ಆ್ಯಪ್ನಗರ

ಶಸ್ತ್ರದ ರೀತಿ ಕೃತಕ ಬುದ್ಧಿಮತ್ತೆ ದುರ್ಬಳಕೆ ತಡೆ ಅಗತ್ಯ: ಪ್ರಧಾನಿ ಮೋದಿ

ಭವಿಷ್ಯದಲ್ಲಿ ವಿಪತ್ತುಗಳ ನಿರ್ವಹಣೆ, ನಿಯಂತಣದಲ್ಲಿ ಕೃತಕ ಬುದ್ಧಿಮತ್ತೆ ಮುಖ್ಯ ಎನಿಸಲಿದೆ. ಮಾನವನ ಬುದ್ಧಿಶಕ್ತಿಗೆ ಸಿಕ್ಕ ಅತ್ಯುನ್ನತ ಶ್ಲಾಘನೆಯೇ 'ಎಐ'. ಇತಿಹಾಸದ ಪ್ರತಿ ಹಂತಗಳಲ್ಲೂ ಜಗತ್ತನ್ನು ಭಾರತ ತನ್ನ ಜ್ಞಾನ ಮತ್ತು ಕಲಿಕೆಯ ಬಲದಿಂದ ಮುನ್ನೆಡಸಿರುವ ನಿದರ್ಶನಗಳಿವೆ.

Vijaya Karnataka Web 5 Oct 2020, 11:12 pm
ಹೊಸದಿಲ್ಲಿ: ಕೃಷಿ ಮತ್ತು ಭವಿಷ್ಯದ ನಗರಾಭಿವೃದ್ಧಿ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ (ಎಐ) ಬಹುಮುಖ್ಯ ಪಾತ್ರವಹಿಸಲಿದೆ. ಹೀಗಾಗಿ ಅದನ್ನು ಜಗತ್ತಿನ ವಿರುದ್ಧ ಶಸ್ತ್ರದಂತೆ ದುರ್ಬಳಕೆಯಾಗುವುದನ್ನು ತಡೆಯುವುದು ಅಗತ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
Vijaya Karnataka Web ನರೇಂದ್ರ ಮೋದಿ
ನರೇಂದ್ರ ಮೋದಿ


'ಸಾಮಾಜಿಕ ಸಬಲೀಕರಣಕ್ಕಾಗಿ ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ' (ರೈಸ್‌) ಕುರಿತ 2020ನೇ ಸಾಲಿನ ಜಾಗತಿಕ ವರ್ಚುಯಲ್‌ ಸಮ್ಮೇಳನವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

''ಭವಿಷ್ಯದಲ್ಲಿ ವಿಪತ್ತುಗಳ ನಿರ್ವಹಣೆ, ನಿಯಂತಣದಲ್ಲಿ ಕೃತಕ ಬುದ್ಧಿಮತ್ತೆ ಮುಖ್ಯ ಎನಿಸಲಿದೆ. ಮಾನವನ ಬುದ್ಧಿಶಕ್ತಿಗೆ ಸಿಕ್ಕ ಅತ್ಯುನ್ನತ ಶ್ಲಾಘನೆಯೇ 'ಎಐ'. ಇತಿಹಾಸದ ಪ್ರತಿ ಹಂತಗಳಲ್ಲೂ ಜಗತ್ತನ್ನು ಭಾರತ ತನ್ನ ಜ್ಞಾನ ಮತ್ತು ಕಲಿಕೆಯ ಬಲದಿಂದ ಮುನ್ನೆಡಸಿರುವ ನಿದರ್ಶನಗಳಿವೆ. ಹಾಗಾಗಿ ಮಹತ್ತರ ತಂತ್ರಜ್ಞಾನವಾದ ಎಐ ದುರ್ಬಳಕೆಯನ್ನು ಮುನ್ನೆಚ್ಚರಿಕೆ ವಹಿಸಿ ಈಗಿನಿಂದಲೇ ತಡೆಯುವುದು ಪ್ರಮುಖ ವಿಚಾರವಾಗಿದೆ'' ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ