ಆ್ಯಪ್ನಗರ

ಆ್ಯಂಬುಲೆನ್ಸ್ ಸಿಗದೆ 20 ಕಿ.ಮೀ ನಡೆದ ಗರ್ಭಿಣಿ: ರಸ್ತೆಯಲ್ಲೇ ಹೆರಿಗೆ, ಮಗು ಸಾವು

ನಾಗರಿಕ ಸಮಾಜವೇ ತಲೆ ತಲೆತಗ್ಗಿಸುವಂತ ಘಟನೆ ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ವರದಿಯಾಗಿದೆ. ಆ್ಯಂಬುಲೆನ್ಸ್ ಸಿಗದೆ ಗರ್ಭಿಣಿಯೊಬ್ಬರು 20 ಕಿ.ಮೀ ನಡೆದು ಮಾರ್ಗ ಮಧ್ಯದಲ್ಲಿಯೇ ಹೆರಿಗೆಯಾಗಿ ಮಗು ಮೃತಪಟ್ಟ ಘಟನೆ ನಡೆದಿದೆ.

Indiatimes 1 Aug 2017, 3:44 pm
ಕಟ್ನಿ: ನಾಗರಿಕ ಸಮಾಜವೇ ತಲೆ ತಲೆತಗ್ಗಿಸುವಂತ ಘಟನೆ ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ವರದಿಯಾಗಿದೆ. ಆ್ಯಂಬುಲೆನ್ಸ್ ಸಿಗದೆ ಗರ್ಭಿಣಿಯೊಬ್ಬರು 20 ಕಿ.ಮೀ ನಡೆದು ಮಾರ್ಗ ಮಧ್ಯದಲ್ಲಿಯೇ ಹೆರಿಗೆಯಾಗಿ ಮಗು ಮೃತಪಟ್ಟ ಘಟನೆ ನಡೆದಿದೆ.
Vijaya Karnataka Web pregnant woman walks 20 km after mp hospital denies ambulance baby dies shortly after delivery
ಆ್ಯಂಬುಲೆನ್ಸ್ ಸಿಗದೆ 20 ಕಿ.ಮೀ ನಡೆದ ಗರ್ಭಿಣಿ: ರಸ್ತೆಯಲ್ಲೇ ಹೆರಿಗೆ, ಮಗು ಸಾವು


ಜಿಲ್ಲೆಯ ಬರ್ಮಾನಿ ಗ್ರಾಮದ ಗರ್ಭಿಣಿ ಬೀನಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆದರೆ, ಆಂಬ್ಯುಲೆನ್ಸ್ ಸಿಗದ ಕಾರಣ ಪತಿಯ ಜತೆ ಬರ್ಹಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬರೋಬ್ಬರಿ 20 ಕಿ.ಮೀ ಕಾಲ್ನಡಿಗೆಯಲ್ಲಿ ತೆರಳಲು ನಿರ್ಧರಿಸಿದ್ದರು. ಸಮದಾಯ ಆರೋಗ್ಯ ಕೇಂದ್ರ ತಲುಪುವ ಮೊದಲೇ ಪೊಲೀಸ್ ಠಾಣೆಯೊಂದರ ಬಳಿ ಪ್ರಸವ ವೇದನೆ ಹೆಚ್ಚಾಗಿ ರಸ್ತೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಮಗು ರಭಸದಿಂದ ನೆಲಕ್ಕೆ ಬಿದ್ದ ಕಾರಣ ಸ್ಥಳದಲ್ಲಿಯೇ ಮೃತಪಟ್ಟಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

'ನಾವು ಆರೋಗ್ಯ ಕೇಂದ್ರಕ್ಕೆ ಕರೆ ಮಾಡಿದ್ದೆವು. ಆದರೆ, ಆ್ಯಂಬುಲೆನ್ಸ್ ಬರಲಿಲ್ಲ. ಬೇರೆ ದಾರಿ ಇಲ್ಲದೇ ತುಂಬು ಗರ್ಭಿಣಿ ಕಾಲ್ನಡಿಗೆಯಲ್ಲಿಯೇ ಆರೋಗ್ಯ ಕೇಂದ್ರಕ್ಕೆ ತೆರಳುವ ಪರಿಸ್ಥಿತಿ ಎದುರಾಯಿತು. ಆದರೆ, ಮಾರ್ಗ ಮಧ್ಯಯೇ ಹೆರಿಗೆಯಾಗಿ ಮಗು ಮೃತಪಟ್ಟಿದೆ' ಎಂದು ಬೀನಾ ಪೋಷಕರು ಅಳಲು ತೊಡಿಕೊಂಡಿದ್ದಾರೆ.

ಆದಾಗ್ಯೂ, ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲೆಯ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (ಸಿಎಂಎಚ್‌ಓ) ಅಶೋಕ್ ಅವಾಧಿಯಾ, 7 ತಿಂಗಳಿಗೆ ಹೆರಿಗೆಯಾದ ಕಾರಣ ಮಗು ಮೃತಪಟ್ಟಿದೆ ಎಂದಿದ್ದಾರೆ.

ಆ್ಯಂಬುಲೆನ್ಸ್ ಯಾಕೆ ಕಳುಹಿಸಲಿಲ್ಲ ಎಂದು ಪ್ರಶ್ನಿಸಿದ್ದಕ್ಕೆ, ಬರ್ಹಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆ ಇಲ್ಲ. ಜನನಿ ಎಕ್ಸ್‌ಪ್ರೆಸ್ (ಗರ್ಭಿಣಿ ಮಹಿಳೆಯರಿಗಿರುವ 108 ಆ್ಯಂಬುಲೆನ್ಸ್ ಸೇವೆ) ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಆ ಸೇವೆ ಭೋಪಾಲ್‌ನಲ್ಲಿ ಲಭ್ಯ ಇರುತ್ತದೆ ಎಂದು ಕೈತೊಳೆದುಕೊಂಡಿದ್ದಾರೆ. ಅದೇನೇ ಇರಲಿ, ಸ್ಮಾರ್ಟ್ ಸಿಟಿ, ಬುಲೆಟ್ ಟ್ರೈನ್ ಅಂತೆಲ್ಲ ಅಂಗೈಯಲ್ಲಿಯೇ ಅರಮನೆ ತೋರಿಸುವ ಬದಲು ಹಳ್ಳಿಗಾಡುಗಳಿಗೆ ಕನಿಷ್ಠ ಸೌಲಭ್ಯಗಳನ್ನಾದರೂ ಕಲ್ಪಿಸಿಕೊಡಲು ಮುಂದಾಗಬೇಕು ಎಂದು ಜನ ಆಗ್ರಹಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ