ಆ್ಯಪ್ನಗರ

ಪ್ರಣಬ್‌ ಮುಖರ್ಜಿ ಭಾಷಣದ ಬಳಿಕ ಆರೆಸ್ಸೆಸ್‌ ಸೇರುವವರ ಸಂಖ್ಯೆ 4 ಪಟ್ಟು ಹೆಚ್ಚಳ

ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಸೇರಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ.

TIMESOFINDIA.COM 26 Jun 2018, 12:34 pm
ಕೋಲ್ಕತ: ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಸೇರಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಹೌದು.. ತುಸು ಅಚ್ಚರಿಯಾದರೂ ಇದು ಸತ್ಯ ಸಂಗತಿಯೇ.
Vijaya Karnataka Web pranab


ಇತ್ತೀಚೆಗೆ ನಾಗ್ಪುರದಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ್ದ ಪ್ರಣಬ್‌ ಮುಖರ್ಜಿ, ತಮ್ಮ ಭಾಷಣದಲ್ಲಿ ಭಾರತೀಯತೆ ಹಾಗೂ ಸಂಸ್ಕೃತಿ ಬಗ್ಗೆ ಏಕತೆಯ ಮಾತುಗಳನ್ನಾಡಿದ್ದರು. ಇದರಿಂದ ಅನೇಕರು ಜಾಗೃತಗೊಂಡಿದ್ದು, ಆರ್‌ಎಸ್‌ಎಸ್‌ ಸೇರಿಕೊಳ್ಳ ಬಯಸುವವರ ಸಂಖ್ಯೆ 4 ಪಟ್ಟು ಹೆಚ್ಚಾಗಿದೆ. ದಿನವೊಂದಕ್ಕೆ 1500ಕ್ಕೂ ಅಧಿಕ ಅರ್ಜಿಗಳು ಆರ್‌ಎಸ್‌ಎಸ್‌ ಕಚೇರಿಗೆ ಸಲ್ಲಿಕೆಯಾಗುತ್ತಿದೆ ಎಂದು ಗೊತ್ತಾಗಿದೆ.

ಸಾಮಾನ್ಯವಾಗಿ ಈ ಹಿಂದೆ ಪ್ರತಿ ದಿನಕ್ಕೆ ಸರಾಸರಿ 370 ರಷ್ಟು ಅರ್ಜಿಗಳು ಆರ್‌ಎಸ್‌ಎಸ್‌ಗೆ ಸಲ್ಲಿಕೆಯಾಗುತ್ತಿದ್ದವು. ಪ್ರಣಬ್‌ ಮುಖರ್ಜಿ ಕಾರ್ಯಕ್ರಮದ ಬಳಿಕ ಪ್ರತಿ ದಿನಕ್ಕೆ ಸರಾಸರಿ 1770ಕ್ಕೂ ಅಧಿಕ ಅರ್ಜಿಗಳು ಸಂಘ ಸೇರಿಕೊಳ್ಳಲೆಂದೇ ಸಲ್ಲಿಕೆಯಾಗಿತ್ತಿವೆ. ಇದರಲ್ಲೂ ಬಂಗಾಳ ಭಾಗದಿಂದ ಸಲ್ಲಿಕೆಯಾಗಿರುವುದೇ ಹೆಚ್ಚು ಎಂದು ಆರ್‌ಎಸ್‌ಎಸ್‌ ತಿಳಿಸಿದೆ.

ಕಾರ್ಯಕ್ರಮದಲ್ಲಿ ಪ್ರಣಬ್‌ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ ಅವರ ನಡವಳಿಕೆ, ಮಾತು, ಭಾಷಣಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿರುವ ಆರ್‌ಎಸ್‌ಎಸ್‌, ಕೃತಜ್ಞತೆಯ ಪತ್ರವೊಂದನ್ನೂ ರವಾನಿಸಿದೆ.

ಸಂಘದ ಸಹ ಸರಕಾರ್ಯವಾಹ ಮನಮೋಹನ್‌ ವೈದ್ಯ ಅವರು ಪತ್ರ ರವಾನಿಸಿರುವುದಾಗಿ ಮೂಲಗಳು ತಿಳಿಸಿದ್ದು, ಮುಖರ್ಜಿ ಅವರ ಭಾಷಣದ ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿರುವ ಪತ್ರವು ಸೋಮವಾರ ಮಾಜಿ ರಾಷ್ಟ್ರಪತಿ ಅವರ ಮನೆಗೆ ತಲುಪಿದೆ. ಪ್ರಣಬ್‌ ಬಾಬು ಎಂಬ ಸಂಬೋಧನೆಯಲ್ಲಿ ಕೃತಜ್ಞತಾ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ಅಲ್ಲದೆ ಅವರನ್ನು ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರಿಗೆ ಹೋಲಿಸಲಾಗಿದೆ. ಕಾರ್ಯಕ್ರಮದ ಬಳಿಕ ಸಂಘಕ್ಕೆ ಸೇರಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ ಎಂದೂ ಪತ್ರದಲ್ಲಿ ಹೇಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ