ಉನಾ: ಕೌಟುಂಬಿಕ ಹಿತರಕ್ಷಣೆಯನ್ನೇ ಅಜೆಂಡಾ ಮಾಡಿಕೊಂಡಿರುವ ಕಾಂಗ್ರೆಸ್, ದೇಶದ ಜನರಿಗೆ ಬಡತನವನ್ನೇ ಬಳುವಳಿಯಾಗಿ ನೀಡಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಟೀಕಿಸಿದ್ದಾರೆ. ಹಿಮಾಚಲ ಪ್ರದೇಶದ ಉನಾದಲ್ಲಿ ಸೋಮವಾರ ಬಿಜೆಪಿ 'ಪನ್ನಾ ಪ್ರಮುಖ'ರ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಬಡತನ ಆಳವಾಗಿ ಬೇರೂರಲು ಕಾಂಗ್ರೆಸ್ಸೇ ಕಾರಣ. 55 ವರ್ಷ ಕಾಲ ಈ ದೇಶವನ್ನು ಆಳಿದ ಆ ಪಕ್ಷ ಏನನ್ನೂ ಸಾಧಿಸದೇ ಬಡತನವನ್ನು ಬಳುವಳಿಯಾಗಿ ಬಿಟ್ಟು ಹೋಗಿದೆ ಎಂದು ವಾಗ್ದಾಳಿ ಮಾಡಿದರು. ನಮ್ಮ ಸರಕಾರವು ಯೋಧರಿಗೆ ಒಆರ್ಒಪಿ (ಏಕ ಶ್ರೇಣಿ, ಏಕ ಪಿಂಚಣಿ) ಜಾರಿಗೆ ತಂದಿರುವುದನ್ನು ಹೇಳಿದರೆ, ಕಾಂಗ್ರೆಸ್ ಕೂಡ ಅದನ್ನೇ ಉಚ್ಚರಿಸುತ್ತಿದೆ. ಆದರೆ, ಅವರ ವಿಷಯದಲ್ಲಿ ಒಆರ್ಒಪಿ ಎಂದರೆ 'ಓನ್ಲಿ ರಾಹುಲ್, ಓನ್ಲಿ ಪ್ರಿಯಾಂಕಾ' ಎಂದು ವ್ಯಂಗ್ಯವಾಡಿದರು.
ಬಡತನವನ್ನೇ ಬಳುವಳಿ ನೀಡಿದ ಕಾಂಗ್ರೆಸ್: ಅಮಿತ್ ಶಾ ಟೀಕೆ
ದೇಶದಲ್ಲಿ ಬಡತನ ಆಳವಾಗಿ ಬೇರೂರಲು ಕಾಂಗ್ರೆಸ್ಸೇ ಕಾರಣ. 55 ವರ್ಷ ಕಾಲ ಈ ದೇಶವನ್ನು ಆಳಿದ ಆ ಪಕ್ಷ ಏನನ್ನೂ ಸಾಧಿಸದೇ ಬಡತನವನ್ನು ಬಳುವಳಿಯಾಗಿ ಬಿಟ್ಟು ಹೋಗಿದೆ ಎಂದು ಅಮಿತ್ ಶಾ ವಾಗ್ದಾಳಿ ಮಾಡಿದರು.
Vijaya Karnataka 29 Jan 2019, 5:00 am