ಆ್ಯಪ್ನಗರ

21 ದಿನ ತುಂಬ ದೀರ್ಘವಾದುದು: ಲಾಕ್‌ಡೌನ್‌ಗೆ ಪ್ರಶಾಂತ್ ಕಿಶೋರ್ ಅಪಸ್ವರ!

ಇಡೀ ದೇಶವೇ ಪ್ರಧಾನಿ ಮೋದಿ ಅವರ 21 ದಿನಗಳ ಲಾಕ್‌ಡೌನ್‌ ಕರೆಗೆ ಓಗೊಟ್ಟಿದೆ. ಎಲ್ಲರೂ ತಮ್ಮ ಮನೆಯಲ್ಲೇ ಉಳಿದು ಲಾಕ್‌ಡೌನ್‌ಗೆ ಬೆಂಬಲ ಘೋಷಿಸುವ ಮೂಲಕ ಮಾರಕ ಕೊರೊನಾ ವೈರಸ್‌ ವಿರುದ್ಧದ ಸರ್ಕಾರದ ಹೋರಾಟಕ್ಕೆ ಸಾಥ್ ನೀಡಿದೆ. ಆದರೆ ಪ್ರಖ್ಯಾತ ರಾಜನೀತಿಜ್ಞ ಪ್ರಶಾಂತ್ ಕಿಶೋರ್ 21 ದಿನಗಳ ಲಾಕ್‌ಡೌನ್ ದೀರ್ಘವಾಯ್ತು ಎಂದು ಚಕಾರ ಎತ್ತಿದ್ದಾರೆ.

Vijaya Karnataka Web 25 Mar 2020, 11:58 am
ನವದೆಹಲಿ: ಕೊರೊನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ ಪ್ರಧಾನಿ ಮೋದಿ ಕರೆ ನೀಡಿರುವ 21 ದಿನಗಳ ಲಾಕ್‌ಡೌನ್ ಆದೇಶಕ್ಕೆ ಇಡೀ ದೇಶ ಬೆಂಬಲ ವ್ಯಕ್ತಪಡಿಸಿದೆ.
Vijaya Karnataka Web Prashant Kishor
ಕೊರೊನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ ಕೇಂದ್ರ ಸರ್ಕಾರ ಘೋಷಿಸಿರುವ 21 ದಿನಗಳ ಲಾಕ್‌ಡೌನ್‌ಗೆ ಪ್ರಶಾಂತ್ ಕಿಶೋರ್ ಅಪಸ್ವರ ಎತ್ತಿದ್ದಾರೆ.


ಲಾಕ್‌ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವ ದೇಶದ ಜನತೆ, ಈ ಮೂಲಕ ಮಾರಕ ಕೊರನಾ ವೈರಸ್ ವಿರುದ್ಧ ಸರ್ಕಾರ ಹೂಡಿರುವ ಸಮರಕ್ಕೆ ಸಾಥ್ ನೀಡಿದ್ದಾರೆ.

ಆದರೆ ಪ್ರಧಾನಿ ಮೋದಿ ಅವರ ಲಾಕ್‌ಡೌನ್ ಆದೇಶಕ್ಕೆ ಅಪಸ್ವರ ಎತ್ತಿರುವ ಉಚ್ಛಾಟಿತ ಜೆಡಿಯು ನಾಯಕ ಹಾಗೂ ರಾಜನೀತಿಜ್ಞ ಪ್ರಶಾಂತ್ ಕಿಶೋರ್, 21 ದಿನಗಳ ಲಾಕ್‌ಡೌನ್ ತುಂಬ ದೀರ್ಘವಾದುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ವಿರುದ್ಧ ಹೋರಾಟ: ಮೋದಿ ಭಾಷಣದ ಮಹತ್ವದ ಘೋಷಣೆಗಳು ಇವು...


ಈ ಕುರಿತು ಟ್ವೀಟ್ ಮಾಡಿರುವ ಪ್ರಶಾಂತ್ ಕಿಶೋರ್ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶವನ್ನು ಲಾಕ್‌ಡೌನ್ ಮಾಡುವ ಆದೇಶ ಸರಿಯಾದುದಾದರೂ, 21 ದಿನ ಅತ್ಯಂತ ದೀರ್ಘ ಸಮಯ ಎಂದು ಚಕಾರ ಎತ್ತಿದ್ದಾರೆ.

ಅಲ್ಲದೇ ಮಾರಕ ವೈರಾಣು ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ಅತ್ಯಂತ ತಡವಾಗಿ ಸಿದ್ಧವಾಗಿದೆ ಎಂದು ಹೇಳಿರುವ ಪ್ರಶಾಂತ್ ಕಿಶೋರ್, ದೇಶಕ್ಕೆ ಗಂಡಾಂತರಕಾರಿ ದಿನಗಳು ಕಾದಿವೆ ಎಂದು ಎಚ್ಚರಿಸಿದ್ದಾರೆ.


21 ದಿನ ಮನೆಯಲ್ಲಿ ಉಳಿಯದಿದ್ದರೆ, ದೇಶ 21 ವರ್ಷ ಹಿಂದುಳಿಯುತ್ತೆ: ಮೋದಿ

ಆದರೆ ಪ್ರಶಾಂತ್ ಕಿಶೋರ್ ಅವರ ಟ್ವೀಟ್‌ಗೆ ವಿರೋಧ ವ್ಯಕ್ತವಾಗಿದ್ದು, ಇಡೀ ದೇಶ ಒಂದಾಗಿ ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವ ಈ ಸಂದರ್ಭದಲ್ಲಿ ವಿರೋಧದ ಧ್ವನಿಯ ಅವಶ್ಯಕತೆ ಇಲ್ಲ ಎಂದು ಹಲವರು ಪ್ರಶಾಂತ್ ಕಿಶೋರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ