ಶಿಷ್ಟಾಚಾರ ಬದಿಗೊತ್ತಿ ಅಸ್ವಸ್ಥಗೊಂಡ ಮಹಿಳಾ ಪೇದೆ ಆರೋಗ್ಯ ವಿಚಾರಿಸಿದ ರಾಷ್ಟ್ರಪತಿ
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ಭಾಗವಹಿಸಿದ್ದರು. ವೇದಿಕೆ ಬಳಿಯಲ್ಲೇ ನಿಯೋಜನೆಗೊಂಡಿದ್ದ ಮಹಿಳಾ ಪೇದೆಯೊಬ್ಬರು ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟ್ರಗೀತೆ ಹಾಡುವಾಗ ಅಸ್ವಸ್ಥರಾಗಿ ಕುಸಿದರು.
Vijaya Karnataka 30 Oct 2019, 11:37 am
ಹೊಸದಿಲ್ಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶಿಷ್ಟಾಚಾರ ಬದಿಗೊತ್ತಿ, ಅಸ್ವಸ್ಥಗೊಂಡ ಮಹಿಳಾ ಪೇದೆಯ ಆರೋಗ್ಯ ವಿಚಾರಿಸುವ ಮೂಲಕ ಮಾನವೀಯತೆ
ಮೆರೆದರು.
ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಮಂಗಳವಾರ ನಡೆದ ಮೊದಲ ‘ರಾಷ್ಟ್ರೀಯ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ಭಾಗವಹಿಸಿದ್ದರು. ವೇದಿಕೆ ಬಳಿಯಲ್ಲೇ ನಿಯೋಜನೆಗೊಂಡಿದ್ದ ಮಹಿಳಾ ಪೇದೆಯೊಬ್ಬರು ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟ್ರಗೀತೆ ಹಾಡುವಾಗ ಅಸ್ವಸ್ಥರಾಗಿ ಕುಸಿದರು. ಸ್ವಲ್ಪಹೊತ್ತಿನಲ್ಲೇ ಸಾವರಿಸಿಕೊಂಡು ಕಾರ್ಪೆಟ್ ಮೇಲೆ ಕುಳಿತರು. ಇದನ್ನು ಗಮನಿಸಿದ ರಾಷ್ಟ್ರಪತಿಯವರು ರಾಷ್ಟ್ರಗೀತೆ ಮುಗಿದ ಬಳಿಕ ವೇದಿಕೆಯಿಂದ ಇಳಿದವರೇ ನೇರವಾಗಿ ಮಹಿಳಾ ಪೇದೆ ಬಳಿ ತೆರಳಿ ಆರೋಗ್ಯ ವಿಚಾರಿಸಿದರು.
ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್, ಇದೇ ಖಾತೆಯ ಸಹಾಯಕ ಸಚಿವ ಅನುರಾಗ್ ಠಾಕೂರ್ ಸಹ ರಾಷ್ಟ್ರಪತಿಯವರನ್ನು
ಹಿಂಬಾಲಿಸಿದರು. ಠಾಕೂರ್ ಅವರು ಪೇದೆಗೆ ನೀರು ನೀಡಿದರು. ಸಾಮಾನ್ಯವಾಗಿ ರಾಷ್ಟ್ರಗೀತೆ ಮುಗಿಯುತ್ತಿದ್ದಂತೆ ರಾಷ್ಟ್ರಪತಿಯವರು ಕಾರ್ಯಕ್ರಮ ಸ್ಥಳದಿಂದ
ನಿರ್ಗಮಿಸುತ್ತಾರೆ. ಇಲ್ಲಿ ಹಾಗೆ ಮಾಡದೇ ಮಹಿಳಾ ಪೇದೆ ಆರೋಗ್ಯ ವಿಚಾರಿಸಿದ ನಡೆಗೆ ಸಭಿಕರು ಕರತಾಡನದ ಮೂಲಕ ಸಂತಸ ವ್ಯಕ್ತಪಡಿಸಿದರು.
ಮೆರೆದರು.
ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಮಂಗಳವಾರ ನಡೆದ ಮೊದಲ ‘ರಾಷ್ಟ್ರೀಯ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ಭಾಗವಹಿಸಿದ್ದರು. ವೇದಿಕೆ ಬಳಿಯಲ್ಲೇ ನಿಯೋಜನೆಗೊಂಡಿದ್ದ ಮಹಿಳಾ ಪೇದೆಯೊಬ್ಬರು ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟ್ರಗೀತೆ ಹಾಡುವಾಗ ಅಸ್ವಸ್ಥರಾಗಿ ಕುಸಿದರು. ಸ್ವಲ್ಪಹೊತ್ತಿನಲ್ಲೇ ಸಾವರಿಸಿಕೊಂಡು ಕಾರ್ಪೆಟ್ ಮೇಲೆ ಕುಳಿತರು. ಇದನ್ನು ಗಮನಿಸಿದ ರಾಷ್ಟ್ರಪತಿಯವರು ರಾಷ್ಟ್ರಗೀತೆ ಮುಗಿದ ಬಳಿಕ ವೇದಿಕೆಯಿಂದ ಇಳಿದವರೇ ನೇರವಾಗಿ ಮಹಿಳಾ ಪೇದೆ ಬಳಿ ತೆರಳಿ ಆರೋಗ್ಯ ವಿಚಾರಿಸಿದರು.
ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್, ಇದೇ ಖಾತೆಯ ಸಹಾಯಕ ಸಚಿವ ಅನುರಾಗ್ ಠಾಕೂರ್ ಸಹ ರಾಷ್ಟ್ರಪತಿಯವರನ್ನು
ಹಿಂಬಾಲಿಸಿದರು. ಠಾಕೂರ್ ಅವರು ಪೇದೆಗೆ ನೀರು ನೀಡಿದರು. ಸಾಮಾನ್ಯವಾಗಿ ರಾಷ್ಟ್ರಗೀತೆ ಮುಗಿಯುತ್ತಿದ್ದಂತೆ ರಾಷ್ಟ್ರಪತಿಯವರು ಕಾರ್ಯಕ್ರಮ ಸ್ಥಳದಿಂದ
ನಿರ್ಗಮಿಸುತ್ತಾರೆ. ಇಲ್ಲಿ ಹಾಗೆ ಮಾಡದೇ ಮಹಿಳಾ ಪೇದೆ ಆರೋಗ್ಯ ವಿಚಾರಿಸಿದ ನಡೆಗೆ ಸಭಿಕರು ಕರತಾಡನದ ಮೂಲಕ ಸಂತಸ ವ್ಯಕ್ತಪಡಿಸಿದರು.