ಆ್ಯಪ್ನಗರ

ಎರಡು ರಾಜ್ಯಸಭೆ ಸೀಟುಗಳಿಗೆ ಆಗಸ್ಟ್‌ 24ಕ್ಕೆ ಉಪ ಚುನಾವಣೆ, 1 ಸೀಟು ಬಿಜೆಪಿ ತೆಕ್ಕೆಗೆ?

ರಾಜ್ಯಸಭೆಯ ಎರಡು ಸೀಟುಗಳಿಗೆ ಆ. 24ರಂದು ಉಪಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಗುರುವಾರ ಘೋಷಿಸಿದೆ. ಕೇರಳ ಹಾಗೂ ಉತ್ತರ ಪ್ರದೇಶದ ಎರಡು ಸೀಟುಗಳಿಗೆ ಕೊರೊನಾ ಮುನ್ನೆಚ್ಚರಿಕಾ ಕ್ರಮಗಳನ್ನ ಅನುಸರಿಸುವ ಮೂಲಕ ಚುನಾವಣೆ ನಡೆಸಲಿದೆ.

Vijaya Karnataka 31 Jul 2020, 7:38 am
ಹೊಸದಿಲ್ಲಿ: ಉತ್ತರಪ್ರದೇಶ ಮತ್ತು ಕೇರಳದ ಎರಡು ರಾಜ್ಯಸಭೆ ಸೀಟುಗಳಿಗೆ ಆ.24ರಂದು ಉಪಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಗುರುವಾರ ಘೋಷಿಸಿದೆ. ಸಮಾಜವಾದಿ ಪಕ್ಷದ ಸಂಸದರಾಗಿದ್ದ ಬೇನಿ ಪ್ರಸಾದ್‌ ವರ್ಮಾ ಮತ್ತು ಎಲ್‌ಡಿಎಫ್‌ ಬೆಂಬಲಿತ ಪಕ್ಷೇತರ ಸಂಸದರಾಗಿದ್ದ ವೀರೇಂದ್ರ ಕುಮಾರ್‌ ಅವರು ನಿಧನರಾದ ಹಿನ್ನೆಲೆಯಲ್ಲಿ ರಾಜ್ಯಸಭೆ ಸದಸ್ಯ ಸ್ಥಾನಗಳು ಕಳೆದ ಮಾರ್ಚ್ ಮತ್ತು ಮೇನಲ್ಲಿ ತೆರವಾಗಿದ್ದವು.
Vijaya Karnataka Web 47170816


ಕೋವಿಡ್‌-19 ಪ್ರಸರಣ ಆತಂಕ ಇರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಸೂಚಿಸಿರುವ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿಯೇ ಚುನಾವಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲು ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದೇವೆ ಎಂದು ಆಯೋಗ ಹೇಳಿದೆ.

ಕಳೆದ ಜೂನ್‌ನಲ್ಲಿ 24 ರಾಜ್ಯಸಭಾ ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆ ವೇಳೆ ಪಿಪಿಇ ಕಿಟ್‌ಗಳು ಮತ್ತು ಆ್ಯಂಬುಲೆನ್ಸ್‌ಗಳ ವ್ಯವಸ್ಥೆ ಮಾಡಿ ಆಯೋಗ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿತ್ತು. ಆಂಧ್ರಪ್ರದೇಶ, ಗುಜರಾತ್‌, ಜಾರ್ಖಂಡ್‌ ಸೇರಿದಂತೆ ಒಟ್ಟು 8 ರಾಜ್ಯಗಳ 1 ಸಾವಿರಕ್ಕೂ ಅಧಿಕ ಶಾಸಕರು ಚುನಾವಣೆಯಲ್ಲಿ ಭಾಗಿಯಾಗಿದ್ದರು.

"50 ಕೊಲೆಗಳ ಬಳಿಕ ಎಣಿಕೆ ಮರೆತೆ" ಪೊಲೀಸರಿಗೆ ತಿಳಿಸಿದ ದಿಲ್ಲಿ ಸೀರಿಯಲ್‌ ಕಿಲ್ಲರ್‌ ವೈದ್ಯ!

ಉತ್ತರ ಪ್ರದೇಶದಲ್ಲಿ ಬಿಜೆಪಿ ಸರಕಾರ ಇರುವುದರಿಂದ ಈ ಪೈಕಿ ಬಿಜೆಪಿಗೆ ಒಂದು ಸೀಟು ಸಿಗುವ ಸಾಧ್ಯತೆ ಇದೆ. ಈಗಾಗಲೇ ಬಿಜೆಪಿ ನೇತೃತ್ವದ ಎನ್‌ಡಿಎ 101 ಸ್ಥಾನಗಳನ್ನ ಹೊಂದಿದ್ದು ಬಹುಮತದತ್ತ ದಾಪುಗಾಲು ಇಡುತ್ತಿದೆ. ಇನ್ನೊಂದೆಡೆ ಇತ್ತೀಚೆಗೆ ನಡೆದ 24 ಸೀಟುಗಳ ಚುನಾವಣೆ ಪೈಕಿ 11ರಲ್ಲಿ ಜಯಗಳಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ