ಆ್ಯಪ್ನಗರ

ಪರೀಕ್ಷೆ ಮುಂದೂಡಲು 11ನೇ ತರಗತಿ ವಿದ್ಯಾರ್ಥಿಯಿಂದ ಪ್ರದ್ಯುಮ್ನನ ಕೊಲೆ?

ಇತ್ತೀಚೆಗೆ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಗುರುಗ್ರಾಮದ ರ‍್ಯಾನ್‌ ಇಂಟರ್‌ನ್ಯಾಶನಲ್‌ ಶಾಲೆಯಲ್ಲಿ ನಡೆದಿದ್ದ 7 ವರ್ಷದ ಬಾಲಕ ಹತ್ಯೆ ಪ್ರಕರಣ ಮಹತ್ವದ ತಿರುವು ಪಡೆದಿದ್ದು ಸಿಬಿಐ ಅಧಿಕಾರಿಗಳು ಅದೇ ಶಾಲೆಯ ಹಿರಿಯ ವಿದ್ಯಾರ್ಥಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

TNN 8 Nov 2017, 3:03 pm
ಹೊಸದಿಲ್ಲಿ: ಇತ್ತೀಚೆಗೆ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಗುರುಗ್ರಾಮದ ರ‍್ಯಾನ್‌ ಇಂಟರ್‌ನ್ಯಾಶನಲ್‌ ಶಾಲೆಯಲ್ಲಿ ನಡೆದಿದ್ದ 7 ವರ್ಷದ ಬಾಲಕ ಹತ್ಯೆ ಪ್ರಕರಣ ಮಹತ್ವದ ತಿರುವು ಪಡೆದಿದ್ದು ಸಿಬಿಐ ಅಧಿಕಾರಿಗಳು ಅದೇ ಶಾಲೆಯ ಹಿರಿಯ ವಿದ್ಯಾರ್ಥಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
Vijaya Karnataka Web pradhyumn case class xi ryan international student committed murder so exams would be postponed
ಪರೀಕ್ಷೆ ಮುಂದೂಡಲು 11ನೇ ತರಗತಿ ವಿದ್ಯಾರ್ಥಿಯಿಂದ ಪ್ರದ್ಯುಮ್ನನ ಕೊಲೆ?


ಪ್ರದ್ಯುಮ್ನ ಠಾಕೂರ್ ಹತ್ಯೆಯಲ್ಲಿ ಈ ವಿದ್ಯಾರ್ಥಿಯ ಕೈವಾಡವಿರಬಹುದು ಎಂದು ಶಂಕಿಸಲಾಗಿದ್ದು, 11ನೇ ತರಗತಿಯಲ್ಲಿ ಓದುತ್ತಿರುವ ಈತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಸೆಪ್ಟೆಂಬರ್ 8ರಂದು ಶಾಲೆಯ ಶೌಚಾಲಯದಲ್ಲಿ ಪ್ರದ್ಯುಮ್ನನ ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಮೊದಲು ಶಾಲಾ ಬಸ್‌ ಚಾಲಕನನ್ನು ಬಂಧಿಸಿದ್ದರು, ಆದರೆ ಈ ಪ್ರಕರಣಕ್ಕೂ ಬಂಧಿತ ಚಾಲಕ ಅಶೋಕ್‌ ಕುಮಾರ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಸಿಬಿಐ ಬುಧವಾರದಂದು ಸ್ಪಷ್ಟ ಪಡಿಸಿದೆ.

ಪ್ರದ್ಯುಮ್ನ ಕೊಲೆಯಾದ ಸ್ಥಳದಿಂದ ಶಂಕಿತ ವಿದ್ಯಾರ್ಥಿ ಹೊರ ಬರುತ್ತಿರುವುದನ್ನು ಸಿಸಿಟಿವಿ ಫೂಟೇಜ್‌ನಲ್ಲಿ ಕಂಡುಬಂದಿದೆ. ಕೊಲೆ ಪ್ರಕರಣದಿಂದ ಶಾಲೆಯಲ್ಲಿ ನಡೆಯಬೇಕಿದ್ದ ಮುಂದಿನ ಪರೀಕ್ಷೆ ಮತ್ತು ಶಿಕ್ಷಕರ ಸಭೆಯನ್ನು ಮುಂದೂಡಬಹುದು ಎಂಬ ಆಲೋಚನೆಯಿಂದ ಶಂಕಿತ ಆರೋಪಿ ಈ ಕೃತ್ಯ ಎಸಗಿರಬಹುದು ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ