ಆ್ಯಪ್ನಗರ

ತುಂಬು ಗರ್ಭಿಣಿ 100 ಕಿ.ಮೀ. ನಡೆದು ಸಾಗುವಂತೆ ಮಾಡಿದ ಕರಾಳ ಕೊರೊನಾ!

ಲಾಕ್‌ಡೌನ್‌ನಿಂದ ಕೆಲಸ ಕಳೆದುಕೊಂಡ ಎಂಟು ತಿಂಗಳ ಗರ್ಭಿಣಿ ಹಾಗೂ ಆಕೆಯ ಪತಿ 100 ಕಿ.ಮೀ. ನಡೆದೇ ಸಾಗಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ದಂಪತಿ ಕೈಯಲ್ಲಿ ಬಿಡಿಗಾಸಿಲ್ಲದೆ, ಹೊಟ್ಟೆಗೆ ಅನ್ನವಿಲ್ಲದೆ ತಮ್ಮೂರು ಬುಲಂದ್‌ಶಹರ್‌ಗೆ ಕಾಲ್ನಡಿಗೆಯಲ್ಲೇ ಹೊರಟಿದ್ದರು.

Vijaya Karnataka Web 30 Mar 2020, 11:49 pm
ಮೀರತ್‌: ಕೊರೊನಾ ಸೋಂಕು ತಡೆಯಲು ದೇಶಾದ್ಯಂತ ಹೇರಲಾಗಿರುವ ಲಾಕ್‌ಡೌನ್‌ ವಲಸೆ ಕಾರ್ಮಿಕರ ಬದುಕನ್ನು ಅಕ್ಷರಶಃ ಬೀದಿಗೆ ತಂದಿದೆ. ಒಂದೆಡೆ ಸೋಂಕಿನಿಂದ ಪ್ರಾಣಭೀತಿ, ಮತ್ತೊಂದೆಡೆ ಆಹಾರ-ಆಸರೆ ಇಲ್ಲದೆ ಅಸಹಾಯಕತೆ, ಭವಿಷ್ಯದ ಅನಿಶ್ಚಿತತೆ ಲಕ್ಷಾಂತರ ಕಾರ್ಮಿಕರನ್ನು ನಗರಗಳಿಂದ ಹಳ್ಳಿಗಳತ್ತ ದೌಡಾಯಿಸುವಂತೆ ಮಾಡಿದೆ. ಆದರೆ ಊರಿಗೆ ಮರಳಲು ಸೂಕ್ತ ವ್ಯವಸ್ಥೆಯ ಕೊರತೆಯಿಂದಾಗಿ ನೂರಾರು ಕಾರ್ಮಿಕರು ಮಾರ್ಗಮಧ್ಯೆ ನಾನಾ ಪಡಿಪಾಟಲು ಪಡುತ್ತಿರುವ ಕರುಣಾಜನಕ ಕತೆಗಳು ಬಯಲಿಗೆ ಬರುತ್ತಿವೆ.
Vijaya Karnataka Web uttar pradesh pregnant


ಲಾಕ್‌ಡೌನ್‌ನಿಂದ ಕೆಲಸ ಕಳೆದುಕೊಂಡ ಎಂಟು ತಿಂಗಳ ಗರ್ಭಿಣಿ ಹಾಗೂ ಆಕೆಯ ಪತಿ 100 ಕಿ.ಮೀ. ನಡೆದೇ ಸಾಗಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸಹರಾನ್‌ಪುರದ ಫ್ಯಾಕ್ಟರಿವೊಂದರಲ್ಲಿದುಡಿಯುತ್ತಿದ್ದ ವಕೀಲ್‌ ಮತ್ತು ಯಾಸ್ಮೀನ್‌ ದಂಪತಿಗೆ ಲಾಕ್‌ಡೌನ್‌ ಘೋಷಿಸಿದ ಮರುದಿನವೇ ಸಂಕಷ್ಟ ಆರಂಭವಾಗಿತ್ತು.ಅವರು ತಂಗಿದ್ದ ಫ್ಯಾಕ್ಟರಿಯ ಕೊಠಡಿ ಖಾಲಿ ಮಾಡಿಸಲಾಯಿತು. ಯಾಸ್ಮೀನ್‌ ಎಂಟು ತಿಂಗಳ ಗರ್ಭಿಣಿಯಾಗಿದ್ದರೂ ಕನಿಕರಿಸದೇ ಹೊರದೂಡಲಾಗಿತ್ತು. ಈ ದಂಪತಿ ಕೈಯಲ್ಲಿ ಬಿಡಿಗಾಸಿಲ್ಲದೆ, ಹೊಟ್ಟೆಗೆ ಅನ್ನವಿಲ್ಲದೆ 100 ಕಿ.ಮೀ ದೂರದ ತಮ್ಮೂರು ಬುಲಂದ್‌ಶಹರ್‌ಗೆ ಕಾಲ್ನಡಿಗೆಯಲ್ಲೇ ಹೊರಟಿದ್ದರು. ಮಾರ್ಗ ಮಧ್ಯೆ ಮೀರತ್‌ನ ಸೋಹ್ರಬ್‌ ಗೇಟ್‌ ಬಸ್‌ ನಿಲ್ದಾಣ ತಲುಪುವ ವೇಳೆಗೆ ದಂಪತಿ ಬಸವಳಿದು ಕುಸಿದು ಕುಳಿತಿದ್ದರು. ಇವರನ್ನು ಕಂಡ ಸ್ಥಳೀಯರು ಪೊಲೀಸ್‌ ಠಾಣೆಗೆ ಸುದ್ದಿ ಮುಟ್ಟಿಸಿದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಸಬ್‌ ಇನ್‌ಸ್ಪೆಕ್ಟರ್‌ ಪ್ರೇಮಲ್‌ ಸಿಂಗ್‌, ನೊಂದ ದಂಪತಿಗೆ ಮೊದಲು ತಿನ್ನಲು ಆಹಾರ ನೀಡಿ, ಕೈಗಷ್ಟು ಕಾಸು ಕೊಟ್ಟು ಸಮಾಧಾನ ಪಡಿಸಿದರು. ನಂತರ ಆಂಬ್ಯುಲೆನ್ಸ್‌ ವ್ಯವಸ್ಥೆ ಮಾಡಿ ಬುಲಂದ್‌ಶಹರ್‌ನ ಅವರ ಗ್ರಾಮ ಅಮರ್‌ಗಢಕ್ಕೆ ಕಳಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಮಾರ್ಚ್ 21ರಿಂದ ರೈಲ್ವೆ ಟಿಕೆಟ್‌ ರದ್ದತಿಗೆ 100% ರಿಫಂಡ್: ಪಡೆಯುವುದು ಹೇಗೆ?

ಕರುಳು ಹಿಂಡುವ ಘಟನೆಗಳು
* ಅಸ್ಸಾಂನ ಗುವಾಹತಿಯಲ್ಲಿಮಗನ ನೋಡಲು ಹೋಗಿದ್ದ 80 ವರ್ಷದ ವೃದ್ಧರೊಬ್ಬರು ಲಾಕ್‌ಡೌನ್‌ನಿಂದಾಗಿ ಅಸಹಾಯತೆಗೆ ಸಿಲುಕಿ, ಊರು ತಲುಪಲು 100 ಕಿ.ಮೀ. ನಡೆದ ಘಟನೆ ನಡೆದಿದೆ. ಅಲ್ಲದೆ, ಮಾರ್ಗ ಮಧ್ಯೆ ಚೋರರು ವೃದ್ಧನ ಬಳಿ ಇದ್ದ ನಗ-ನಾಣ್ಯ ದೋಚಿದ್ದಾರೆ. ತೀವ್ರ ಬಸವಳಿದಿದ್ದ ಅವರನ್ನು ಸ್ಥಳೀಯರು ಗುರುತಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಪೊಲೀಸರು ಅವರನ್ನು ಸುರಕ್ಷಿತವಾಗಿ ಊರು ತಲುಪಿಸಿದ್ದಾರೆ.

ವಲಸೆ ಕಾರ್ಮಿಕರಿಗೆ ರಾಸಾಯನಿಕ ಸ್ನಾನ! ಉತ್ತರ ಪ್ರದೇಶದಲ್ಲಿ ಅಮಾನವೀಯ ಘಟನೆ

* ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿವಾಹನ ವ್ಯವಸ್ಥೆ ಇಲ್ಲದೆ 100 ಕಿ.ಮೀ. ದೂರ ತೆವಳುತ್ತಲೇ ಸಾಗಿದ ವಿಕಲಚೇತನ ಯುವಕ.

* ತಂದೆಯ ಅಂತ್ಯ ಸಂಸ್ಕಾರ ನೆರವೇರಿಸಲು ಮಗ ಬರಲು ಸಾಧ್ಯವಾಗದ ಕಾರಣ, ಮಗಳೇ ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿನಡೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ