡಾಖ್‌ ಕೇಂದ್ರಾಡಳಿತ ಪ್ರದೇಶವಾಗಬೇಕೆಂಬ ಬೇಡಿಕೆ ಇಟ್ಟಿದ್ದರು ಎಂದು ಹೇಳಿದರು.
ಪ್ರಧಾನಿ ಮೆಚ್ಚುಗೆ: ತ್ಸೆರಿಂಗ್‌ ಅವರ ಭಾಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ''ನನ್ನ ಯುವ ಮಿತ್ರ ತ್ಸೆರಿಂಗ್‌ ಲೋಕಸಭೆಯಲ್ಲಿ ಅದ್ಭುತವಾಗಿ ಮಾತನಾಡಿದರು. ಲಡಾಖ್‌ನ ನಮ್ಮ ಸಹೋದರ, ಸಹೋದರಿಯರ ಆಶಯವನ್ನು ಅವರು ಬಿಚ್ಚಿಟ್ಟರು,'' ಎಂದು ಮೋದಿ ಟ್ವೀಟ್‌ನಲ್ಲಿ ಶ್ಲಾಘಿಸಿದ್ದಾರೆ.
ತ್ಸೆರಿಂಗ್‌ ಭಾಷಣ ಮುಗಿಸುತ್ತಿದ್ದಂತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ತ್ಸೆರಿಂಗ್‌ ಆಸನದ ಬಳಿ ತೆರಳಿ ಅಭಿನಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ