ಮುಂಬೈ: ಭಾರತೀಯ ಬ್ಯಾಂಕುಗಳಿಗೆ ಕೋಟ್ಯಾಂತರ ರುಪಾಯಿ ಹಣ ವಂಚಿಸಿದ ವಜ್ರೋದ್ಯಮಿ ನೀರವ್ ಮೋದಿಯನ್ನು ಭಾರತಕ್ಕೆ ಗಡಿಪಾರು ಮಾಡಲು ಲಂಡನ್ ನ್ಯಾಯಾಲಯ ಆದೇಶಿಸಿದ ಬೆನ್ನಲ್ಲೇ ಇದೀಗ ಮುಂಬೈನ ಬಿಗಿ ಭದ್ರತೆಯ ಆರ್ಥರ್ ರೋಡ್ ಜೈಲು ಆತನನ್ನು ಸ್ವಾಗತಿಸಲು ಸಜ್ಜಾಗಿದೆ. ನೀರವ್ ಮೋದಿಗಾಗಿ ವಿಶೇಷ ಸೆಲ್ ಸಜ್ಜುಗೊಳಿಸಲಾಗಿದ್ದು, ಆತನನ್ನು ಕರೆದುಕೊಂಡು ಬಂದರೆ ಯಾವುದೇ ಪ್ರಕ್ರಿಯೆಗಳಿಗೆ ತೊಂದರೆ ಉಂಟಾಗದು ಎಂದು ಜೈಲಿ ಅಧಿಕಾರಿಗಳು ಹೇಳಿದ್ದಾರೆ.
ಭಾರತೀಯ ಬ್ಯಾಂಕುಗಳಿಂದ ಕೋಟ್ಯಾಂತರ ರುಪಾಯಿ ಹಣ ಪಡೆದು ಹಿಂದುರಿಗಿಸದೇ ಪಂಗನಾಮ ಹಾಕಿದ್ದ ನೀರವ್ ಮೋದಿ ಲಂಡನ್ಗೆ ಪರಾರಿಯಾಗಿದ್ದ. ಕೆಲ ವರ್ಷಗಳ ಹಿಂದೆ ಲಂಡನ್ ಬಂಧಿತನಾಗಿ ಜೈಲು ವಾಸ ಅನುಭವಿಸುತ್ತಿರುವ ಆತನನ್ನು ಭಾರತಕ್ಕೆ ಗಡಿಪಾರು ಮಾಡಲು ಲಂಡನ್ ನ್ಯಾಯಾಲಯ ಆದೇಶಿಸಿದೆ.
ಇದರ ಬೆನ್ನಲ್ಲೇ ಆತನಿಗೆಂದೇ ವಿಶೇಷ ಸೆಲ್ ಸಜ್ಜುಗೊಳಿಸಲಾಗಿದ್ದು, ಬ್ಯಾರಕ್ ನಂಬರ್ ಹನ್ನೆರಡರಲ್ಲಿರುವ ಮೂರು ಸೆಲ್ಗಳ ಪೈಕಿ ಒಂದರಲ್ಲಿ ಆತನನ್ನು ಇಡಲಾಗುತ್ತದೆ ಎಂದು ಜೈಲಾಧಿಕಾರಿಗಳು ಹೇಳಿದ್ದಾರೆ.
ಆತನನ್ನು ಇರಿಸಲು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು, ಆತನ ಗಡಿಪಾರು ಪ್ರಕ್ರಿಯೆ ಪೂರ್ಣವಾದ ತಕ್ಷಣವೇ ಆತನನ್ನು ಇಲ್ಲಿ ಇರಿಸಬಹುದು ಎಂದು ಹೇಳಿದ್ದಾರೆ.
2019ರ ಮಾರ್ಚ್ನಿಂದ ಲಂಡನ್ ಜೈಲಿನಲ್ಲಿರುವ ನೀರವ್ ಮೋದಿ ಮೇಲೆ ಗಂಭೀರ ಆರೋಪಗಳಿದ್ದು, ಹೀಗಾಗಿ ಆತಬ ಹಲವು ಜಾಮೀನು ಮನವಿಗಳನ್ನು ಕೋರ್ಟ್ ತಳ್ಳಿ ಹಾಕಿತ್ತು.
ಅತ್ತ ಆತನ ಗಡಿಪಾರಿಗೆ ಕೋರ್ಟ್ ಅಸ್ತು ಎನ್ನುತ್ತಲೇ, ಇತ್ತ ಕೇಂದ್ರ ಸರ್ಕಾರ ಮಹಾರಾಷ್ಟ್ರ ಬಂದೀಖಾನೆ ಮಂತ್ರಾಲಯಕ್ಕೆ ಪತ್ರ ಬರೆದು ಅಲ್ಲಿನ ಸಿದ್ಧತೆಗಳ ಬಗ್ಗೆ ಮಾಹಿತಿ ಕೇಳಿದೆ.
ರಾಜ್ಯ ಸರ್ಕಾರ ಜೈಲಿನಲ್ಲಿರುವ ಎಲ್ಲಾ ವ್ಯವಸ್ಥೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದ್ದು, ಎಲ್ಲಾ ಸಜ್ಜೀಕರಣಗಳು ಪೂರ್ತಿಯಾಗಿದೆ ಎಂದು ಹೇಳಿದೆ.
ಭಾರತೀಯ ಬ್ಯಾಂಕುಗಳಿಂದ ಕೋಟ್ಯಾಂತರ ರುಪಾಯಿ ಹಣ ಪಡೆದು ಹಿಂದುರಿಗಿಸದೇ ಪಂಗನಾಮ ಹಾಕಿದ್ದ ನೀರವ್ ಮೋದಿ ಲಂಡನ್ಗೆ ಪರಾರಿಯಾಗಿದ್ದ. ಕೆಲ ವರ್ಷಗಳ ಹಿಂದೆ ಲಂಡನ್ ಬಂಧಿತನಾಗಿ ಜೈಲು ವಾಸ ಅನುಭವಿಸುತ್ತಿರುವ ಆತನನ್ನು ಭಾರತಕ್ಕೆ ಗಡಿಪಾರು ಮಾಡಲು ಲಂಡನ್ ನ್ಯಾಯಾಲಯ ಆದೇಶಿಸಿದೆ.
ಇದರ ಬೆನ್ನಲ್ಲೇ ಆತನಿಗೆಂದೇ ವಿಶೇಷ ಸೆಲ್ ಸಜ್ಜುಗೊಳಿಸಲಾಗಿದ್ದು, ಬ್ಯಾರಕ್ ನಂಬರ್ ಹನ್ನೆರಡರಲ್ಲಿರುವ ಮೂರು ಸೆಲ್ಗಳ ಪೈಕಿ ಒಂದರಲ್ಲಿ ಆತನನ್ನು ಇಡಲಾಗುತ್ತದೆ ಎಂದು ಜೈಲಾಧಿಕಾರಿಗಳು ಹೇಳಿದ್ದಾರೆ.
ಆತನನ್ನು ಇರಿಸಲು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು, ಆತನ ಗಡಿಪಾರು ಪ್ರಕ್ರಿಯೆ ಪೂರ್ಣವಾದ ತಕ್ಷಣವೇ ಆತನನ್ನು ಇಲ್ಲಿ ಇರಿಸಬಹುದು ಎಂದು ಹೇಳಿದ್ದಾರೆ.
2019ರ ಮಾರ್ಚ್ನಿಂದ ಲಂಡನ್ ಜೈಲಿನಲ್ಲಿರುವ ನೀರವ್ ಮೋದಿ ಮೇಲೆ ಗಂಭೀರ ಆರೋಪಗಳಿದ್ದು, ಹೀಗಾಗಿ ಆತಬ ಹಲವು ಜಾಮೀನು ಮನವಿಗಳನ್ನು ಕೋರ್ಟ್ ತಳ್ಳಿ ಹಾಕಿತ್ತು.
ಅತ್ತ ಆತನ ಗಡಿಪಾರಿಗೆ ಕೋರ್ಟ್ ಅಸ್ತು ಎನ್ನುತ್ತಲೇ, ಇತ್ತ ಕೇಂದ್ರ ಸರ್ಕಾರ ಮಹಾರಾಷ್ಟ್ರ ಬಂದೀಖಾನೆ ಮಂತ್ರಾಲಯಕ್ಕೆ ಪತ್ರ ಬರೆದು ಅಲ್ಲಿನ ಸಿದ್ಧತೆಗಳ ಬಗ್ಗೆ ಮಾಹಿತಿ ಕೇಳಿದೆ.
ರಾಜ್ಯ ಸರ್ಕಾರ ಜೈಲಿನಲ್ಲಿರುವ ಎಲ್ಲಾ ವ್ಯವಸ್ಥೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದ್ದು, ಎಲ್ಲಾ ಸಜ್ಜೀಕರಣಗಳು ಪೂರ್ತಿಯಾಗಿದೆ ಎಂದು ಹೇಳಿದೆ.