ಆ್ಯಪ್ನಗರ

ಶಿಷ್ಟಾಚಾರ ಬದಿಗೊತ್ತಿ ಮಹಿಳಾ ಪೇದೆಯ ಆರೋಗ್ಯ ವಿಚಾರಿಸಿದ ರಾಷ್ಟ್ರಪತಿ

ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಶಿಷ್ಟಾಚಾರ ಬದಿಗೊತ್ತಿ, ಅಸ್ವಸ್ಥಗೊಂಡ ಮಹಿಳಾ ಪೇದೆಯ ಆರೋಗ್ಯ ವಿಚಾರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸಚಿವೆ ನಿರ್ಮಲಾ ಸೀತಾರಾಮನ್‌ ರಾಷ್ಟ್ರಪತಿಗಳನ್ನು ಹಿಂಬಾಲಿಸಿದ್ದಾರೆ.

Vijaya Karnataka 29 Oct 2019, 7:57 pm
ಹೊಸದಿಲ್ಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಶಿಷ್ಟಾಚಾರ ಬದಿಗೊತ್ತಿ, ಅಸ್ವಸ್ಥಗೊಂಡ ಮಹಿಳಾ ಪೇದೆಯ ಆರೋಗ್ಯ ವಿಚಾರಿಸುವ ಮೂಲಕ ಮಾನವೀಯತೆ ಮೆರೆದರು.
Vijaya Karnataka Web Ram Nath Kovind


ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿಮಂಗಳವಾರ ನಡೆದ ಮೊದಲ 'ರಾಷ್ಟ್ರೀಯ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿರಾಷ್ಟ್ರಪತಿ ಭಾಗವಹಿಸಿದ್ದರು. ವೇದಿಕೆ ಬಳಿಯಲ್ಲೇ ನಿಯೋಜನೆಗೊಂಡಿದ್ದ ಮಹಿಳಾ ಪೇದೆಯೊಬ್ಬರು ಕಾರ್ಯಕ್ರಮದ ಕೊನೆಯಲ್ಲಿರಾಷ್ಟ್ರಗೀತೆ ಹಾಡುವಾಗ ಅಸ್ವಸ್ಥರಾಗಿ ಕುಸಿದರು. ಸ್ವಲ್ಪಹೊತ್ತಿನಲ್ಲೇ ಸಾವರಿಸಿಕೊಂಡು ಕಾರ್ಪೆಟ್‌ ಮೇಲೆ ಕುಳಿತರು.


ರಾಮರಾಜ್ಯ ನಿರ್ಮಾಣವಾದರೆ ದೇಶ, ಜಗತ್ತು ಸುಖಿ: ರಾಷ್ಟ್ರಪತಿ

ಇದನ್ನು ಗಮನಿಸಿದ ರಾಷ್ಟ್ರಪತಿಯವರು ರಾಷ್ಟ್ರಗೀತೆ ಮುಗಿದ ಬಳಿಕ ವೇದಿಕೆಯಿಂದ ಇಳಿದವರೇ ನೇರವಾಗಿ ಮಹಿಳಾ ಪೇದೆ ಬಳಿ ತೆರಳಿ ಆರೋಗ್ಯ ವಿಚಾರಿಸಿದರು. ಹಣಕಾಸು ಮತ್ತು ಕಾರ್ಪೊರೇಟ್‌ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್‌, ಇದೇ ಖಾತೆಯ ಸಹಾಯಕ ಸಚಿವ ಅನುರಾಗ್‌ ಠಾಕೂರ್‌ ಸಹ ರಾಷ್ಟ್ರಪತಿಯವರನ್ನು ಹಿಂಬಾಲಿಸಿದರು.

3 ದಿನಗಳ ರಾಜ್ಯ ಪ್ರವಾಸ, ಇಂದು ಮೈಸೂರಿಗೆ ರಾಷ್ಟ್ರಪತಿ ಆಗಮನ

ಠಾಕೂರ್‌ ಅವರು ಪೇದೆಗೆ ನೀರು ನೀಡಿದರು. ಸಾಮಾನ್ಯವಾಗಿ ರಾಷ್ಟ್ರಗೀತೆ ಮುಗಿಯುತ್ತಿದ್ದಂತೆ ರಾಷ್ಟ್ರಪತಿಯವರು ಕಾರ್ಯಕ್ರಮ ಸ್ಥಳದಿಂದ ನಿರ್ಗಮಿಸುತ್ತಾರೆ. ಇಲ್ಲಿಹಾಗೆ ಮಾಡದೇ ಮಹಿಳಾ ಪೇದೆ ಆರೋಗ್ಯ ವಿಚಾರಿಸಿದ ನಡೆಗೆ ಸಭಿಕರು ಕರತಾಡನದ ಮೂಲಕ ಸಂತಸ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ