ಹೊಸದಿಲ್ಲಿ: ಪ್ರವಾದಿ ಮಹಮ್ಮದ್ ಕುರಿತಾದ ವಿವಾದಾತ್ಮಕ ಟ್ವೀಟ್ಗೆ ಸಂಬಂಧಿಸಿದಂತೆ ಪಕ್ಷದಿಂದ ಉಚ್ಛಾಟನೆಯಾಗಿರುವ ದಿಲ್ಲಿ ಬಿಜೆಪಿ ಮಾಧ್ಯಮ ಘಟಕದ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್, ತಮ್ಮ ಕುಟುಂಬವು ಇಸ್ಲಾಮಿಕ್ ಮೂಲಭೂತವಾದಿಗಳ ದಾಳಿಗೆ ಒಳಗಾಗುವ ಅಪಾಯದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. "ನನ್ನ ಮತ್ತು ನನ್ನ ಕುಟುಂಬದ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದಂತೆ ನಾನು ವಿನಮ್ರತೆಯಿಂದ ಎಲ್ಲರಿಗೂ ಮನವಿ ಮಾಡುತ್ತೇನೆ. ನನ್ನ ಮನವಿಗಳ ಮಧ್ಯೆಯೂ, ಅನೇಕ ಜನರು ನನ್ನ ಮನೆಯ ವಿಳಾಸವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇಸ್ಲಾಮಿಕ್ ಮೂಲಭೂತವಾದಿಗಳಿಂದ ನನ್ನ ಕುಟುಂಬ ಬೆದರಿಕೆ ಎದುರಿಸುತ್ತಿದೆ" ಎಂದು ನವೀನ್ ಜಿಂದಾಲ್ ಅವರು ಶನಿವಾರ ಟ್ವೀಟ್ ಮಾಡಿದ್ದಾರೆ.
ತಮಗೆ ಎಲ್ಲಿಂದ ಬೆದರಿಕೆಗಳು ಬಂದಿವೆಯೋ ಆ ನಂಬರ್ನ ಸ್ಕ್ರೀನ್ಶಾಟ್ ಅನ್ನು ಕೂಡ ನವೀನ್ ಜಿಂದಾಲ್ ಹಂಚಿಕೊಂಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ದಿಲ್ಲಿ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಪ್ರವಾದಿ ಮಹಮ್ಮದ್ ಕುರಿತು ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ, ಟೆಲಿವಿಷನ್ ಚರ್ಚೆಯಲ್ಲಿ ಹೇಳಿಕೆ ನೀಡಿದ ಬೆನ್ನಲ್ಲೇ, ನವೀನ್ ಜಿಂದಾಲ್ ಟ್ವೀಟ್ ಮಾಡಿದ್ದರು. ಇದು ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿತ್ತು. ಇಸ್ಲಾಮಿಕ್ ದೇಶಗಳು ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದವು. ಇದರ ಬಳಿಕ ಜಿಂದಾಲ್ ಅವರನ್ನು ಪಕ್ಷದಿಂದ ಕಳೆದ ವಾರ ಉಚ್ಛಾಟನೆ ಮಾಡಲಾಗಿತ್ತು.
ತಮ್ಮನ್ನು 'ಹೆಮ್ಮೆಯ ಹಿಂದೂ' ಎಂದು ಹೇಳಿಕೊಂಡಿರುವ ಜಿಂದಾಲ್, ತಮ್ಮ ಕುಟುಂಬದ ಸುರಕ್ಷತೆಯನ್ನು ಖಾತರಿಪಡಿಸುವುದು ಈ ಸಂದರ್ಭದಲ್ಲಿ ತಮ್ಮ ಮುಖ್ಯ ಕಳವಳವಾಗಿದೆ ಎಂದಿದ್ದರು. ಮಾಜಿ ಪತ್ರಕರ್ತರಾಗಿರುವ ಜಿಂದಾಲ್ ಅವರು, ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಪೋಸ್ಟ್ಗಳ ಮೂಲಕ ಹಿಂದೆಯೂ ವಿವಾದಕ್ಕೆ ಒಳಗಾಗಿದ್ದರು.
ತಮಗೆ ಎಲ್ಲಿಂದ ಬೆದರಿಕೆಗಳು ಬಂದಿವೆಯೋ ಆ ನಂಬರ್ನ ಸ್ಕ್ರೀನ್ಶಾಟ್ ಅನ್ನು ಕೂಡ ನವೀನ್ ಜಿಂದಾಲ್ ಹಂಚಿಕೊಂಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ದಿಲ್ಲಿ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಪ್ರವಾದಿ ಮಹಮ್ಮದ್ ಕುರಿತು ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ, ಟೆಲಿವಿಷನ್ ಚರ್ಚೆಯಲ್ಲಿ ಹೇಳಿಕೆ ನೀಡಿದ ಬೆನ್ನಲ್ಲೇ, ನವೀನ್ ಜಿಂದಾಲ್ ಟ್ವೀಟ್ ಮಾಡಿದ್ದರು. ಇದು ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿತ್ತು. ಇಸ್ಲಾಮಿಕ್ ದೇಶಗಳು ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದವು. ಇದರ ಬಳಿಕ ಜಿಂದಾಲ್ ಅವರನ್ನು ಪಕ್ಷದಿಂದ ಕಳೆದ ವಾರ ಉಚ್ಛಾಟನೆ ಮಾಡಲಾಗಿತ್ತು.
ತಮ್ಮನ್ನು 'ಹೆಮ್ಮೆಯ ಹಿಂದೂ' ಎಂದು ಹೇಳಿಕೊಂಡಿರುವ ಜಿಂದಾಲ್, ತಮ್ಮ ಕುಟುಂಬದ ಸುರಕ್ಷತೆಯನ್ನು ಖಾತರಿಪಡಿಸುವುದು ಈ ಸಂದರ್ಭದಲ್ಲಿ ತಮ್ಮ ಮುಖ್ಯ ಕಳವಳವಾಗಿದೆ ಎಂದಿದ್ದರು. ಮಾಜಿ ಪತ್ರಕರ್ತರಾಗಿರುವ ಜಿಂದಾಲ್ ಅವರು, ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಪೋಸ್ಟ್ಗಳ ಮೂಲಕ ಹಿಂದೆಯೂ ವಿವಾದಕ್ಕೆ ಒಳಗಾಗಿದ್ದರು.