ಆ್ಯಪ್ನಗರ

ಶಾಂತಿ, ಸಾಮರಸ್ಯ ಕಾಪಾಡಿ: ಕನ್ನಡಿಗರಿಗೆ ಮೋದಿ ಮನವಿ

ತಮಿಳುನಾಡು ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ವಿರುದ್ಧವಾಗಿ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಶಾಂತಿ ಕಾಪಾಡುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

ವಿಕ ಸುದ್ದಿಲೋಕ 13 Sep 2016, 12:26 pm
ಹೊಸದಿಲ್ಲಿ: ತಮಿಳುನಾಡು ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ವಿರುದ್ಧವಾಗಿ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಶಾಂತಿ ಕಾಪಾಡುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.
Vijaya Karnataka Web prime minister narendra modis appeal
ಶಾಂತಿ, ಸಾಮರಸ್ಯ ಕಾಪಾಡಿ: ಕನ್ನಡಿಗರಿಗೆ ಮೋದಿ ಮನವಿ


'ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಉಭಯ ರಾಜ್ಯಗಳ ಜನರು ಕಾನೂನು ಕೈಗೆತ್ತಿಕೊಳ್ಳಬಾರದು. ರಾಜ್ಯಗಳಲ್ಲಿ ಸೃಷ್ಟಿಯಾದ ಪರಿಸ್ಥಿತಿಯಿಂದ ಅಪಾರ ನೋವಾಗಿದೆ. ಯಾವುದೇ ಸಮಸ್ಯೆಗೂ ಹಿಂಸಾಚಾರ ಉತ್ತರವಾಗಲಾರದು. ಶಾಂತಿಯಿಂದ ಇದ್ದು, ಪರಸ್ಪರ ನಡೆಸುವ ಮಾತುಕತೆಯಿಂದ ಮಾತ್ರ ಪ್ರಜಾಪ್ರಭುತ್ವದಲ್ಲಿ ಪರಿಹಾರ ಸಾಧ್ಯ,' ಎಂದು ಮನವರಿಕೆ ಮಾಡಿದ್ದಾರೆ.

'ಕಾನೂನು ಹೋರಾಟದ ಮೂಲಕ ಕಾವೇರಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಆದರೆ, ಕಾನೂನನ್ನು ಕೈಗೆತ್ತಿಕೊಳ್ಳುವುದೇ ನ್ಯಾಯ ಪಡೆಯಲು ಬದಲಿ ವ್ಯವಸ್ಥೆ ಆಗಲಾರದು. ದೇಶವಾಸಿಗಳು ಸೂಕ್ಷ್ಮ ಪರಿಸ್ಥಿತಿಯನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು. ಉಭಯ ರಾಜ್ಯಗಳ ಜನರು ಸಂವೇದನಾ ಶೀಲರಾಗಿ, ನಾಗರಿಕ ಜವಾಬ್ದಾರಿಗಳೆಡೆಗೆ ಗಮನ ಹರಿಸಬೇಕು. ಎಲ್ಲವುಕ್ಕಿಂತಲೂ ಹೆಚ್ಚಾಗಿ ದೇಶ ಕಟ್ಟುವ ಕಾರ್ಯದಲ್ಲಿ ಭಾಗಿಯಾಗಬೇಕು. ಶಾಂತಿ ಕಾಪಾಡಿ, ಸಾಮರಸ್ಯ ಕಾಪಾಡಿ. ಹಿಂಸಾಚಾರ, ಸಾರ್ವಜನಿಕ ಆಸ್ತಿ ಹಾಳು ಮಾಡುವ ಬದಲು ಸಮಸ್ಯೆಗೆ ತಕ್ಕ ಪರಿಹಾರ ಹುಡುಕಲು ಯತ್ನಿಸಿ,' ಎಂದು ಜನರನ್ನು ಅಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ