ಆ್ಯಪ್ನಗರ

ದೇಶದಲ್ಲಿ ವಾಟ್ಸಪ್‌ಗೆ ಪ್ರತ್ಯೇಕ ಕಾರ್ಯಾಚರಣೆ ಅಧಿಕಾರಿ ನೇಮಕ

ನೂತನ ಅಧಿಕಾರಿಗೆ ಬಳಕೆದಾರರು ವಾಟ್ಸಪ್ ಸಂಬಂಧಿತ ದೂರು ಮತ್ತು ಸಲಹೆ, ಸೂಚನೆ ಹಾಗು ಕಾನೂನು ಸಂಬಂಧಿ ಸಮಸ್ಯೆಗಳಿದ್ದರೆ ಅದನ್ನು ಹೇಳಿಕೊಳ್ಳಬಹುದಾಗಿದೆ.

Vijaya Karnataka Web 23 Sep 2018, 5:09 pm
ಹೊಸದಿಲ್ಲಿ: ವಾಟ್ಸಪ್‌ ಮೂಲಕ ಹರಡುತ್ತಿರುವ ಸುಳ್ಳು ಸುದ್ದಿ ಮತ್ತು ಸಾಮಾಜಿಕ ಸಾಮರಸ್ಯ ಹಾಳು ಮಾಡುವ ಸಂದೇಶಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ಸೂಚಿಸುತ್ತಿರುವ ಬೆನ್ನಲ್ಲೇ ದೇಶದಲ್ಲಿ ವಾಟ್ಸಪ್ ಸಂಬಂಧಿತ ಗ್ರಾಹಕರ ದೂರು ಮತ್ತು ಕುಂದುಕೊರತೆಗಳನ್ನು ಆಲಿಸಲು ಪ್ರತ್ಯೇಕ ಅಧಿಕಾರಿಯನ್ನು ವಾಟ್ಸಪ್ ನೇಮಕ ಮಾಡಿದೆ.
Vijaya Karnataka Web whatsapp2.


ನೂತನ ಅಧಿಕಾರಿಗೆ ಬಳಕೆದಾರರು ವಾಟ್ಸಪ್ ಸಂಬಂಧಿತ ದೂರು ಮತ್ತು ಸಲಹೆ, ಸೂಚನೆ ಹಾಗು ಕಾನೂನು ಸಂಬಂಧಿ ಸಮಸ್ಯೆಗಳಿದ್ದರೆ ಅದನ್ನು ಹೇಳಿಕೊಳ್ಳಬಹುದಾಗಿದೆ. ವಾಟ್ಸಪ್ ಮೂಲಕ ಇಲ್ಲವೆ ವೆಬ್‌ಸೈಟ್, ಇಮೇಲ್ ಮೂಲಕವೂ ಗ್ರಾಹಕರು ಅಧಿಕಾರಿಯನ್ನು ಸಂಪರ್ಕಿಸಲು ಅವಕಾಶ ಕಲ್ಪಿಸಲಾಗುತ್ತಿದೆ.

ಗ್ರಾಹಕರ ಕುಂದು ಕೊರತೆ ಅಧಿಕಾರಿ ನೇಮಕ ಕುರಿತು ವಾಟ್ಸಪ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಕೋಮಲ್ ಲಾಹಿರಿ ಎಂಬವರು ವಾಟ್ಸಪ್‌ನ ಹಿರಿಯ ಅಧಿಕಾರಿಯಾಗಿದ್ದು, ದೇಶದಲ್ಲಿ ವಾಟ್ಸಪ್ ಕುರಿತ ದೂರುಗಳ ವಿಚಾರದಲ್ಲಿ ಕಂಪನಿಯನ್ನು ಪ್ರತಿನಿಧಿಸಲಿದ್ದಾರೆ. ಜತೆಗೆ ನಕಲಿ ಸುದ್ದಿ ತಡೆಗೆ ಕಂಪನಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ