ಆ್ಯಪ್ನಗರ

ನಾಡಹಬ್ಬ ದಸರಾಗೆ ಕನ್ನಡದಲ್ಲಿ ಶುಭಕೋರಿದ ರಾಷ್ಟ್ರಪತಿ

ಇಂದು ದೇಶಾದ್ಯಂತ ವಿಜಯ ದಶಮಿ ಆಚರಣೆ ಹಿನ್ನೆಲೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಟ್ವೀಟ್‌ ಮೂಲಕ ಶುಭ ಕೋರಿದ್ದಾರೆ. ಆ ವೇಳೆ ಅವರು ಕನ್ನಡ ಸೇರಿ ಅನೇಕ ಭಾಷೆಗಳಲ್ಲಿ ಟ್ವೀಟ್ ಮಾಡಿರುವುದು ಕನ್ನಡಾಭಿಮಾನಿಗಳ ಹೃದಯ ಗೆದ್ದಿದೆ.

Agencies 19 Oct 2018, 11:59 am
ಹೊಸದಿಲ್ಲಿ: ಇಂದು ನಾಡಿನೆಲ್ಲೆಡೆ ವಿಜಯ ದಶಮಿಯ ಸಂಭ್ರಮ. ಈ ಹಿನ್ನೆಲೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಟ್ವೀಟ್‌ ಮೂಲಕ ದೇಶದ ಜನತೆಗೆ ವಿಜಯ ದಶಮಿ ಹಾಗೂ ನವರಾತ್ರಿಯ ಶುಭ ಹಾರೈಸಿದ್ದಾರೆ.
Vijaya Karnataka Web ramnath kovind


ಇನ್ನು ಕೋವಿಂದ್ ಅವರು, ಇಂಗ್ಲಿಷ್, ಹಿಂದಿ ಹಾಗೂ ಕನ್ನಡ ಸೇರಿ ಅನೇಕ ಭಾಷೆಗಳಲ್ಲಿ ಟ್ವೀಟ್ ಮಾಡಿರುವುದು ವಿಶೇಷ. ಕನ್ನಡದಲ್ಲೂ ಟ್ವೀಟ್ ಮಾಡಿರುವ ರಾಷ್ಟ್ರಪತಿಗಳು, '' ವಿಜಯದಶಮಿ ಹಾಗೂ ದುರ್ಗಾಪೂಜೆಯ ಶುಭ ಸಂದರ್ಭದಲ್ಲಿ, ದೇಶದ ನಾಗರಿಕರೆಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು. ದಸರಾ ಹಬ್ಬವು ಸಮಾಜದಲ್ಲಿನ ದುಷ್ಟಶಕ್ತಿಗಳ ಮೇಲೆ ಶಿಷ್ಟಶಕ್ತಿಗಳ ಗೆಲುವಿನ ವಿಜಯೋತ್ಸವವಾಗಿದೆ. ದಸರಾ ಮಹೋತ್ಸವವು ನಮ್ಮೆಲ್ಲರ ಕುಟುಂಬದ ಸದಸ್ಯರೆಲ್ಲರಿಗೂ ಹಾಗೂ ನಮ್ಮ ಸಮಾಜದ ಎಲ್ಲಾ ವರ್ಗಗಳ ಸದಸ್ಯರಿಗೂ ಶುಭ ಉಂಟು ಮಾಡಲಿ'' ಎಂದು ಶುಭ ಕೋರಿದ್ದಾರೆ.

ಕರ್ನಾಟಕದ ಮೈಸೂರಿನಲ್ಲಿಂದು ವಿಶ್ವ ವಿಖ್ಯಾತ ಜಂಬೂ ಸವಾರಿ ನಡೆಯಲಿದೆ. ಈ ಹಿನ್ನೆಲೆ ಕನ್ನಡದಲ್ಲಿ ಶುಭ ಕೋರಿದ ಕೋವಿಂದ್‌ರ ನಡೆಗೆ ಅನೇಕ ಕನ್ನಡಾಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದು, ಅವರ ಟ್ವೀಟ್‌ಗೆ ಪ್ರತಿಕ್ರಿಯೆ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ