ಆ್ಯಪ್ನಗರ

ತಪ್ಪಾಗಿ ಗರ್ಭಿಣಿಗೆ ಗರ್ಭಪಾತದ ಮಾತ್ರೆ: ಸತ್ತೇ ಹೋಯ್ತು ಮಗು

ಜಸ್ಲೋಕ್ ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷದಿಂದಾಗಿ ಮಹಿಳೆಯೊಬ್ಬರು ತಮಗೆ ಜನಿಸಿದ ಅವಳಿ ಮಕ್ಕಳಲ್ಲಿ ಒಂದು ಕಂದಮ್ಮನನ್ನು ಕಳೆದುಕೊಂಡ ಘಟನೆ ನಡೆದಿದೆ.

Mumbai Mirror 22 Jun 2017, 2:54 pm
ಮುಂಬಯಿ: ನಗರದ ಜಸ್ಲೋಕ್ ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷದಿಂದಾಗಿ ಮಹಿಳೆಯೊಬ್ಬರು ತಮಗೆ ಜನಿಸಿದ ಅವಳಿ ಮಕ್ಕಳಲ್ಲಿ ಒಂದು ಕಂದಮ್ಮನನ್ನು ಕಳೆದುಕೊಂಡ ಘಟನೆ ನಡೆದಿದೆ.
Vijaya Karnataka Web pregnant woman given abortion pills in meds mix up by jaslok nurse
ತಪ್ಪಾಗಿ ಗರ್ಭಿಣಿಗೆ ಗರ್ಭಪಾತದ ಮಾತ್ರೆ: ಸತ್ತೇ ಹೋಯ್ತು ಮಗು


ಈ ಕುರಿತು ಆಸ್ಪತ್ರೆಯ ವಿರುದ್ಧ ಗಾಮ್ದೇವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುರ್ಲಾ ನಿವಾಸಿಯಾಗಿರುವ ದಂತವೈದ್ಯೆ ತಾರಂಮ್ ವಸಿಫ್ ಖಾನ್ ಮಗು ಕಳೆದುಕೊಂಡ ನತದೃಷ್ಟೆ. ಗರ್ಭಪಾತಕ್ಕಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ನೀಡಬೇಕಾದ ಮಾತ್ರೆಗಳನ್ನು ತಮಗೆ ನೀಡಿರುವುದೇ ಇದಕ್ಕೆ ಕಾರಣವೆಂದು ತಾರಂಮ್‌ ದೂರಿನಲ್ಲಿ ಆರೋಪಿಸಿದ್ದಾರೆ.

ದಂತವೈದ್ಯೆಯಾದ ತಾರಂಮ್‌ ಗರ್ಭವತಿಯಾದ 25ನೇ ವಾರದಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮಾತ್ರೆಗಳು ಬದಲಾಯಿಸಿ ಮಗುವಿನ ಸಾವಿಗೆ ಕಾರಣವಾಗಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಗುಡುಗಿದ್ದಾರೆ.ತಾರಂಮ್‌ ತಮ್ಮ ದೂರಿನಲ್ಲಿ ಇಬ್ಬರು ಕಿರಿಯ ವೈದ್ಯರ ಹೆಸರನ್ನೂ ನಮೂದಿಸಿದ್ದಾರೆ.

ಜನಿಸಿದ ಅವಳಿ ಹೆಣ್ಣು ಮಕ್ಕಳಲ್ಲಿ ಒಂದು ಮಗು ಸಾವನ್ನಪ್ಪಿದ್ದು, ಮತ್ತೊಂದು ಮಗು ಗಂಭೀರ ಸ್ಥಿತಿ ಎದುರಿಸಿತ್ತು. ಹಾಗಾಗಿ ಆ ಮಗುವನ್ನು ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಮೂರು ತಿಂಗಳ ಕಾಲ ಇರಿಸಲಾಗಿತ್ತು. ಇದೇ ಏಪ್ರಿಲ್‌ ತಿಂಗಳಲ್ಲಿ ತಾಯಿ ಹಾಗೂ ಮಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗಿದೆ.

ಆದರೆ ಜಸ್ಲೋಕ್ ಆಸ್ಪತ್ರೆ ಮಾತ್ರ ಈ ಆರೋಪವನ್ನು ತಳ್ಳಿಹಾಕಿದೆ. ತಮ್ಮಿಂದ ಯಾವುದೇ ರೀತಿಯ ಪ್ರಮಾದವಾಗಿಲ್ಲ ಎಂದು ಹೇಳಿಕೊಂಡಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜೆಜೆ ಆಸ್ಪತ್ರೆಯ ವೈದ್ಯಕೀಯ ಮಂಡಳಿ, ಈ ಕುರಿತು ತನಿಖೆಯನ್ನು ಆರಂಭಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ