ಆ್ಯಪ್ನಗರ

ಉಗ್ರದಾಳಿ ಕುರಿತು ಟ್ವೀಟ್ ಮಾಡಿ ಟ್ರೋಲ್‌ಗೆ ಗುರಿಯಾದ ಪ್ರಿಯಾಂಕ ಚೋಪ್ರಾ

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಪುಲ್ವಾಮ ಉಗ್ರದಾಳಿಯ ಕುರಿತು ಮಾಡಿದ ಟ್ವೀಟ್ ವಿವಾದಕ್ಕೆ ಕಾರಣವಾಗಿದ್ದು, ಜನರು ನಟಿಯನ್ನು ತರಾಟೆಗೆ ತಡಗೆದುಕೊಂಡಿದ್ದಾರೆ.

Vijaya Karnataka Web 15 Feb 2019, 10:18 pm
ಬೆಂಗಳೂರು: ಪುಲ್ವಾಮ ಉಗ್ರದಾಳಿಯಲ್ಲಿ ಹುತಾತ್ಮರಾದ ವೀರಯೋಧರಿಗಾಗಿ ದೇಶವೇ ಕಂಬನಿ ಮಿಡಿದಿದ್ದು, ಪಾಪಿ ಪಾಕಿಸ್ತಾನದ ಉಗ್ರರ ವಿರುದ್ಧ ಸೂಕ್ತ ಕ್ರಮಕ್ಕೆ ದೇಶದ ಜನತೆ ಒತ್ತಾಯಿಸಿದ್ದಾರೆ.
Vijaya Karnataka Web priyanka


ಆದರೆ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಪುಲ್ವಾಮ ಉಗ್ರದಾಳಿಯ ಕುರಿತು ಮಾಡಿದ ಟ್ವೀಟ್ ವಿವಾದಕ್ಕೆ ಕಾರಣವಾಗಿದ್ದು, ಜನರು ನಟಿಯನ್ನು ತರಾಟೆಗೆ ತಡಗೆದುಕೊಂಡಿದ್ದಾರೆ.

ಪುಲ್ವಾಮ ದಾಳಿಯ ಬಗ್ಗೆ ಕೇಳಿ ಶಾಕ್ ಆಗಿದೆ. ಆದರೆ ದ್ವೇಷ ಉತ್ತರವಲ್ಲ. ಹುತಾತ್ಮ ಯೋಧರು ಮತ್ತು ಗಾಯಗೊಂಡ ಸಿಆರ್‌ಪಿಎಫ್ ಯೋಧರ ಕುಟುಂಬಕ್ಕೆ ಶಕ್ತಿ ನೀಡಲಿ ಎಂದು ಪ್ರಿಯಾಂಕ ಟ್ವೀಟ್‌ ಮಾಡಿದ್ದಾರೆ.

ಆದರೆ ದ್ವೇಷವೇ ಉತ್ತರವಲ್ಲ ಎಂಬ ಪ್ರಿಯಾಂಕ ಹೇಳಿದ ಒಂದು ವಾಕ್ಯ ಅವರಿಗೇ ಮುಳುವಾಗಿದೆ. ಪ್ರಿಯಾಂಕ ಮನಸ್ಥಿತಿಯನ್ನು ನೆಟ್ಟಿಗರು ಝಾಡಿಸಿದ್ದು, ಸಹೋದರರನ್ನು ಕಳೆದುಕೊಂಡ ದುಃಖದಲ್ಲಿರುವಾಗ ಪ್ರೀತಿ ಮತ್ತು ದ್ವೇಷದ ಉಪದೇಶ ಬೇಕಾಗಿಲ್ಲ ಎಂದಿದ್ದಾರೆ.

ಮತ್ತೊಂದೆಡೆ ದಿಟ್ಟ ಐಪಿಎಸ್ ಅಧಿಕಾರಿ ಡಿ ರೂಪಾ ಅವರು ಪ್ರಿಯಾಂಕ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದು, ಯೋಧರ ಮೇಲಿನ ದಾಳಿ ಕೇವಲ ಪ್ರೀತಿ-ದ್ವೇಷದ ಕಥೆಯಂತಲ್ಲ. ಅದೊಂದು ದೇಶದ ಮೇಲಿನ ದಾಳಿ, ಒಂದು ದೇಶದ ಶಾಂತಿಯುತ ಅಸ್ತಿತ್ವದ ಮೇಲೆ ಅಕ್ರಮ ಶಕ್ತಿಗಳು ನಡೆಸುವ ದಾಳಿ ಎಂದು ಖಡಕ್ ಆಗಿ ಉತ್ತರ ನೀಡಿದ್ದಾರೆ.

ಅಷ್ಟೇ ಅಲ್ಲದೆ ಸಾವಿರಾರು ಮಂದಿ ಪ್ರಿಯಾಂಕ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದು, ಪುಲ್ವಾಮ ಉಗ್ರದಾಳಿ ಬಗ್ಗೆ ತುಟಿಬಿಚ್ಚದ ಬಾಲಿವುಡ್‌ನ ಕೆಲವು ನಟ-ನಟಿಯರ ಬಗೆಗೂ ಖಾರವಾಗಿ ಟೀಕಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ