ಹೊಸದಿಲ್ಲಿ: ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಮಮತಾ ಬ್ಯಾನರ್ಜಿ ಅವರ ಆಪ್ತ ರಾಜೀವ್ ಕುಮಾರ್ ಅವರು ಶಾರದಾ ಚಿಟ್ಫಂಡ್ ಹಗರಣದಲ್ಲಿ ಭಾಗಿಯಾಗಿರುವುದಕ್ಕೆ ಸಾಕಷ್ಟು ಪುರಾವೆಗಳಿದ್ದು, ಯಾವುದೇ ಕ್ಷಣದಲ್ಲಿ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಸಿಬಿಐ ಹೇಳಿಕೊಂಡಿದೆ.
''ರಾಜ್ಯದಲ್ಲಿ ದೊಡ್ಡ ಬಿರುಗಾಳಿಯನ್ನೇ ಸೃಷ್ಟಿಸಿದ್ದ ಬಹುಕೋಟಿ ಹಗರಣದಲ್ಲಿ ರಾಜೀವ್ ಕುಮಾರ್ ಭಾಗಿಯಾಗಿದ್ದಾರೆ ಎನ್ನುವುದಕ್ಕೆ ಮಹತ್ವದ ಪುರಾವೆಗಳುಇ ಲಭಿಸಿವೆ. ಪ್ರಮುಖವಾಗಿ ಹಗರಣದ ಸೂತ್ರಧಾರ ಸುದಿಪ್ತ ಸೇನ್ ಅವರಿಗೆ ನೇರ ವರದಿ ಮಾಡಿಕೊಳ್ಳುತ್ತಿದ್ದ ಶಾರದಾ ಗ್ರೂಪ್ನ ಉದ್ಯೋಗಿಯೊಬ್ಬರ ಜತೆಗೆ ರಾಜೀವ್ ಆರು ಬಾರಿ ನಡೆಸಿದ್ದ ದೂರವಾಣಿ ಸಂಭಾಷಣೆಯ ಮುದ್ರಿಕೆಗಳನ್ನು ಸಂಗ್ರಹಿಸಲಾಗಿದೆ. ಬಂಧನಕ್ಕೆ ತಡೆ ವಿಧಿಸಿ ಸುಪ್ರೀಂ ಕೋರ್ಟ್ ನೀಡಿರುವ 'ರಕ್ಷಣಾ ಅವಧಿ' ಇನ್ನೂ ಆರು ದಿನ ಇದ್ದು, ಆ ಬಳಿಕ ಯಾವುದೇ ಕ್ಷಣದಲ್ಲಿ ರಾಜೀವ್ಕುಮಾರ್ ಬಂಧನವಾಗಬಹುದು,''ಎಂದು ಸಿಬಿಐನ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಆದರೆ, ಆರೋಪಿಗಳ ಜತೆ ಅವರು ನಡೆಸಿದ್ದ ದೂರವಾಣಿ ಸಂಭಾಷಣೆಯು ಯಾವ ಅವಧಿಯದ್ದು ಎನ್ನುವುದರ ಗುಟ್ಟನ್ನು ತನಿಖಾಧಿಕಾರಿಗಳು ಬಿಟ್ಟುಕೊಡಲು ನಿರಾಕರಿಸಿದ್ದಾರೆ.
2012-13ರಲ್ಲಿ ಶಾರದಾ ಚಿಟ್ ಫಂಡ್ ವಂಚನೆ ಹಗರಣ ಬೆಳಕಿಗೆ ಬಂದಿತ್ತು. ಆ ಸಂದರ್ಭದಲ್ಲಿ ರಾಜೀವ್ ಕುಮಾರ್ ಬಿಧಾನ್ನಗರದ ಪೊಲೀಸ್ ಆಯುಕ್ತರಾಗಿದ್ದರು. ಆ ಬಳಿಕ ಹಗರಣದ ತನಿಖೆಗೆ ರಚನೆಯಾದ ವಿಶೇಷ ತನಿಖಾ ತಂಡದ ನೇತೃತ್ವ ವಹಿಸಿದ್ದರು.
ಪಶ್ಚಿಮ ಬಂಗಾಳದ ದೀದಿ ಸರಕಾರದ ಪ್ರಭಾವಿ ಸಚಿವರು ಹಾಗೂ ಶಾಸಕರನ್ನು ಸುತ್ತುವರಿದಿರುವ ಈ ಹಗರಣವನ್ನು ಸಿಬಿಐ ಸವಾಲಾಗಿ ಸ್ವೀಕರಿಸಿದೆ. ಈ ಹಗರಣದ ತನಿಖೆ ಸಿಬಿಐಗೆ ವರ್ಗಗೊಂಡ ಬಳಿಕ ಮಮತಾ ಸರಕಾರದ ಪರ ನಿಂತಿದ್ದ ರಾಜೀವ್ ಕುಮಾರ್, ಸಿಬಿಐ ವಿರುದ್ಧವೇ ಸಡ್ಡು ಹೊಡೆದಿದ್ದರು. ಇದರಿಂದ ಉದ್ಭವಿಸಿದ ಸಂಘರ್ಷದಲ್ಲಿ ರಾಜೀವ್ ಅವರನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಎತ್ತಂಗಡಿ ಮಾಡಲಾಗಿತ್ತು.
''ರಾಜ್ಯದಲ್ಲಿ ದೊಡ್ಡ ಬಿರುಗಾಳಿಯನ್ನೇ ಸೃಷ್ಟಿಸಿದ್ದ ಬಹುಕೋಟಿ ಹಗರಣದಲ್ಲಿ ರಾಜೀವ್ ಕುಮಾರ್ ಭಾಗಿಯಾಗಿದ್ದಾರೆ ಎನ್ನುವುದಕ್ಕೆ ಮಹತ್ವದ ಪುರಾವೆಗಳುಇ ಲಭಿಸಿವೆ. ಪ್ರಮುಖವಾಗಿ ಹಗರಣದ ಸೂತ್ರಧಾರ ಸುದಿಪ್ತ ಸೇನ್ ಅವರಿಗೆ ನೇರ ವರದಿ ಮಾಡಿಕೊಳ್ಳುತ್ತಿದ್ದ ಶಾರದಾ ಗ್ರೂಪ್ನ ಉದ್ಯೋಗಿಯೊಬ್ಬರ ಜತೆಗೆ ರಾಜೀವ್ ಆರು ಬಾರಿ ನಡೆಸಿದ್ದ ದೂರವಾಣಿ ಸಂಭಾಷಣೆಯ ಮುದ್ರಿಕೆಗಳನ್ನು ಸಂಗ್ರಹಿಸಲಾಗಿದೆ. ಬಂಧನಕ್ಕೆ ತಡೆ ವಿಧಿಸಿ ಸುಪ್ರೀಂ ಕೋರ್ಟ್ ನೀಡಿರುವ 'ರಕ್ಷಣಾ ಅವಧಿ' ಇನ್ನೂ ಆರು ದಿನ ಇದ್ದು, ಆ ಬಳಿಕ ಯಾವುದೇ ಕ್ಷಣದಲ್ಲಿ ರಾಜೀವ್ಕುಮಾರ್ ಬಂಧನವಾಗಬಹುದು,''ಎಂದು ಸಿಬಿಐನ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಆದರೆ, ಆರೋಪಿಗಳ ಜತೆ ಅವರು ನಡೆಸಿದ್ದ ದೂರವಾಣಿ ಸಂಭಾಷಣೆಯು ಯಾವ ಅವಧಿಯದ್ದು ಎನ್ನುವುದರ ಗುಟ್ಟನ್ನು ತನಿಖಾಧಿಕಾರಿಗಳು ಬಿಟ್ಟುಕೊಡಲು ನಿರಾಕರಿಸಿದ್ದಾರೆ.
2012-13ರಲ್ಲಿ ಶಾರದಾ ಚಿಟ್ ಫಂಡ್ ವಂಚನೆ ಹಗರಣ ಬೆಳಕಿಗೆ ಬಂದಿತ್ತು. ಆ ಸಂದರ್ಭದಲ್ಲಿ ರಾಜೀವ್ ಕುಮಾರ್ ಬಿಧಾನ್ನಗರದ ಪೊಲೀಸ್ ಆಯುಕ್ತರಾಗಿದ್ದರು. ಆ ಬಳಿಕ ಹಗರಣದ ತನಿಖೆಗೆ ರಚನೆಯಾದ ವಿಶೇಷ ತನಿಖಾ ತಂಡದ ನೇತೃತ್ವ ವಹಿಸಿದ್ದರು.
ಪಶ್ಚಿಮ ಬಂಗಾಳದ ದೀದಿ ಸರಕಾರದ ಪ್ರಭಾವಿ ಸಚಿವರು ಹಾಗೂ ಶಾಸಕರನ್ನು ಸುತ್ತುವರಿದಿರುವ ಈ ಹಗರಣವನ್ನು ಸಿಬಿಐ ಸವಾಲಾಗಿ ಸ್ವೀಕರಿಸಿದೆ. ಈ ಹಗರಣದ ತನಿಖೆ ಸಿಬಿಐಗೆ ವರ್ಗಗೊಂಡ ಬಳಿಕ ಮಮತಾ ಸರಕಾರದ ಪರ ನಿಂತಿದ್ದ ರಾಜೀವ್ ಕುಮಾರ್, ಸಿಬಿಐ ವಿರುದ್ಧವೇ ಸಡ್ಡು ಹೊಡೆದಿದ್ದರು. ಇದರಿಂದ ಉದ್ಭವಿಸಿದ ಸಂಘರ್ಷದಲ್ಲಿ ರಾಜೀವ್ ಅವರನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಎತ್ತಂಗಡಿ ಮಾಡಲಾಗಿತ್ತು.