ಆ್ಯಪ್ನಗರ

ಭೂಮಿ ಪೂಜೆಗೆ ಮುನ್ನ ಅಯೋಧ್ಯೆಯಲ್ಲಿರುವ ಹನುಮನ ದರ್ಶನ ಪಡೆಯಲಿದ್ದಾರೆ ಪ್ರಧಾನಿ ಮೋದಿ!

ಭೂಮಿ ಪೂಜೆಗೆ ಮುನ್ನ ಅಯೋಧ್ಯೆಯಲ್ಲಿರುವ ಹನುಮನ ದರ್ಶನವನ್ನ ಪ್ರಧಾನಿ ನರೇಂದ್ರ ಮೋದಿ ಪಡೆಯಲಿದ್ದಾರೆ. ಹನುಮಾನ್‌ನ ದರ್ಶನ ಪಡೆದು ನಂತರ ಭೂಮಿ ಪೂಜೆ ನಡೆಯುವ ಸ್ಥಳಕ್ಕೆ ತೆರಳಲಿದ್ದಾರೆ. ಈ ಹಿನ್ನೆಲೆ ದೇವಾಲಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ANI 5 Aug 2020, 9:10 am
ಅಯೋಧ್ಯೆ: ಶ್ರೀ ರಾಮನ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣದ ಭೂಮಿ ಪೂಜೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಆದರೆ ಭೂಮಿ ಪೂಜೆಗೂ ಮುನ್ನ ಪ್ರಧಾನಿ ಮೋದಿ ಹನುಮನಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಅಯೋಧ್ಯೆಯಲ್ಲಿರುವ ಹನುಮಾನ್‌ ಗಾರ್ಹಿ ಮಂದಿರಕ್ಕೆ ತೆರಳಿ ಪ್ರಧಾನಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ನಡೆಸಲಿದ್ದಾರೆ.
Vijaya Karnataka Web EeoBWhuUYAA9fyh


ಪ್ರಧಾನ ಮಂತ್ರಿ ಆಗುಮಿಸುವ ಹಿನ್ನೆಲೆ ದೇವಾಲಯದಲ್ಲಿ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ಅಲ್ಲದೆ, ದೇವಾಲಯ ಹಾಗೂ ಅದರ ಸುತ್ತಮುತ್ತ ಕೊರೊನಾ ಸೋಂಕು ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳಲಾಗಿದೆ. ಈಗಾಗಲೇ ದೇವಾಲಯದ ಸುತ್ತಮುತ್ತ ಸ್ಯಾನಿಟೈಜರ್‌ ಸಿಂಪಡಿಸಲಾಗಿದೆ.


ಇನ್ನು ಪ್ರಧಾನಿ ಭೇಟಿ ಹಿನ್ನೆಲೆ ಸಂತೋಷಗೊಂಡಿರುವ ದೇವಾಲಯದ ಪ್ರಧಾನ ಅರ್ಚಕ ಶ್ರೀ ಗದ್ದೀನ್‌ಶೀನ್ ಪ್ರೇಮದಾಸ್ ಜಿ ಮಹಾರಾಜ್, ಪ್ರಧಾನಿ ಮೋದಿ ದೇವಾಲಯಕ್ಕೆ ಭೇಟಿ ನೀಡುತ್ತಿರುವುದು ಹೆಮ್ಮೆಯ ವಿಚಾರ. ಪ್ರಧಾನಿ ಮೋದಿಯನ್ನ ನಾವು ರುಮಾಲು ಹಾಗೂ ಶ್ರೀರಾಮನ ಮುದ್ರೆ ಇರುವ ಬೆಳ್ಳಿಯ ಕಿರೀಟ ತೊಡಿಸಿ ಸ್ವಾಗತಿಸುತ್ತೇವೆ ಎಂದು ತಿಳಿಸಿದ್ದಾರೆ.

ಅಲ್ಲದೆ ಪ್ರಧಾನಿ ಮೋದಿ 3.5 ಕ್ವಿಂಟಾಲ್‌ ತೂಕದ ಗಂಟೆ ಬಾರಿಸಿ ನಂತರ ರಾಮ ಜನ್ಮ ಭೂಮಿಯ ಕಡೆ ತೆರಳುತ್ತಾರೆ ಎಂದು ಪ್ರಧಾನ ಅರ್ಚಕರು ತಿಳಿಸಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ರಾಮ ಲಲ್ಲನಿಗೂ ವಿಶೇಷ ಪೂಜೆ ಸಲ್ಲಿಸಿ ನಂತರ ಭೂಮಿ ಪೂಜೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಮಂದಿರ ನಿರ್ಮಾಣದ ಮೂಲಕ ಭಾರತದಲ್ಲಿ ರಾಮ ರಾಜ್ಯ ಸ್ಥಾಪನೆ: ಬಾಬಾ ರಾಮ್‌ದೇವ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ