ಆ್ಯಪ್ನಗರ

ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಶಬರಿಮಲೆ ಭೇಟಿ ರದ್ದು

ಕಳೆದ ಕೆಲವು ವರ್ಷಗಳಿಂದ ಭಾರಿ ವಿವಾದಕ್ಕೆ ಕಾರಣವಾಗಿದ್ದ ಶಬರಿಮಲೆ, ದೇಗುಲ ಈಗ ಭಕ್ತರಿಂದ ತುಂಬಿ ತುಳುಕುತ್ತಿದೆ. ಭದ್ರತೆ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಭೇಟಿ ರದ್ದು ಮಾಡಲಾಗಿದೆ.

Vijaya Karnataka Web 2 Jan 2020, 8:08 pm
ಕಾಸರಗೋಡು (ಕೇರಳ) : ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಜ.6ರಂದು ಕೇರಳಕ್ಕೆ ಆಗಮಿಸಲಿದ್ದಾರೆ. ಆದರೆ ಭದ್ರತೆ ದೃಷ್ಟಿಯಿಂದ ಶಬರಿಮಲೆ ಭೇಟಿಯನ್ನು ರದ್ದುಪಡಿಸಲಾಗಿದೆ.
Vijaya Karnataka Web ರಾಮನಾಥ್‌ ಕೋವಿಂದ್
ರಾಮನಾಥ್‌ ಕೋವಿಂದ್


ಜ.6ರಂದು ಕೊಚ್ಚಿಗೆ ಆಗಮಿಸುವ ರಾಷ್ಟ್ರಪತಿ ಕೋವಿಂದ್‌ ಜ.7ರಂದು ಅಲ್ಲಿಂದ ಲಕ್ಷ ದ್ವೀಪಕ್ಕೆ ತೆರಳುವರು. ಜ.9ರಂದು ಮರಳಿ ಕೊಚ್ಚಿಗೆ ಆಗಮಿಸಿ, ಹೊಸದಿಲ್ಲಿಗೆ ತೆರಳಲಿದ್ದಾರೆ.

ರಾಷ್ಟ್ರಪತಿಗಳ ಶಬರಿಮಲೆ ದರ್ಶನಕ್ಕಾಗಿ ಭದ್ರತೆ ಕುರಿತು ರಾಷ್ಟ್ರಪತಿ ಭವನವು ಕೇರಳ ಸರಕಾರಕ್ಕೆ ತಿಳಿಸಿತ್ತು. ಅದರಂತೆ ದೇವಸ್ವಂ ಮಂಡಳಿ ಹಾಗೂ ರಾಜ್ಯ ಸರಕಾರ ಸಭೆ ನಡೆಸಿ ಹೆಲಿಪ್ಯಾಡ್‌ ನಿರ್ಮಿಸುವ ಬಗ್ಗೆ ಪರಿಶೀಲನೆ ನಡೆಸಲಾಗಿತ್ತು.

ಆದರೆ ರಾಷ್ಟ್ರಪತಿ ಆಗಮನದ ಸಂದರ್ಭದಲ್ಲಿಭದ್ರತೆ ಮತ್ತು ಮಕರ ಮಹೋತ್ಸವದ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಭಾರೀ ಹೆಚ್ಚಾಗುವ ಹಿನ್ನೆಲೆಯಲ್ಲಿ ಭದ್ರತೆ ಒದಗಿಸಲು ಸಾಧ್ಯವಿಲ್ಲವೆಂದು ಕೇರಳ ರಾಷ್ಟ್ರಪತಿ ಭವನಕ್ಕೆ ರಾಜ್ಯ ಸರಕಾರ ತಿಳಿಸಿದ ಹಿನ್ನೆಲೆಯಲ್ಲಿಶಬರಿಮಲೆ ಭೇಟಿಯನ್ನು ರದ್ದುಪಡಿಸಲಾಗಿದೆ.

ಜ.6ರಂದು ಕೇರಳದ ಕೊಚ್ಚಿಗೆ ಆಗಮಿಸಿ, ಶಬರಿಮಲೆಗೆ ತೆರಳಿ ಅಯ್ಯಪ್ಪ ದರ್ಶನ ನಡೆಸಲು ತೀರ್ಮಾನಿಸಲಾಗಿತ್ತು. ಕೊಚ್ಚಿಗೆ ಆಗಮಿಸುವ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಕೊಚ್ಚಿಯಲ್ಲಿತಂಗಿ ಜ.7 ರಂದು ಲಕ್ಷ ದ್ವೀಪಕ್ಕೆ ತೆರಳಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ